ಕೊಂಬಗುಡ್ಡೆ ವಾರ್ಡಿನಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಉಮೇಶ್ ಕರ್ಕೆರಾ ಪರ ಹೆಚ್ಚಿದ ಒಲವು:vishwanews24
ಕೊಂಬಗುಡ್ಡೆ ವಾರ್ಡಿನಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಉಮೇಶ್ ಕರ್ಕೆರಾ ಪರ ಹೆಚ್ಚಿದ ಒಲವು:vishwanews24
ಕಾಪು: ಕಾಪು ಪುರಸಭಾ ವ್ಯಾಪ್ತಿಯ ವಾರ್ಡ್ ನಂಬರ್ ೧೮ ಕೊಂಬಗುಡ್ಡೆ ವಾರ್ಡಿನಲ್ಲಿ ಅಪ್ಪಟ ಸಮಾಜಸೇವಕ ಉಮೇಶ್ ಕರ್ಕೆರಾ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿದ್ದು ವಾರ್ಡಿನಾದ್ಯಂತ ಉಮೇಶ್ ಪರ ಮತದಾರರ ಒಲವು ಜಾಸ್ತಿಯಾಗಿದೆ.
ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗಿಶ್ ಶೆಟ್ಟಿಯ ಮುಂದಾಲತ್ವದಲ್ಲಿ ಜನತಾದಳ ಪಕ್ಷ ಕಾಪು ಭಾಗದಲ್ಲಿ ಬಲವರ್ಧನೆಗೊಂಡಿರುವ ಪರಿಣಾಮ ಈ ಬಾರಿ ಪೂರಕ ವಾತಾವರಣ ನಿರ್ಮಾಣಗೊಂಡಿದೆ.
ಕೊAಬಗುಡ್ಡೆಯ ಅಭ್ಯರ್ಥಿ ಉಮೇಶ್ ಕರ್ಕೆರಾ ಕಳೆದ ಹಲವಾರು ವರ್ಷಗಳಿಂದ ಸಮಾಜಸೇವಕರಾಗಿ ಸೇವೆ ಮಾಡಿದವರು ಮಾತ್ರವಲ್ಲದೆ ಅಪತ್ಕಾಲಕ್ಕೆ ಒದಗುವ ವ್ಯಕ್ತಿ ಹಾಗಾಗಿ ಈ ಬಾರಿ ಕೊಂಬಗುಡ್ಡೆ ವಾರ್ಡಿನಲ್ಲಿ ಜೆಡಿಎಸ್ ಪರವಾದ ಗಾಳಿ ಎದ್ದಿದೆ.
ಪುರಸಭೆಗೆ ಉಮೇಶ್ ಕರ್ಕೆರಾ ಅಗತ್ಯ
ಕೊಂಬಗುಡ್ಡೆ ಆ ಭಾಗದ ಜನ ಸಾಮಾನ್ಯರ ಕಷ್ಟ ಹಾಗೂ ಮೂಲಭೂತ ಸೌಕರ್ಯಗಳ ಕುರಿತಾಗಿ ಗಟ್ಟಿ ಧ್ವನಿಯಾಗಿ ಪುರಸಭೆಯಲ್ಲಿ ಮಾತನಾಡಲು ಮತ್ತು ಹೆಚ್ಚಿನ ಅನುದಾನವನ್ನು ಆ ಭಾಗದ ವಾರ್ಡಿಗೆ ತರುವಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ಕೆಲಸ ಮಾಡುವರು ಎಂಬ ನಂಬಿಕೆ ಅಲ್ಲಿನ ಮತದಾರರಲ್ಲಿದೆ ಹಾಗಾಗಿ ಇ ಸಲದ ಮಟ್ಟಿಗೆ ಕೊಂಬಗುಡ್ಡೆ ವಾರ್ಡಿಗೆ ಜೆಡಿಎಸ್ ಪಕ್ಷದಿಂದ ಉಮೇಶ್ ಕರ್ಕೆರಾ ಅವರನ್ನು ಗೆಲ್ಲಿಸಿ ಪುರಸಭೆಗೆ ಕಳುಹಿಸುವುದು ಅಗತ್ಯವಾಗಿದೆ ಅನ್ನುತ್ತಾರೆ ಅಲ್ಲಿನ ಮತದಾರರು.
ಪೊಲಿಟಿಕಲ್ ಬ್ಯೂರೋ ವಿಶ್ವನ್ಯೂಸ್24



