ಕುಂದಾಪುರ: ದೇವಸ್ಥಾನದಿಂದ ಕಳವು ಪ್ರಕರಣ : ಆರೋಪಿಗೆ ಜಾಮೀನು ಮಂಜೂರು – Vishwanews24

Featured, ಉಡುಪಿ

ಕುಂದಾಪುರ: ದೇವಸ್ಥಾನದಿಂದ ಕಳವು ಪ್ರಕರಣ : ಆರೋಪಿಗೆ ಜಾಮೀನು ಮಂಜೂರು

ಕುಂದಾಪುರ: ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರವಂತೆ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನದ ಕಳವು ಪ್ರಕರಣಗಳ ಆರೋಪಿ ಕರುಣಾಕರ್ ದೇವಾಡಿಗ ಅವರಿಗೆ ನಗರದ ಪ್ರಧಾನ ಸಿವಿಲ್ ಮತ್ತು ಪ್ರಥಮ ದರ್ಜೆ ದಂಡಾಧಿಕಾರಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಮರವಂತೆಯಲ್ಲಿ ಆರೋಪಿಗಳು ಕುಡುಗೋಲಿನಿಂದ ದೇಗುಲದ ಬೀಗ ಒಡೆದು ಒಳ ಹೋಗುತ್ತಿರುವುದು ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕರುಣಾಕರ ದೇವಾಡಿಗ ಬಂಧನದ ನಂತರ ಬೇರೆ ದೇವಸ್ಥಾನಗಳಿಂದಲೂ ವಸ್ತುಗಳನ್ನು ಕದ್ದಿರುವುದಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು.

ಆರೋಪಿಗಳ ಪರ ವಕೀಲರಾದ ಕೆ.ಎಂ.ಇಲ್ಯಾಸ್ ಹಾಗೂ ಮುಳ್ಳಿಕಟ್ಟೆ ಚರಣರಾಜ್ ಮೆಂಡನ್ ವಾದ ಮಂಡಿಸಿದ್ದರು.

ಮಂಡ್ಯ ಹನಿಟ್ರ್ಯಾಪ್ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ .. ಜಗನ್ನಾಥ್ ಶೆಟ್ಟಿ ಕೊಟ್ಟ ದೂರು ಸುಳ್ಳು, ವೀಡಿಯೋದಲ್ಲಿರುವುದು ಸುಳ್ಳು – Vishwanews24

Leave a Reply