ಕೃಷ್ಣನಗರಿ ಉಡುಪಿಯಲ್ಲಿ ಸೆ. 10, 11ರಂದು ಶ್ರೀ ಜನ್ಮಾಷ್ಟಮಿ ಸಂಭ್ರಮ ; ಸಾರ್ವಜನಿಕರಿಗೆ ಪ್ರವೇಶ ನಿಷೇಧ -Vishwanews24
ಕೃಷ್ಣನಗರಿ ಉಡುಪಿಯಲ್ಲಿ ಸೆ. 10, 11ರಂದು ಶ್ರೀ ಜನ್ಮಾಷ್ಟಮಿ ಸಂಭ್ರಮ ; ಸಾರ್ವಜನಿಕರಿಗೆ ಪ್ರವೇಶ ನಿಷೇಧ -Vishwanews24
ಉಡುಪಿ : ಉಡುಪಿಯಲ್ಲಿ ನಾಳೆ (ಸೆ.10) ಶ್ರೀ ಕೃಷ್ಣಜನ್ಮಾಷ್ಟಮಿ ಆಚರಣೆ ನಡೆಯಲಿದ್ದು, ಮರುದಿನ ವಿಟ್ಲಪಿಂಡಿ ಮಹೋತ್ಸವ ನಡೆಯಲಿದೆ.
ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣ ಲೀಲೋತ್ಸವ ಕಾರ್ಯಕ್ರಮವು ಸೆಪ್ಟೆಂಬರ್ 11 ರಂದು ಮಧ್ಯಾಹ್ನ 3 ಗಂಟೆಯಿಂದ 6 ಗಂಟೆಯವರೆಗೆ ನಡೆಯಲಿದೆ. ಕೋವಿಡ್ ಸಮಸ್ಯೆಯಿಂದಾಗಿ ಜಿಲ್ಲಾಧಿಕಾರಿಯವರ ಆದೇಶದಂತೆ ಮಧ್ಯಾಹ್ನ 12.30 ಸಂಜೆ 5.30 ಗಂಟೆಯವರೆಗೆ ಭಕ್ತಾದಿಗಳಿಗೆ ರಥಬೀದಿಗೆ ಪ್ರವೇಶವಿಲ್ಲ ಅದರ ಬಳಿಕ ಕನಕನ ಕಿಂಡಿಯ ಮೂಲಕ ಭಕ್ತಾದಿಗಳು ದೇವರ ದರ್ಶನ ಪಡೆಯಬಹುದು ಎಂದು ಪರ್ಯಾಯ ಅದಮಾರು ಮಠದ ಪ್ರಕಟಣೆ ತಿಳಿಸಿದೆ.
ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷ ಸಾಂಪ್ರದಾಯಿಕವಾಗಿ ನಡೆಸಬಹುದೇ ಹೊರತು ಸಾರ್ವಜನಿಕರು ಭಾಗಿಯಾಗುವಂತಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಪಷ್ಟಪಡಿಸಿದ್ದಾರೆ.
ಶ್ರೀಕೃಷ್ಣ ಜನ್ಮಾಷ್ಟಮಿ, ವಿಟ್ಲಪಿಂಡಿ ಆಚರಣೆಯಲ್ಲಿ ಸಾರ್ವಜನಿಕರಿಗೆ ಭಾಗಿಯಾಗುವ ಅವಕಾಶ ಇಲ್ಲ. ಸರ್ಕಾರದ ನಿಯಮ ಪಾಲಿಸುವುದಾಗಿ ಸ್ವಾಮೀಜಿಗಳು ಒಪ್ಪಿಕೊಂಡಿದ್ದಾರೆ.
