ಕಾಪು: ಪುರಸಭಾ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದಾದರೂ ಕೋಸ್ಟಲ್ ಬಿಜೆಪಿ ಬೆಲ್ಟ್ ಕಳಚಿ ಬಿದ್ದಿದೆ.ಪ್ರತಿ ಚುನಾವಣೆಯಲ್ಲೂ ಬಿಜೆಪಿಗ್ ಲೀಡ್ ಕೊಡುತ್ತಿದ್ದ ಕೈಪುಂಜಾಲು-ಪೊಲಿಪು-ತೊಟ್ಟ0-ದುಗ್ಗನ್ತೋಟ ವಾರ್ಡ್ ಈಸಲದ ಮಟ್ಟಿಗೆ ಕಾಂಗ್ರೇಸ್ ವಶ ಪಡಿಸಿಕೊಂಡಿದೆ.
ಬಿಜೆಪಿಯಲ್ಲಿನ ಸ್ಥಳೀಯ ನಾಯಕನ ಮೊಂಡುತನಕ್ಕೆ ಆ ಭಾಗದ ಭಾಜಪ ಮತ್ತು ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ನೇರವಾಗಿ ಅವರವರ ಅಸ್ಥಿತ್ವ ತೋರಿಸುವ ಭರಾಟೆಯಲ್ಲಿ ಬಿಜೆಪಿ ತಕ್ಕ ಶಾಸ್ತಿ ಮಾಡಿದ್ದಾರೆಂಬ ಮಾತು ಕೂಡ ಕೇಳಿ ಬರುತ್ತಿದೆ.ಈ ಚುನಾವಣೆಯ ಸಮಯದಲ್ಲಿ ಆ ಭಾಗಕ್ಕೆ ಮನವೊಲಿಸಲು ಬಂದ ಎಲ್ಲಾ ನಾಯಕರಿಗೂ ಅಲ್ಲಿನ ಕಾರ್ಯಕರ್ತರು ನೀಡಿದ ಉತ್ತರ ” ಈ ಸಲದ ಮಟ್ಟಿಗೆ ನೋಚ್ಯಾನ್ಸ್” ಎಂಬುದಾಗಿತ್ತು.ಇನ್ನು ಕರಾವಳಿ ಹಾಗೂ ಕೊಪ್ಪಲಂಗಡಿ ವಾರ್ಡಿನಲ್ಲಿ ಜಿಲ್ಲಾ ನಾಯಕರ ಮಾಸ್ಟರ್ಮೈಂಡ್ ವರ್ಕೌಟ್ ಮಾಡಿದೆ ಇಲ್ಲವಾದಲ್ಲಿ ಅದನ್ನು ಕೂಡ ಕಳೆದುಕೊಳ್ಳುವ ಭೀತಿ ಎದುರಾಗಿತ್ತು.
51 ವರ್ಷದ ಬಳಿಕ ತೊಟ್ಟಂ ವಾರ್ಡಿಗೆ ಲಗ್ಗೆಯಿಟ್ಟ ಕಾಂಗ್ರೇಸ್
ಈ ಸಲದ ಚುನಾವಣೆಯಲ್ಲಿ ತೊಟ್ಟಂ ವಾರ್ಡ್ ಇಲ್ಲಿನ ಶಾಸಕರ ಅತೀ ಮುತುವರ್ಜಿಯ ವಾರ್ಡ್ ಆಗಿತ್ತು, ಎರಡು ಯುವಕರ ತಂಡದ ನಡುವಿನ ಭಿನ್ನಮತ ಬಗೆಹರಿಸದೆ ನೇರವಾಗಿ ಏಕಮುಖವಾಗಿ ಬ್ಯಾಟಿಂಗ್ ಮಾಡಿರುವ ಕಾರಣದಿಂದಾಗಿ ಈ ಸಲ ತೊಟ್ಟಂ ಬಿಜೆಪಿಯ ಹಿಡಿತದಿಂದ ಕೈ ತಪ್ಪಿತಪ್ಪಿದೆ ಈ ವಾರ್ಡಿನಲ್ಲಿ ೫೧ ವರ್ಷದ ಬಳಿಕ ಕಾಂಗ್ರೇಸ್ ತನ್ನ ಅಧಿಪತ್ಯ ಸ್ಥಾಪಿಸಿದೆ ಎಂಬುದು ವಾದ.
ಈ ಸಲದ ಬಿಜೆಪಿ ಅಭ್ಯರ್ಥಿ ಕಳೆದ ಚುನಾವಣೆಯಲ್ಲಿ ತೊಟ್ಟಂ ವಾರ್ಡಿನಲ್ಲಿ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು ಅದೇ ಸಮಯದಲ್ಲೆ ಪಕ್ಷ ಕೂಡ ಸದಸ್ಯತ್ವತನದಿಂದ ಉಚ್ಛಾಟನೆ ಮಾಡಿತ್ತು, ಈ ಬಾರಿಯ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೆಲವೇ ಕೆಲವು ದಿನಗಳ ಹಿಂದೆ ಪಕ್ಷಕ್ಕೆ ಸೇರ್ಪಡಿಸಿ ಟಿಕೆಟ್ ನೀಡಿರುವುದು ಕೂಡ ಒಂದು ಸೈಡಿನ ಯುವಕರ ಬಣಕ್ಕೆ ಬೇಸರವನ್ನುಂಟು ಮಾಡಿತ್ತು
ಇದೇ ಎಫೆಕ್ಟ್ ದುಗ್ಗನ್ತೋಟ ವಾರ್ಡಿಗೂ ತಟ್ಟಿದೆಂಬ ಮಾತು ಕೂಡ ಕೇಳಿ ಬಂತು.
ಅ0ತೂ ಬಿಜೆಪಿ ಭದ್ರಮತಬ್ಯಾಂಕ್ ಸ್ಥಳಿಯ ನಾಯಕರ ಮೊಂಡುತನದಿ0ದಾಗಿ ಕಳೆದುಕೊಂಡಿದೆಯೆ ಹೊರತು ಬಿಜಪಿಯ ವಿರುದ್ಧದ ಅಲೆ ಅಲ್ಲಾ ಎಂಬುದನ್ನು ಕೊಪ್ಪಲಂಗಡಿ-ಗರಡಿ-ಜನರಲ್ ಶಾಲೆಯ ವಾರ್ಡಿನಲ್ಲಿ ಕಾರ್ಯಕರ್ತರು ತೋರಿಸಿಕೊಟ್ಟಿದ್ದಾರೆ.
ಬ್ಯೂರೋ ರಿಪೋರ್ಟ್ ವಿಶ್ವನ್ಯೂಸ್೨೪
ಅಯೋಧ್ಯೆ ರಾಮಮಂದಿರ ಹುಂಡಿ ಹಗರಣ : ಎಲ್ಲಾ ಹಗರಣಗಳ ಸತ್ಯಾಂಶ ಹೊರಗೆ ಬರಬೇಕು : ವಿನಯಕುಮಾರ್ ಸೊರಕೆ ಆಗ್ರಹ ಉಡುಪಿ:…
ಉಡುಪಿ ಜಿಲ್ಲೆಯಾದ್ಯಂತ ಎಎನ್ಪಿಆರ್ ಕ್ಯಾಮೆರಾ ಅಳವಡಿಕೆ: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇ. 40-70ರಷ್ಟು ಇಳಿಕೆ ಉಡುಪಿ: ಸ್ವಯಂ ಚಾಲಿತ…
ಹೆಬ್ರಿ: ಕೂಡ್ಲು ಫಾಲ್ಸ್ ಪ್ರವೇಶಕ್ಕೆ ಅರಣ್ಯ ಇಲಾಖೆಯಿಂದ ತಾತ್ಕಾಲಿಕ ನಿಷೇಧ ಹೆಬ್ರಿ: ಪುವಾಸಿ ತಾಣವಾದ ಕೂಡು ಫಾಲ್ಸ್ ಪುವೇಶಕ್ಕೆ ಅರಣ್ಯ…
ಉಡುಪಿ : ವ್ಯಕ್ತಿ ನಾಪತ್ತೆ ಉಡುಪಿ : ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಕುಶಾಲ್ ಶೆಟ್ಟಿ (55) ಎಂಬ…
ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನ : ಅತ್ಯಾಚಾರ , ಕೊಲೆ ಪ್ರಕರಣದ ಆರೋಪಿ ಎನ್ಕೌಂಟರ್ನಲ್ಲಿ ಹತ್ಯೆ ಕೊಲ್ಕತ್ತಾ: ಪಶ್ಚಿಮ…
ಉಡುಪಿ : ಜು. 10 ರಂದು ನೇರ ಸಂದರ್ಶನ ಉಡುಪಿ : ಉಡುಪಿಯ ವಿ.ಪಿ ನಗರದ ಸುಧಾ ಫರ್ನೀರ್ಸ್ ಬಿಲ್ಡಿಂಗ್s…