Featured

ಕಾರ್ಕಳ: ಪರಶುರಾಮನ ಪ್ರತಿಮೆ ; ಜನತೆಗೆ ನಿರಂತರ ಸುಳ್ಳು ಹೇಳುತ್ತಿದ್ದ ಶಾಸಕರ ನಿಜ ಬಣ್ಣ ಪೋಲೀಸ್ ತನಿಖೆಯಿಂದ ಬಯಲು : ಶುಭದರಾವ್‌ – vishwanews24

ಕಾರ್ಕಳ:ಶಾಸಕರ  ರಾಜೀನಾಮೆಗೆ ಆಗ್ರಹಿಸಿ ಬೃಹತ್ ಪಾದಯಾತ್ರೆಗೆ ಸಿದ್ಧತೆ :ಶುಭದರಾವ್‌

ಕಾರ್ಕಳ: ಪರಶುರಾಮನ ಕಂಚಿನ ಪ್ರತಿಮೆ ವಿಚಾರವಾಗಿ ಜನತೆಗೆ ನಿರಂತರ ಸುಳ್ಳು ಹೇಳುತ್ತಿದ್ದ ಶಾಸಕರ ನಿಜ ಬಣ್ಣ ಪೋಲೀಸ್ ತನಿಖೆಯಿಂದ ಬಯಲಾಗಿದೆ, ಅಂದಿನ ಮುಖ್ಯಮಂತ್ರಿ ಬೊಮ್ಮಾಯಿಯವರು ಉದ್ಘಾಟಿಸಿದ್ದ ಪ್ರತಿಮೆ ಕಂಚಿನದ್ದು ಅಲ್ಲ ಎಂಬುದು ಪೋಲೀಸರು ಬೆಂಗಳೂರಿನಲ್ಲಿ ವಶಪಡಿಸಿಕೊಂಡ ಬಿಡಿ ಭಾಗಗಳಿಂದ ಬಹಿರಂಗವಾಗಿದೆಂದು ಎಂದು ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದರಾವ್‌ ತಿಳಿಸಿದ್ದಾರೆ.

ಬೆಟ್ಟದ ಮೇಲೆ ಎರಡು ಕಾಲುಗಳ ಮೇಲೆ ಅರ್ಧ ಭಾಗ ನಿಂತಿರುವಾಗ ವಶಪಡಿಸಿಕೊಂಡಿರುವ ಬಿಡಿ ಭಾಗಗಳಲ್ಲೂ ಎರಡು ಕಾಲು ಇದ್ದು ಪ್ರತಿಮೆಗೆ ನಾಲ್ಕು ಕಾಲು ಇರಲು ಹೇಗೆ ಸಾದ್ಯ ಎಂಬ ಪ್ರಶ್ನೆ ಮೂಡಿದೆ.
ಈ ಎಲ್ಲಾ ವಿಚಾರವಾಗಿ ಮೊದಲಿನಿಂದಲೂ ಜನತೆಗೆ ನಿರಂತರ ಸುಳ್ಳು ಹೇಳುತ್ತಾ ಬಂದಿರುವ ಶಾಸಕರು ಮಾಡಿರುವುದು ಧರ್ಮ ದ್ರೋಹದ ಕೆಲಸವಾಗಿದೆ ಅವರು ಇನ್ನಾದರೂ ತನ್ನೊಪ್ಪಿಕೊಂಡು ಕ್ಷಮೆಯಾಚಿಸ ಬೇಕೆಂದು ಮತ್ತು ಅವರ ತಕ್ಷಣ ರಾಜೀನಾಮೆಗೆ ಆಗ್ರಹಿಸಿ ಬೃಹತ್ ಪಾದಯಾತ್ರೆಗೆ ಸಿದ್ಧತೆ ನಡೆಸಲಾಗುವುದು ಶುಭದರಾವ್ ಹೇಳಿದ್ದಾರೆ.

ಪ್ರತಿಮೆ ನಕಲಿ ಎಂದು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇವೆ, ಪ್ರತಿಮೆ ಪೂರ್ಣಗೊಂಡ ಬಗ್ಗೆಯಾಗಲಿ, ಅಲ್ಲಿಂದ ಇಲ್ಲಿಗೆ ತಂದಿರುವ ಬಗ್ಗೆಯಾಗಲಿ ಯಾವುದೇ ದಾಖಲೆಗಳು ಯಾರ ಬಳಿಯೂ ಇಲ್ಲ, ಚುನಾವಣೆಯ ದೃಷ್ಟಿಯಿಂದ ತುರಾತುರಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ ಪ್ರತಿಮೆ ನಿರ್ಮಾಣವಾಗದ ಕಾರಣ ಪೈಬರ್ ಪ್ರತಿಮೆಯನ್ನು ತಂದು ಉದ್ಘಾಟಿಸಲಾಗಿದೆ, ಅದರ ನಿಜ ಬಣ್ಣ ಬಯಲಾದಾಗ ರಾತ್ರಿಯಲ್ಲಿ ಅದನ್ನು ಕೊಂಡೊಯ್ದು ಪ್ರತಿಮೆಯ ರೂಪ ಬದಲಾವಣೆ ಇದೆ ಎಂದು ನಂಬಿಸಲಾಗಿದೆ. ಈಗ ವಶಪಡಿಸಿಕೊಂಡಿರುವ ಭಾಗಗಳು ಉದ್ಘಾಟನೆಯ ನಂತರ ತಯಾರಾದ ಭಾಗಗಳು ಎಂದು ಅಲ್ಲಿ ಸಿಕ್ಕಿರುವ ನಾಲ್ಕು ಕಾಲುಗಳಿಂದ ಸಾಬೀತಾಗಿದೆ, ಒಂದು ವೇಳೆ ಈಗ ಬೆಟ್ಟದ ಮೇಲಿರುವ ಪ್ರತಿಮೆ ಕಂಚಿದ್ದೇ ಆಗಿದ್ದರೆ ಮತ್ತೊಮ್ಮೆ ಕಾಲುಗಳನ್ನು ತಯಾರಿಸುವ ಅಗತ್ಯವಿತ್ತೇ ಎಂದು ಪ್ರಶ್ನಿಸಿ ಪ್ರತಿಮೆಯ ಮುಖದ ಭಾಗ ಸಂಪೂರ್ಣ ಬದಲಾಗಿದ್ದು ಅಂದಿನ ಮುಖಕ್ಕೆ ಹೋಲಿಕೆಯೇ ಇಲ್ಲ ಇದು ನಕಲಿ ಪ್ರತಿಮೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿಯಾಗಿದೆ ಎಂದಿದ್ದಾರೆ.

ಪ್ರತಿಮೆ ನಿರ್ಮಾತ ಕೃಷ್ಣನಾಯ್ಡ್ ಮಹಾನ್ ಸುಳ್ಳುಗಾರ ಇಲ್ಲವಾದರೆ ನ್ಯಾಯಾಲಯದಿಂದ ತಡೆಯಾಜ್ಞೆ ತರುವ ಅಗತ್ಯವೇನಿದೆ, ಈಗ ಜಾತಿ ಮತ್ತು ಧರ್ಮವನ್ನು ಎಳೆದು ತಂದು ಕೋಮು ಗಲಭೆಯ ಹುನ್ನಾರ ನಡೆಸುತ್ತಿದ್ದಾರೆ ಅವರ ವಿರುದ್ಧ ದೂರು ದಾಖಲಿಸಲಾಗುವುದು.

ಸತ್ಯವನ್ನು ಎಷ್ಟೇ ಮುಚ್ಚಿಟ್ಟರೂ ಅದು ಬಹಿರಂಗವಾಗಲೇ ಬೇಕು, ಸತ್ಯಾಸತ್ಯತೆಯನ್ನು ತಿಳಿಸುವ ಪ್ರಯತ್ನಪಟ್ಟಾಗ ಕಾಂಗ್ರೇಸ್ ಕಾರ್ಯಕರ್ತರ ಮೇಲೆ ಪೋಲೀಸ್ ಕೇಸು ದಾಖಲಿಸಿ ಬೆದರಿಸಲಾಯಿತು, ಅನ್ಯಾಯದ ವಿರುದ್ಧ ಮಾತನಾಡಿದವರನ್ನು ಅವಮಾನಿಸಲಾಯಿತು, ಅದರೆ ಸತ್ಯಕ್ಕೆ ಗೆಲುವಿದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vishwa News 24

Recent Posts

ಉಡುಪಿ: ನಿರಂತರ ಮಳೆ ; ಜಿಲ್ಲೆಯ ಪ್ರಾಥಮಿಕ- ಪ್ರೌಢ ಶಾಲೆಗಳಿಗೆ ಆ.04 (ನಾಳೆ) ರಂದು ರಜೆ ಘೋಷಣೆ -vishwanews24

ಉಡುಪಿ: ನಿರಂತರ ಮಳೆ ; ಜಿಲ್ಲೆಯ ಪ್ರಾಥಮಿಕ- ಪ್ರೌಢ ಶಾಲೆಗಳಿಗೆ ಆ.04 (ನಾಳೆ) ರಂದು ರಜೆ ಘೋಷಣೆ ಉಡುಪಿ ಜಿಲ್ಲೆಯಾದ್ಯಂತ…

4 hours ago

ಉಳ್ಳಾಲ :ಲೈನ್ ಆಫ್ ಮಾಡದೆ ಟ್ರಾನ್ಸ್ ಫಾರ್ಮರ್ ಏರಿದ ಲೈನ್ ಮೆನ್; ವಿದ್ಯುತ್‌ ಪ್ರವಹಿಸಿ ಸಾವು – vishwanews24

ಉಳ್ಳಾಲ :ಲೈನ್ ಆಫ್ ಮಾಡದೆ ಟ್ರಾನ್ಸ್ ಫಾರ್ಮರ್ ಏರಿದ ಲೈನ್ ಮೆನ್; ವಿದ್ಯುತ್‌ ಪ್ರವಹಿಸಿ ಸಾವು ಉಳ್ಳಾಲ : ಜಿಒಎಸ್…

10 hours ago

ಸಚಿವ ಸಂಪುಟ ವಿಸ್ತರಣೆ: ಎಸ್.ಮಲ್ಲಿಕಾರ್ಜುನ್ ಸೇರ್ಪಡೆ ; ಮಂಕಾಳ ವೈದ್ಯ ಹೆಸರು ಕೈಬಿಟ್ಟ ಎಐಸಿಸಿ – vishwanews24

ಸಚಿವ ಸಂಪುಟ ವಿಸ್ತರಣೆ: ಎಸ್.ಮಲ್ಲಿಕಾರ್ಜುನ್ ಸೇರ್ಪಡೆ ; ಮಂಕಾಳ ವೈದ್ಯ ಹೆಸರು ಕೈಬಿಟ್ಟ ಎಐಸಿಸಿ ಬೆಂಗಳೂರು: ಕರ್ನಾಟಕ ಸಚಿವ ಸಂಪುಟ…

10 hours ago

ರೈಲ್ವೆ ಪ್ರಯಾಣಿಕರ ಗಮನಕ್ಕೆ : ಮಂಗಳೂರು-ಬೆಂಗಳೂರು ಹಲವು ರೈಲುಗಳ ಸಂಚಾರ ಬಂದ್ -vishwanews24

ಮಂಗಳೂರು-ಬೆಂಗಳೂರು ರೈಲು ಪ್ರಯಾಣಿಕರೇ ಗಮನಿಸಿ: ಹಲವು ರೈಲುಗಳ ಸಂಚಾರ ಬಂದ್ ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಎಡಕುಮೇರಿ ಮತ್ತು ಶಿರಿಬಾಗಿಲು…

11 hours ago

ಪಡುಬಿದ್ರಿ: ಹೆಜಮಾಡಿ ಟೋಲ್ ಗೇಟ್ ವಿರುದ್ಧ ಪ್ರತಿಭಟನೆ ; ಟೋಲ್ ಗೇಟನ್ನು ತಕ್ಷಣ ತೆರವುಗೊಳಿಸಬೇಕೆಂದು ಆಗ್ರಹ – vishwanews24

ಪಡುಬಿದ್ರಿ: ಹೆಜಮಾಡಿ ಟೋಲ್ ಗೇಟ್ ವಿರುದ್ಧ ಪ್ರತಿಭಟನೆ .. ಟೋಲ್ ಗೇಟ ನ್ನು ತಕ್ಷಣ ತೆರವುಗೊಳಿಸಬೇಕು ಎಂದು ಆಗ್ರಹ 15…

2 days ago

ಪೊಲೀಸ್ ಕಾನ್ಸ್ ಟೇಬಲ್ ಪರೀಕ್ಷೆ: ಹಿಜಾಬ್ ಧರಿಸಲು ಅವಕಾಶ ಇಲ್ಲ : ಧಾರ್ಮಿಕ ಉಡುಪುಗಳ ಗೊಂದಲ ಬಗ್ಗೆ ಪ್ರಿಯಾಂಕ ಖರ್ಗೆ ಸ್ಪಷ್ಟನೆ – vishwanews24

ಪೊಲೀಸ್ ಕಾನ್ಸ್ ಟೇಬಲ್ ಪರೀಕ್ಷೆ: ಹಿಜಾಬ್ ಧರಿಸಿ ಪರೀಕ್ಷೆ ಬರೆಯುವಂತಿಲ್ಲ : ಪ್ರಿಯಾಂಕ ಖರ್ಗೆ ಸ್ಪಷ್ಟನೆ ಬೆಂಗಳೂರು: ಕರ್ನಾಟಕದ ಪೊಲೀಸ್…

2 days ago