ಕಾರ್ಕಳ : ಜ.16ರಿಂದ ಜ.27 ರವರೆಗೆ ಅತ್ತೂರು ಜಾತ್ರೆ – Vishwanews24
ಕಾರ್ಕಳ : ಜ.16ರಿಂದ ಜ.27ರವರೆಗೆ ಅತ್ತೂರು ಜಾತ್ರೆ – Vishwanews24
ಉಡುಪಿ: ಕಾರ್ಕಳದ ಐತಿಹಾಸಿಕ ಅತ್ತೂರಿನ ಸಂತ ಲೊರೆನ್ಸ್ ಬಸಿಲಿಕಾದ ವಾರ್ಷಿಕ ಮಹಾಹಬ್ಬ ಜ.16ರಿಂದ ಜ.27ರವರೆಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಅ.16ರ ಆದಿತ್ಯವಾರ 7.30ರಿಂದ ಬಲಿಪೂಜೆಗಳು ಆರಂಭವಾಗಲಿದೆ.
ಜ.23ರಂದು ಬೆಳಿಗ್ಗೆ 11 ಗಂಟೆಗೆ ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷ ಲೂವಿಸ್ ಪಾವ್ಲ್ ಸೋಜ್, ಜ.26ರಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಬಲಿಪೂಜೆಯಲ್ಲಿ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ್ಯ ಜೆರಾಲ್ಡ್ ಐಸಾಕ್ ಲೋಬೊ, ಜ.27ರ ಬೆಳಿಗ್ಗೆ 10 ಗಮಟೆಯ ಬಲಿಪೂಜೆಯಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಪೀಟರ್ ಪಾವ್ಲ್ ಡಿ’ಸೋಜ ಬಲಿಪೂಜೆ ನಡೆಸಲಿದ್ದಾರೆ.
ವಾರ್ಷಿಕ ಮಹಾಹಬ್ಬಕ್ಕೆ ಬರುವ ಭಕ್ತಾದಿಗಳು ಕೋವಿಡ್ ನಿಯಮ ಪಾಲಿಸುವಂತೆ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

