ಕೊರೋನಾ ಎಂಬ ರೋಗ ತಾಂಡವಾಡುತ್ತಿರುವಾಗ ಭಾರತದ ಗಡಿಯಲ್ಲಿ ಒಳನುಸುಳುವುದು ಮತ್ತು ಗುಂಡಿನ ದಾಳಿ ನಡೆಸುವುದು ಖಂಡನೀಯ: ಶ್ರೀ ಶ್ರೀವಿದ್ಯಾಧೀಶತೀರ್ಥ- ಪಲಿಮಾರು ಹಿರಿಯ ಶ್ರೀಗಳು- vishwanews24 -video news

Featured, ಉಡುಪಿ

padubidri: ಪರಮ ಪೂಜ್ಯ ಪಲಿಮಾರು ಮಠದ ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಗಳು ಕೋವಿಡ್ 19 ವಿಚಾರವಾಗಿ ಮಾಧ್ಯಮಗಳ ಜತೆ ಮಾತಾಡಿ” ದೇಶದಲ್ಲಿ ಕೊರೋನಾ ಎಂಬ ಮಹಾಮಾರಿ ತಾಂಡವಾಡುತ್ತಿದೆ ಈ ಸಮಯದಲ್ಲಿ ದೇಶವಾಸಿಗಳು ಸರ್ಕಾರದ ಆಜ್ಞೆಯನ್ನು ಪಾಲಿಸಬೇಕು ಮನೆಯಲ್ಲಿಯೇ ಇದ್ದುಕೊಂಡು ಈ ಮಹಾಮಾರಿಯ ವಿರುದ್ಧ ಹೋರಾಡಬೇಕು ಮತ್ತು ಇಂತಹ ಕಷ್ಟ ಸಮಯಲ್ಲಿ ಉಳ್ಳವರು ಇಲ್ಲದವರಿಗೆ ಜಾತಿಮತ ಪಂಗಡ ನೋಡದೆ ಸಹಕಾರ ಮಾಡುವುದರ ಜತೆಗೆ ಅವರ ಕಷ್ಟದ ನಿಂತು ಧೈರ್ಯ ತುಂಬುವ ಕಾರ್ಯ ಮಾಡಬೇಕಾಗಿದೆ.ಇಂತಹ ಸಮಯದಲ್ಲಿ ಕೂಡ ದೇಶದ ಗಡಿಯಲ್ಲಿ ಗುಂಡಿನದಾಳಿ ನಡೆಸುವುದು ಮತ್ತು ಒಳಸುಸುಳುವಿಕೆಗೆ ಪ್ರಯತ್ನ ಮಾಡುವುದು ಅತ್ಯಂತ ಖಂಡನೀಯ ಎಂದರು.ದೇಶದಲ್ಲೆಡೆ ಕೋವಿಡ್ ವಿರುದ್ಧ ಸೇವೆ ಮಾಡುತ್ತಿರುವ ಎಲ್ಲಾ ವೈದ್ಯರಿಗೆ,ಪೋಲಿಸ್,ಮಾಧ್ಯಮ,ನರ್ಸ್ಗಳು,ಪ್ಯಾರಮೆಡಿಕಲ್ ಸಿಬ್ಬಂಧಿಗಳಿಗೆ ಅಭಿನಂದನೆಗಳು ಎಂದರು.ಈ ಸಂದರ್ಭದಲ್ಲಿ ಪಲಿಮಾರು ಕಿರಿಯ ಶ್ರೀಗಳು ಉಪಸ್ಥಿತರಿದ್ದರು.

 

facebook video news 

 

youtube video news