Featured

ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲ್ ಉದಯಕುಮಾರ್ ಶೆಟ್ಟಿ ಆಸ್ತಿ ವಿವರ – vishwanews24

ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲ್ ಉದಯಕುಮಾರ್ ಶೆಟ್ಟಿ ಆಸ್ತಿ ವಿವರ

ಉಡುಪಿ,: ಇದೇ ಮೊದಲ ಬಾರಿಗೆ ಕಾರ್ಕಳದಿಂದ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿರುವ ಮುನಿಯಾಲು ಉದಯಕುಮಾರ್ ಶೆಟ್ಟಿ (49) ಅವರು ಒಟ್ಟು 38.43 ಕೋಟಿ ರೂ. ಘೋಷಿತ ಆದಾಯ ಹೊಂದಿದ್ದಾರೆ.

ಉದಯ ಕುಮಾರ್ ಶೆಟ್ಟಿ ಅವರು 31.83 ಕೋಟಿ ರೂ. ಚರಾಸ್ಥಿಯನ್ನು ಹೊಂದಿದ್ದರೆ, 6.60 ಕೋಟಿ ರೂ. ಸ್ಥಿರಾಸ್ಥಿಯನ್ನು ಸಹ ಹೊಂದಿದ್ದಾರೆ ಎಂದು ಚುನಾವಣಾಧಿಕಾರಿಗೆ ಸಲ್ಲಿಸಿದ ಅಫಿದಾವತ್‌ನಲ್ಲಿ ತಿಳಿಸಿದ್ದಾರೆ. ಇದರೊಂದಿಗೆ ಅವರು 7.45 ಕೋಟಿ ರೂ. ಸಾಲವನ್ನು ಸಹ ಹೊಂದಿದ್ದಾರೆ.

ಉದಯ ಅವರ ಪತ್ನಿ ಅವರ ಒಟ್ಟು ಆದಾಯ 24.16 ಕೋಟಿ ರೂ. ಆಗಿದ್ದು, ಇದರಲ್ಲಿ ಚರಾಸ್ಥಿ ಮೌಲ್ಯ 12.28 ಕೋಟಿ ರೂ. ಆದರೆ, ಸ್ಥಿರಾಸ್ಥಿ ಮೌಲ್ಯ 11.88 ಕೋಟಿ ರೂ.ಗಳಾಗಿವೆ. ಇದರೊಂದಿಗೆ ಪತ್ನಿ ಹೆಸರಿನಲ್ಲಿ 2.94 ಕೋಟಿ ರೂ. ಸಾಲವೂ ಇದೆ. ಉದಯ ಶೆಟ್ಟಿ ಅವರ ಇಬ್ಬರು ಅವಲಂಬಿತ ಮಕ್ಕಳ ಹೆಸರಿನಲ್ಲಿ 45.29 ಲಕ್ಷ ಹಾಗೂ 31.96 ಲಕ್ಷ ರೂ. ಆದಾಯವನ್ನು ತೋರಿಸಲಾಗಿದೆ.

ಸರಕಾರದಿಂದ ಬಾಕಿ 26 ಕೋಟಿ ರೂ. ಪಿಡಬ್ಲ್ಯುಡಿಯಲ್ಲಿ ಕ್ಲಾಸ್ 1 ಗುತ್ತಿಗೆದಾರರಾಗಿರುವ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರಿಗೆ ಸರಕಾರದಿಂದ ಬರಬೇಕಾದ ಸಾಲದ ಮೊತ್ತ 26.15 ಕೋಟಿ ರೂ. ಎಂದು ತೋರಿಸಲಾಗಿದೆ.

ಈ ಸಾಲ 2013-14ನೇ ಸಾಲಿನಿಂದ 2019-20ರವೆರೆಗೆ ಉದಯ ಶೆಟ್ಟಿ ಅವರು ಮಾಡಿದ ಸರಕಾರದ ಕಾಮಗಾರಿಗೆ ನೀಡಬೇಕಾದ ಗುತ್ತಿಗೆ ಮೊತ್ತವಾಗಿದೆ. 2013-14ರಲ್ಲಿ 22.95ಲಕ್ಷರೂ., 2014-15ರಲ್ಲಿ 1.40 ಕೋಟಿ ರೂ., 2015-16ರಲ್ಲಿ 53.98ಲಕ್ಷ ರೂ., 2016-17ರಲ್ಲಿ 49.49 ಲಕ್ಷ ರೂ., 2017-18ರಲ್ಲಿ 14.54 ಕೋಟಿ ರೂ., 2018- 19ರಲ್ಲಿ 8.72 ಕೋಟಿ ರೂ. ಹಾಗೂ 2019-20ರಲ್ಲಿ 21.96 ಲಕ್ಷ ರೂ. ಗುತ್ತಿಗೆ ಬಾಕಿ ಉದಯ ಶೆಟ್ಟಿ ಅವರಿಗೆ ಸರಕಾರದಿಂದ ಬರಬೇಕಾಗಿದೆ. ಈ ಸಾಲವನ್ನು ವಿವಾದಿತ ಸಾಲ ಎಂದು ಕರೆಯಲಾಗಿದೆ.

Vishwa News 24

Recent Posts

ಉಡುಪಿ : ಆ. 20 ರಂದು ನೇರ ಸಂದರ್ಶನ -vishwanews24

ಉಡುಪಿ : ಆ. 20 ರಂದು ನೇರ ಸಂದರ್ಶನ ಉಡುಪಿ : ನಗರದ ಅಂಬಲಪಾಡಿ ಕರಾವಳಿ ಬೈಪಾಸ್ ಬಳಿಯ ರೀಗಲ್…

3 hours ago

ಉಡುಪಿ: ಗೃಹ ಜ್ಯೋತಿ ಫಲಾನುಭವಿಗಳು ಮರುಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಿ: ರಮೇಶ್ ಕಾಂಚನ್ -vishwanews24

ಉಡುಪಿ: ಗೃಹ ಜ್ಯೋತಿ ಫಲಾನುಭವಿಗಳು ಮರುಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಿ: ರಮೇಶ್ ಕಾಂಚನ್ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆಗಳ ಮರುಪರಿಶೀಲನೆಗೆ…

3 hours ago

ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹ: ಆ.22ರಂದು ಉಡುಪಿಯಲ್ಲಿ ಸಭೆ -vishwanews24

ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹ: ಆ.22ರಂದು ಉಡುಪಿಯಲ್ಲಿ ಸಭೆ ಉಡುಪಿ: ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ…

3 hours ago

ಉಡುಪಿ: ಗಣಪತಿ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಹೆಚ್ಚುವರಿ ಸಂಚಾರ -vishwanews24

ಉಡುಪಿ: ಗಣಪತಿ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಹೆಚ್ಚುವರಿ ಸಂಚಾರ ಉಡುಪಿ: ಗಣಪತಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಬೇಡಿಕೆಗೆ ಅನುಸಾರ…

3 hours ago

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ -vishwanews24

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೈತ್ಯ ಗಾತ್ರದ ಅಲೆಗೆ…

1 day ago

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ -vishwanews24

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ ಬೆಂಗಳೂರು : ನಟಿ ಅನುಪಮಾ ಗೌಡ ಅವರು ನಟನೆಯ ಮೂಲಕ…

1 day ago