Featured

ಕೈಪುಂಜಾಲು-ಪೊಲಿಪು-ತೊಟ್ಟ0-ದುಗ್ಗನ್‌ತೋಟ-ಕೊ0ಬಗುಡ್ಡೆ ವಾರ್ಡಿನಲ್ಲಿ ಬಿಜೆಪಿ ಸೆಲ್ಫ್ ಸುಸೈಡ್..? vishwanews24

ಕೈಪುಂಜಾಲು-ಪೊಲಿಪು-ತೊಟ್ಟ0-ದುಗ್ಗನ್‌ತೋಟ-ಕೊ0ಬಗುಡ್ಡೆ ವಾರ್ಡಿನಲ್ಲಿ ಬಿಜೆಪಿ ಸೆಲ್ಫ್ ಸುಸೈಡ್..?

ಕಾಪು: ಪುರಸಭಾ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದಾದರೂ ಕೋಸ್ಟಲ್ ಬಿಜೆಪಿ ಬೆಲ್ಟ್ ಕಳಚಿ ಬಿದ್ದಿದೆ.ಪ್ರತಿ ಚುನಾವಣೆಯಲ್ಲೂ ಬಿಜೆಪಿಗ್ ಲೀಡ್ ಕೊಡುತ್ತಿದ್ದ ಕೈಪುಂಜಾಲು-ಪೊಲಿಪು-ತೊಟ್ಟ0-ದುಗ್ಗನ್‌ತೋಟ ವಾರ್ಡ್ ಈಸಲದ ಮಟ್ಟಿಗೆ ಕಾಂಗ್ರೇಸ್ ವಶ ಪಡಿಸಿಕೊಂಡಿದೆ.


ಬಿಜೆಪಿಯಲ್ಲಿನ ಸ್ಥಳೀಯ ನಾಯಕನ ಮೊಂಡುತನಕ್ಕೆ ಆ ಭಾಗದ ಭಾಜಪ ಮತ್ತು ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ನೇರವಾಗಿ ಅವರವರ ಅಸ್ಥಿತ್ವ ತೋರಿಸುವ ಭರಾಟೆಯಲ್ಲಿ ಬಿಜೆಪಿ ತಕ್ಕ ಶಾಸ್ತಿ ಮಾಡಿದ್ದಾರೆಂಬ ಮಾತು ಕೂಡ ಕೇಳಿ ಬರುತ್ತಿದೆ.ಈ ಚುನಾವಣೆಯ ಸಮಯದಲ್ಲಿ ಆ ಭಾಗಕ್ಕೆ ಮನವೊಲಿಸಲು ಬಂದ ಎಲ್ಲಾ ನಾಯಕರಿಗೂ ಅಲ್ಲಿನ ಕಾರ್ಯಕರ್ತರು ನೀಡಿದ ಉತ್ತರ ” ಈ ಸಲದ ಮಟ್ಟಿಗೆ ನೋಚ್ಯಾನ್ಸ್” ಎಂಬುದಾಗಿತ್ತು.ಇನ್ನು ಕರಾವಳಿ ಹಾಗೂ ಕೊಪ್ಪಲಂಗಡಿ ವಾರ್ಡಿನಲ್ಲಿ ಜಿಲ್ಲಾ ನಾಯಕರ ಮಾಸ್ಟರ್‌ಮೈಂಡ್ ವರ್ಕೌಟ್ ಮಾಡಿದೆ ಇಲ್ಲವಾದಲ್ಲಿ ಅದನ್ನು ಕೂಡ ಕಳೆದುಕೊಳ್ಳುವ ಭೀತಿ ಎದುರಾಗಿತ್ತು.


51 ವರ್ಷದ ಬಳಿಕ ತೊಟ್ಟಂ ವಾರ್ಡಿಗೆ ಲಗ್ಗೆಯಿಟ್ಟ ಕಾಂಗ್ರೇಸ್
ಈ ಸಲದ ಚುನಾವಣೆಯಲ್ಲಿ ತೊಟ್ಟಂ ವಾರ್ಡ್ ಇಲ್ಲಿನ ಶಾಸಕರ ಅತೀ ಮುತುವರ್ಜಿಯ ವಾರ್ಡ್ ಆಗಿತ್ತು, ಎರಡು ಯುವಕರ ತಂಡದ ನಡುವಿನ ಭಿನ್ನಮತ ಬಗೆಹರಿಸದೆ ನೇರವಾಗಿ ಏಕಮುಖವಾಗಿ ಬ್ಯಾಟಿಂಗ್ ಮಾಡಿರುವ ಕಾರಣದಿಂದಾಗಿ ಈ ಸಲ ತೊಟ್ಟಂ ಬಿಜೆಪಿಯ ಹಿಡಿತದಿಂದ ಕೈ ತಪ್ಪಿತಪ್ಪಿದೆ ಈ ವಾರ್ಡಿನಲ್ಲಿ ೫೧ ವರ್ಷದ ಬಳಿಕ ಕಾಂಗ್ರೇಸ್ ತನ್ನ ಅಧಿಪತ್ಯ ಸ್ಥಾಪಿಸಿದೆ ಎಂಬುದು ವಾದ.


ಮಾಜಿ ಪುರಸಭಾ ಸದಸ್ಯೆ ಶಾಂಭಾವಿ ಕುಲಾಲ್ ಸೈಲೆಂಟ್
ಕಳೆದ ಪುರಸಭಾ ಚುನಾವಣೆಯಲ್ಲಿ ತೊಟ್ಟಂ ವಾರ್ಡಿಗೆ ಬೆಜೆಪಿ ಅಭ್ಯರ್ಥಿಯಾಗಿ ಕಣಕಿಳಿದಿದ್ದ ಶಾಂಭವಿ ಕುಲಾಲ್ ೧೨೬ ಮತಗಳ ಅಂತರದಿAದ ಗೆಲುವು ಸಾಧಿಸಿದ್ದರು ಮಾತ್ರವಲ್ಲದೆ ಹಲವಾರು ಬಾರಿ ಗ್ರಾಮಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಕೂಡ ಗೆಲುವು ಸಾಧಿಸಿಕೊಂಡವರು ಮತ್ತು ಈ ಭಾಗದ ಕಾರ್ಯಕರ್ತರ ಹಾಗೂ ಮತದಾರರ ನಾಡಿಮಿಡಿತವನ್ನು ಬಹುಸುಲಭವಾಗಿ ಅರ್ಥೈಸಿ ಕೊಂಡು ಹೋಗುವಷ್ಟರ ಮಟ್ಟಿಗೆ ಪರಿಣಿತರು ಆದರೇ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪಾರ್ಟಿಯ ಪರ ಮತಯಾಚನೆ ಮಾಡದಿರುವುದು ಕೂಡ ಆ ಭಾಗದ ಸೋಲಿಗೆ ಕಾರಣವಾಗಿದೆಂಬ ಮಾತು ಕೂಡ ಕೇಳಿ ಬರುತ್ತಿದೆ.

ಈ ಸಲದ ಬಿಜೆಪಿ ಅಭ್ಯರ್ಥಿ ಕಳೆದ ಚುನಾವಣೆಯಲ್ಲಿ ತೊಟ್ಟಂ ವಾರ್ಡಿನಲ್ಲಿ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು ಅದೇ ಸಮಯದಲ್ಲೆ ಪಕ್ಷ ಕೂಡ ಸದಸ್ಯತ್ವತನದಿಂದ ಉಚ್ಛಾಟನೆ ಮಾಡಿತ್ತು, ಈ ಬಾರಿಯ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೆಲವೇ ಕೆಲವು ದಿನಗಳ ಹಿಂದೆ ಪಕ್ಷಕ್ಕೆ ಸೇರ್ಪಡಿಸಿ ಟಿಕೆಟ್ ನೀಡಿರುವುದು ಕೂಡ ಒಂದು ಸೈಡಿನ ಯುವಕರ ಬಣಕ್ಕೆ ಬೇಸರವನ್ನುಂಟು ಮಾಡಿತ್ತು
ಇದೇ ಎಫೆಕ್ಟ್ ದುಗ್ಗನ್‌ತೋಟ ವಾರ್ಡಿಗೂ ತಟ್ಟಿದೆಂಬ ಮಾತು ಕೂಡ ಕೇಳಿ ಬಂತು.


ಅ0ತೂ ಬಿಜೆಪಿ ಭದ್ರಮತಬ್ಯಾಂಕ್ ಸ್ಥಳಿಯ ನಾಯಕರ ಮೊಂಡುತನದಿ0ದಾಗಿ ಕಳೆದುಕೊಂಡಿದೆಯೆ ಹೊರತು ಬಿಜಪಿಯ ವಿರುದ್ಧದ ಅಲೆ ಅಲ್ಲಾ ಎಂಬುದನ್ನು ಕೊಪ್ಪಲಂಗಡಿ-ಗರಡಿ-ಜನರಲ್ ಶಾಲೆಯ ವಾರ್ಡಿನಲ್ಲಿ ಕಾರ್ಯಕರ್ತರು ತೋರಿಸಿಕೊಟ್ಟಿದ್ದಾರೆ.

ಬ್ಯೂರೋ ರಿಪೋರ್ಟ್ ವಿಶ್ವನ್ಯೂಸ್೨೪

Vishwa News 24

Recent Posts

ಈದ್ ಮಿಲಾದ್: ದ.ಕ/ಉಡುಪಿ ಜಿಲ್ಲೆಗೆ ಆ.25ರಂದು ಸಾರ್ವತ್ರಿಕ ರಜೆ ಘೋಷಣೆ – vishwanews24

ಈದ್ ಮಿಲಾದ್: ದ.ಕ/ಉಡುಪಿ ಜಿಲ್ಲೆಗೆ ಆ.25ರಂದು ಸಾರ್ವತ್ರಿಕ ರಜೆ ಘೋಷಣೆ ಮಂಗಳೂರು: ದ.ಕ.ಮತ್ತು ಉಡುಪಿ ಜಿಲ್ಲೆಯಲ್ಲಿ ಆ. 25ರ ಮಂಗಳವಾರ…

16 hours ago

ಬದುಕಿದ್ದಾಗ ಭಿಕ್ಷುಕಿಯಾಗಿದ್ದ ವೃದ್ಧೆ ಸತ್ತ ಮೇಲೆ ಲಕ್ಷಾಧಿಪತಿ ..- vishwanews24

ಮೃತಪಟ್ಟ ಭಿಕ್ಷುಕಿಯ ಮನೆಯಲ್ಲಿ 30 ಲಕ್ಷ ರೂ. ನಗದು ಪತ್ತೆ ಮಂಡ್ಯ: ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟಿದ್ದು,…

19 hours ago

ಬ್ರಹ್ಮಾವರ: ತಂದೆ–ತಾಯಿಗೆ ಸುತ್ತಿಗೆಯಿಂದ ತಲೆಗೆ ಹೊಡೆದು ಹತ್ಯೆ; ಆರೋಪಿ ಮಗನ ಬಂಧನ – vishwanews24

ಬ್ರಹ್ಮಾವರ: ತಂದೆ–ತಾಯಿಗೆ ಸುತ್ತಿಗೆಯಿಂದ ತಲೆಗೆ ಹೊಡೆದು ಹತ್ಯೆ; ಆರೋಪಿ ಮಗನ ಬಂಧನ ಉಡುಪಿ: ತಂದೆ–ತಾಯಿಗೆ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ…

19 hours ago

ಕಾರ್ಕಳ ಪುರಸಭೆಗೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್‌ ಭೇಟಿ.. ಕಡತಗಳ ಪರಿಶೀಲನೆ – vishwanews24

ಕಾರ್ಕಳ ಪುರಸಭೆಗೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್‌ ಭೇಟಿ.. ಕಡತಗಳ ಪರಿಶೀಲನೆ ಕಾರ್ಕಳ: ಸಾರ್ವಜನಿಕರ ಅರ್ಜಿ ಹಾಗೂ ಕಡತಗಳ ವಿಲೇವಾರಿ ಬಗ್ಗೆ…

20 hours ago

ಉಡುಪಿ : 25 ಗಂಟೆಗಳ ಕಾಲ ಗಾಯನ ; ವಿದುಷಿ ಸಂಗೀತಾ ಬಾಲಚಂದ್ರ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ ದಾಖಲೆ – vishwanews24

25 ಗಂಟೆಗಳ ಗಾಯನದಿಂದ ವಿದುಷಿ ಸಂಗೀತಾ ಬಾಲಚಂದ್ರ ಗೋಲ್ಡನ್‌ ಬುಕ್‌ಆಫ್‌ ವರ್ಲ್ಡ್ ರೆಕಾರ್ಡ್‌ ದಾಖಲೆ 'ಗೀತ ಗಂಗೋತ್ರಿʼ ಬಿರುದು ನೀಡಿ…

20 hours ago

ಕಾಪು ಪುರಸಭೆಗೆ ಲೋಕಾಯುಕ್ತ ದಾಳಿ – vishwanews24

ಕಾಪು ಪುರಸಭೆಗೆ ಲೋಕಾಯುಕ್ತ ದಾಳಿ [gallery columns="1" size="large" ids="117027,117028,117029,117030,117031"]

20 hours ago