Featured

ಕುಂದಾಪುರ : ಹಿಂದೂ ಸಂಘಟನೆಯ ಕಾರ್ಯಕರ್ತನಿಗೆ ಗೃಹ ನಿರ್ಮಿಸಿಕೊಟ್ಟ ಗೋವಿಂದ ಬಾಬು ಪೂಜಾರಿ – Vishwanews24

ಹಿಂದೂ ಸಂಘಟನೆಯ ಕಾರ್ಯಕರ್ತನಿಗೆ ಗೃಹ ನಿರ್ಮಿಸಿಕೊಟ್ಟ ಗೋವಿಂದ ಬಾಬು ಪೂಜಾರಿ

ಒಟ್ಟು ಇದುವರೆಗೆ ಬಡವರಿಗೆ ಹನ್ನೊಂದು ಮನೆ ನಿರ್ಮಿಸಿಕೊಟ್ಟ ಪುಣ್ಯಾತ್ಮ

ಕುಂದಾಪುರ: ಜ್ಞಾನಕ್ಕೆ ಜಾತಿ ಅಡ್ಡಿ ಬರುವುದಿಲ್ಲ, ನಮ್ಮಲ್ಲಿರುವ ಜಾತಿ ಭೇದ, ಮೇಲು ಕೀಳುವ ಎನ್ನುವ ಭಾವ ಮತಾಂತರಕ್ಕೆ ಕಾರಣವಾಗಿದೆ. ನಮ್ಮ ತೊಡಕನ್ನು ಸರಿ ಮಾಡಿಕೊಂಡರೆ ಮಾತ್ರ ಸಮಾಜ ಸುಧಾರಿಸಲಿದೆ. ಹಿಂದೂ ಎಂದರೆ ಎಲ್ಲರೂ ಒಂದಾಗುವುದು ಎನ್ನುವುದು ಅರ್ಥ. ದೇವರ ಪೂಜೆ ಮಾಡುವುದು ದೊಡ್ಡದಲ್ಲ. ದೇವರಂತೆ ಬದುಕಬೇಕು ಎಂದು ವಿನಯ್‌ ಗೂರುಜಿ ತಿಳಿಸಿದರು.

ಅಪಘಾತದಿಂದ ತನ್ನ ಕಾಲಿನ ಬಲ ಕಳೆದುಕೊಂಡಿರುವ ಮರವಂತೆ ಗ್ರಾಮದ ನಿವಾಸಿ, ಹಿಂದೂ ಸಂಘಟನೆ ಕಾರ್ಯಕರ್ತ ರಾಜುಮರವಂತೆ ಅವರಿಗೆ ಜ.5ರಂದು ಶ್ರೀ ವರಲಕ್ಷ್ಮೀ ಟ್ರಸ್ಟ್ ವತಿಯಿಂದ ನಿರ್ಮಿಸಿದ 11ನೇ ಮನೆಯ ಕೀ ಹಸ್ತಾಂತರಿಸಿ ಅವರು ಮಾತನಾಡಿದರು.

ವರಲಕ್ಷ್ಮೀಚಾರಿಟೆಬಲ್ ಮ್ಯಾನೇಜಿಂಗ್ ಟ್ರಸ್ಟಿ ಡಾ| ಗೋವಿಂದ ಬಾಬು ಪೂಜಾರಿ ಮಾತನಾಡಿ, ಧರ್ಮದ ಬಗ್ಗೆ ಸದಾ ಕಾಲ ದುಡಿಯುವ ಹಿಂದೂ ಸಂಘಟನೆಯ ಕಾರ್ಯಕರ್ತರ ಕುಟುಂಬದ ಸದಸ್ಯರಿಗೆ ಹಿಂದೂ ಸಮಾಜದವರುಬೆನ್ನೆಲುಬಾಗಿ ನಿಲ್ಲಬೇಕು ಎಂದರು.

ವಿಹಿಂಪ ಪ್ರಾಂತ್ಯ ಸಹ ಕಾರ್ಯದರ್ಶಿ ಶರಣ್ ಪಂಪ್‌ ವೆಲ್ ಮಾತನಾಡಿ ಇನ್ನೊಬ್ಬರ ನೋವಿಗೆ ಸ್ಪಂದಿಸುವುದು ಪುಣ್ಯದ ಕೆಲಸ ಎನ್ನುವುದು ಭಾರತೀಯರಿಗೆ ಹುಟ್ಟಿ ನಿಂದಲೇ ಬಂದಿದೆ. ಜಗತ್ತಿನಲ್ಲೇ ಭರತ ಖಂಡ ಪವಿತ್ರವಾದ ಕ್ಷೇತ್ರವಾಗಿದೆ ಎಂದರು.

ಸ್ವಾಮೀಜಿ ಶ್ರೀ ಅಭಿನವ ಹಾಲಾಶ್ರೀ ಮಾತನಾಡಿ ದಾನ ಮಾಡುವುದು ಮುಖ್ಯವಲ್ಲ ಮಾಡುವ ಉದ್ದೇಶ ದೊಡ್ಡದಿರಬೇಕು. ಧರ್ಮದ ಕಾರ್ಯ ನಿಷ್ಕಲ್ಮಶದಿಂದ ಮಾಡಿದರೆ ಮಾತ್ರ ಸಾರ್ಥಕತೆಯಿಂದ ಕೂಡಿರುತ್ತದೆ. ರಾಷ್ಟ್ರದ ಚಿಂತನೆ, ದೇಶದ ಭವಿಷ್ಯದ ಬಗ್ಗೆ ಕರಾವಳಿಗರ ಧ್ವನಿ ಗಟ್ಟಿಯಾಗಿದೆ ಎಂದರು.

ಚೈತ್ರಾ ಕುಂದಾಪುರ, ಪ್ರಕಾಶ್ ಕುಕ್ಕೆಹಳ್ಳಿ ನಾರಾಯಣ ಶೆಟ್ಟಿ, ಬಾಬು ಪೂಜಾರಿ, ಮಂಜಮ್ಮ ಉಪಸ್ಥಿತರಿದ್ದರು. ವಿಶ್ವ ಹಿಂದೂ ಪರಿಷತ್‌ನ ಬಜರಂಗದಳದ ವತಿಯಿಂದ ಸಮಾಜ ಸೇವಕ ಡಾ| ಗೋವಿಂದ ಬಾಬು ಪೂಜಾರಿ ಅವರನ್ನು ಸಮ್ಮಾನಿಸಲಾಯಿತು.

Vishwa News 24

Recent Posts

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ -vishwanews24

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೈತ್ಯ ಗಾತ್ರದ ಅಲೆಗೆ…

17 hours ago

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ -vishwanews24

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ ಬೆಂಗಳೂರು : ನಟಿ ಅನುಪಮಾ ಗೌಡ ಅವರು ನಟನೆಯ ಮೂಲಕ…

17 hours ago

ಉಪ್ಪೂರು : ವಯೋವಂದನ ಆತಿಥ್ಯ ಗೃಹ “ಸೈಟ್ ಆಫೀಸ್” ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ -vishwanews24

ಉಪ್ಪೂರು : ವಯೋವಂದನ ಆತಿಥ್ಯ ಗೃಹ "ಸೈಟ್ ಆಫೀಸ್" ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ ಉಡುಪಿ ಜಿಲ್ಲೆ ಬ್ರಹ್ಮಾವರ…

3 days ago

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ – ಬೈಕ್ ನಡುವೆ ಭೀಕರ ಅಪಘಾತ : ಸವಾರ ಸ್ಥಳದಲ್ಲೇ ಮೃತ್ಯು – vishwanews24

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ  ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…

4 days ago

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ – vishwanews24

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…

4 days ago

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ – vishwanews24

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…

4 days ago