ಕಾಶ್ಮೀರದಿಂದ ಶಬರಿಮಲೆಗೆ ಪಾದಯಾತ್ರೆ : ಮಂಗಳೂರಿನಲ್ಲಿ ಅಯ್ಯಪ್ಪ ಮಾಲಾಧಾರಿಗಳಿಂದ ಸ್ವಾಗತ – Vishwanews24
ಕಾಶ್ಮೀರದಿಂದ ಶಬರಿಮಲೆಗೆ ಪಾದಯಾತ್ರೆ -ಮಂಗಳೂರಿನಲ್ಲಿ ಅಯ್ಯಪ್ಪ ಮಾಲಾಧಾರಿಗಳಿಂದ ಸ್ವಾಗತ
ಮಂಗಳೂರು : ಮಂಗಳೂರು ಮೂಲದ ಪ್ರಭಾತ್ ಕುಮಾರ್ ಕರಿಯಪ್ಪ ಅವರು ಜಮ್ಮು ಕಾಶ್ಮೀರದಿಂದ ಶಬರಿಮಲೆಗೆ ಪಾದಯಾತ್ರೆ ಕೈಗೊಂಡಿದ್ದಾರೆ. ಜಮ್ಮುವಿನ ವೈಷ್ಣೋದೇವಿಯಿಂದ ಪಾದಯಾತ್ರೆ ಆರಂಭಿಸಿದ್ದು, ಇದೀಗ ಪಾದಯಾತ್ರೆ ಮೂಲಕ ಮಂಗಳೂರಿಗೆ ಆಗಮಿಸಿದರು.

ಮಂಗಳೂರಿನಲ್ಲಿ ಹೌಸ್ ನರ್ಸಿಂಗ್ ಕೆಲಸ ಮಾಡುತ್ತಿದ್ದ ಪ್ರಭಾತ್ ಕುಮಾರ್ ವಿಮಾನದ ಮೂಲಕ ಜಮ್ಮುವಿನ ವೈಷ್ಣೋದೇವಿಗೆ ತೆರಳಿದ್ದರು. ಆಗಸ್ಟ್ 31 ರಿಂದ ಪಾದಯಾತ್ರೆ ಆರಂಭಿಸಿದ ಅವರು 108 ದಿನ ಕ್ರಮಿಸಿ ಇಂದು ಮಂಗಳೂರು ತಲುಪಿದರು. ಈ ಸಂದರ್ಭದಲ್ಲಿ ಮಂಗಳೂರಿನ ಅಯ್ಯಪ್ಪ ಮಾಲಾಧಾರಿಗಳು ಅವರಿಗೆ ಆತ್ಮೀಯವಾಗಿ ಸ್ವಾಗತ ಕೋರಿದರು.
ಉಡುಪಿ: ಮೂರು ದಿನಗಳಿಂದ ಗ್ರಾಮಸ್ಥರ ನಿದ್ದೆಗೆಡಿಸಿದ ಚಿರತೆ ಬೋನಿಗೆ – Vishwanews24
70 ಲಕ್ಷ ಜೀವ ರಾಶಿಗಳಿಗೆ ಸುಖ ಶಾಂತಿ ನೆಮ್ಮದಿ, ಮುಕ್ತಿ ನೀಡುವ ಬೇಡಿಕೆಯೊಂದಿಗೆ ತಾವು ಶಬರಿಮಲೆಗೆ ಪಾದಯಾತ್ರೆ ಕೈಗೊಂಡಿರುವುದಾಗಿ ಮಾಲಾಧಾರಿಯೂ ಆಗಿರುವ ಪ್ರಭಾತ್ ಕುಮಾರ್ ಹೇಳಿದರು.
