ಕುಮಾರಸ್ವಾಮಿ 5 ವರ್ಷ ಮುಖ್ಯಮಂತ್ರಿ ಆಗಿರಲು ಜೆಡಿಎಸ್ ಶಾಸಕರು ಎಂಥಾ ತ್ಯಾಗಕ್ಕು ಸಿದ್ದ : ಸಚಿವ ಸಾ.ರಾ.ಮಹೇಶ್ -Vishwanews24

Featured, ರಾಜ್ಯ ನ್ಯೂಸ್

ಮೈಸೂರು: ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ 5 ವರ್ಷ ಮುಖ್ಯಮಂತ್ರಿ ಆಗಿರಲು ಜೆಡಿಎಸ್ ಶಾಸಕರು ಎಂಥಾ ತ್ಯಾಗಕ್ಕು ಸಿದ್ದ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ರಾಜ್ಯದ ಹಿತದೃಷ್ಟಿಯಿಂದ ಕುಮಾರಸ್ವಾಮಿ 5 ವರ್ಷ ಸಿಎಂ ಆಗಿರಬೇಕು. ಇದಕ್ಕೆ ನಾನು ಸೇರಿದಂತೆ ಜೆಡಿಎಸ್ ಎಲ್ಲ ಶಾಸಕರು ತ್ಯಾಗಕ್ಕೆ ಸಿದ್ದರಾಗಿದ್ದೇವೆ, ಮಂತ್ರಿಮಂಡಲ ವಿಸ್ತರಣೆ ಅಥವಾ ಪುನರ್ರಚನೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ, ಯಾರು ಮಂತ್ರಿ ಆಗಬೇಕು, ಯಾರು ಅಧಿಕಾರಲ್ಲಿ ಇರಬೇಕು ಅಂತ ಯೋಚನೆ ಇಲ್ಲ. ರೈತರು ಉಳಿಯಬೇಕು. ಹೀಗಾಗಿ ಕುಮಾರಸ್ವಾಮಿ ಯಾವುದೇ ನಿರ್ಧಾರ ತೆಗೆದುಕೊಂಡರು ನಾವು ಸಿದ್ದ ಎಂದರು.

ತಮಿಳುನಾಡಿನ 9.19 ಟಿಎಂಸಿ ಕಾವೇರಿ ನೀರು ಬಿಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಕಾನೂನಾತ್ಮಕ ತೊಡಕುಗಳನ್ನ ಬಗೆಹರಿಸುತ್ತಾರೆ. ನಾನು ಈ ರಾಜ್ಯದ ಪ್ರಜೆಯಾಗಿ ನೀರು ಬಿಡುಲು ಸಾಧ್ಯವಿಲ್ಲ ಎನ್ನುತ್ತೇನೆ. ನಮ್ಮಲ್ಲೆ ಬರ ಇದೆ ಧರ್ಮಸ್ಥಳದಲ್ಲೇ ನೀರಿಲ್ಲ. ಹೀಗಿರುವಾಗ ನೀರು ಕೂಡುವುದು ಬೇಡ ಎಂದರು.