Featured

ಕೋಟ : ಗಂಡನ ಮನೆಯಿಂದ ಚಿನ್ನಾಭರಣ ಕದ್ದ ಆರೋಪ; ಪ್ರಕರಣ ದಾಖಲು – vishwanews24

ಕೋಟ : ಗಂಡನ ಮನೆಯಿಂದ ಚಿನ್ನಾಭರಣ ಕದ್ದ ಆರೋಪ; ಪ್ರಕರಣ ದಾಖಲು

ಕೋಟ: ನವ ವಿವಾಹಿತೆಯೋರ್ವಳು ಮದುವೆಯಾಗಿ ಎರಡೇ ತಿಂಗಳಲ್ಲಿ ಗಂಡನ ಮನೆಯಿಂದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾಳೆ ಎಂಬ ಆರೋಪದಲ್ಲಿ ನ್ಯಾಯಾಲಯದ ಆದೇಶದಂತೆ ಪ್ರಕರಣ ದಾಖಲಾದ ಘಟನೆ ಕೋಟ ಪೊಲೀಸ್‌ ಠಾಣೆ ವ್ಯಾಪ್ತಿಯ ಸಾಲಿಗ್ರಾಮದಲ್ಲಿ ನಡೆದಿದೆ.

ಸಾಲಿಗ್ರಾಮದ ಅಂತೋನಿ ಡಾಲ್ವಿನ್‌ ಕಾರ್ಡೋಜಾ ಅವರ ಕುಟುಂಬವು ಚಿನ್ನಾಭರಣ ಕಳೆದುಕೊಂಡಿದ್ದು, ಹಾಸನ ಮೂಲದ ಅನುಷಾ ಆರೋಪಿ.

ಅಂತೋನಿ ಡಾಲ್ವಿನ್‌ಗೆ ಅನುಷಾ ಜತೆಗೆ 2023 ಡಿ.26ರಂದು ಸಾಸ್ತಾನದ ಸೈಂಟ್‌ ಅಂತೋನಿ ಚರ್ಚ್‌ನಲ್ಲಿ ನೆರವೇರಿತ್ತು 2024ರ ಫೆ.9ರಂದು ಅನುಷಾ ತನ್ನ ತಾಯಿಗೆ ಆರೋಗ್ಯ ಸಮಸ್ಯೆ ಇದ್ದು, ಮನೆಗೆ ಹೋಗಿ ನಾಲ್ಕು ದಿನಗಳಲ್ಲಿ ಮರಳುತ್ತೇನೆ ಎಂದು ಹೇಳಿ ಹೋಗಿದ್ದಳು. ಆದರೆ ಸಂಜೆ ಮನೆಯ ಕಪಾಟನ್ನು ನೋಡಿದಾಗ ಅಂತೋನಿ ಅವರ ತಾಯಿಯ 40 ಗ್ರಾಂ ತೂಕದ ಕರಿಮಣಿ, 10 ಗ್ರಾಂ ತೂಕದ 4 ಚಿನ್ನದ ಬಳೆಗಳು, 24 ಗ್ರಾಂ ಚಿನ್ನದ ಸರ, 3 ಚಿನ್ನದ ಉಂಗುರಗಳು, ಮತ್ತು ಕಿವಿ ಓಲೆ ಕಾಣೆಯಾಗಿರುವುದು ಗಮನಕ್ಕೆ ಬಂದಿರುತ್ತದೆ. ಈ ಬಗ್ಗೆ ಅನುಷಾಳನ್ನು ಕೇಳಿದಾಗ ತಪ್ಪೊಪ್ಪಿಕೊಂಡ ಆಕೆ, ಮನೆಗೆ ವಾಪಸ್‌ ಬಂದಾಗಿ ನೀಡುವುದಾಗಿ ತಿಳಿಸಿದ್ದಳು. ಹೀಗಾಗಿ ಪ್ರಕರಣವನ್ನು ರಾಜಿ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಪ್ರಯತ್ನಿಸಲಾಗಿತ್ತು.

ಆದರೆ ಆರೋಪಿ ಅನುಷಾ ಚಿನ್ನಾಭರಣವನ್ನು ವಾಪಸ್‌ ನೀಡದೆ, ಮನೆಗೂ ಮರಳದೆ ಸತಾಯಿಸುತ್ತಿದ್ದಾಳೆ. ಚಿನ್ನಾಭರಣ ನೀಡಬೇಕಿದ್ದರೆ 25 ಲ. ರೂ. ನೀಡಬೇಕೆಂಬ ಬೇಡಿಕೆ ಈಡುತ್ತಿದ್ದಾಳೆ. ಹೀಗಾಗಿ ಆಕೆಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಂತೋನಿ ಕುಂದಾಪುರ ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು.

Vishwa News 24

Recent Posts

ಐಫೋನ್ ಬದಲು ಆಯಿಲ್ ಕಳುಹಿಸಿದ್ದ ಫ್ಲಿಪ್​ಕಾರ್ಟ್​ : 1.8 ಲಕ್ಷ ರೂ. ಪರಿಹಾರಕ್ಕೆ ಮುಂಬೈನ ಗ್ರಾಹಕ ನ್ಯಾಯಾಲಯ ಆದೇಶ – vishwanews24

ಐಫೋನ್ ಬದಲು ಆಯಿಲ್ ಕಳುಹಿಸಿದ್ದ ಫ್ಲಿಪ್​ಕಾರ್ಟ್​ : ಭಾರಿ ದಂಡ ವಿಧಿಸಿದ ಮುಂಬೈನ ಗ್ರಾಹಕ ನ್ಯಾಯಾಲಯ ಮುಂಬೈ: ಆನ್‌ಲೈನ್‌ನಲ್ಲಿ ಲಕ್ಷಾಂತರ…

6 minutes ago

ಕೇಂದ್ರದ ಭರವಸೆಯ ಬಳಿಕ  ಸೋನಂ ವಾಂಗ್ಚುಕ್ 26 ದಿನಗಳ ಉಪವಾಸ ಅಂತ್ಯ – vishwanews24

ಕೇಂದ್ರದ ಭರವಸೆಯ ಬಳಿಕ  ಸೋನಂ ವಾಂಗ್ಚುಕ್ 26 ದಿನಗಳ ಉಪವಾಸ ಅಂತ್ಯ ನವದೆಹಲಿ: ಹೋರಾಟಗಾರ ಹಾಗೂ ಲಡಾಖ್‌ನ ಸಾಮಾಜಿಕ ಕಾರ್ಯಕರ್ತ…

37 minutes ago

ಜು.26ರಂದು ಬೆಂಗಳೂರು ತುಳುವೆರೆ ಚಾವಡಿಯಿಂದ 28ನೇ ವರ್ಷದ ‘ಪರ್ಬದ ಲೇಸ್’ ಕಾರ್ಯಕ್ರಮ – vishwanews24

ಜು.26ರಂದು ಬೆಂಗಳೂರು ತುಳುವೆರೆ ಚಾವಡಿಯಿಂದ 28ನೇ ವರ್ಷದ ‘ಪರ್ಬದ ಲೇಸ್’ ಕಾರ್ಯಕ್ರಮ ಬೆಂಗಳೂರು: ತುಳುವೆರೆ ಚಾವಡಿಯ 28ನೇ ವರ್ಷದ "ಪರ್ಬದ…

53 minutes ago

ಬೆಳ್ತಂಗಡಿ: ಚಾರ್ಮಾಡಿ ಘಾಟ್ ನಲ್ಲಿ ಚಿರತೆ ಪ್ರತ್ಯಕ್ಷ ; ವಾಹನ ಸವಾರರಲ್ಲಿ ಆತಂಕ – vishwanews24

ಬೆಳ್ತಂಗಡಿ: ಚಾರ್ಮಾಡಿ ಘಾಟ್ ನಲ್ಲಿ ಚಿರತೆ ಪ್ರತ್ಯಕ್ಷ ; ವಾಹನ ಸವಾರರಲ್ಲಿ ಆತಂಕ ಬೆಳ್ತಂಗಡಿ,: ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು…

59 minutes ago

ಸುಳ್ಯ: ಮನೆ ಬಿಟ್ಟು ತೆರಳಿದ್ದ ಅಪ್ರಾಪ್ತ ಬಾಲಕಿ ಪತ್ತೆ; ಯುವಕನ ವಿರುದ್ದ ಪೋಕ್ಸೋ ಪ್ರಕರಣ ದಾಖಲು – vishwanews24

ಸುಳ್ಯ : ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯ: ಯುವಕನ ಬಂಧನ ಸುಳ್ಯ: ಮನೆ ಬಿಟ್ಟು ತೆರಳಿದ್ದ ಅಪ್ರಾಪ್ತ ಬಾಲಕಿಯನ್ನು…

1 hour ago

ಅತಿಥಿ ಶಿಕ್ಷಕರ ಮಾಸಿಕ ವೇತನ ₹25,000ಕ್ಕೆ ಹೆಚ್ಚಿಸಿ, ಸೇವಾ ಭದ್ರತೆ ಕಲ್ಪಿಸಿ ಮುಖ್ಯಮಂತ್ರಿಗಳಿಗೆ ಶಾಸಕ ಯಶ್ ಪಾಲ್ ಸುವರ್ಣ ಮನವಿ – vishwanews24

ಅತಿಥಿ ಶಿಕ್ಷಕರ ಮಾಸಿಕ ವೇತನ ₹25,000ಕ್ಕೆ ಹೆಚ್ಚಿಸಿ, ಸೇವಾ ಭದ್ರತೆ ಕಲ್ಪಿಸಿ ಮುಖ್ಯಮಂತ್ರಿಗಳಿಗೆ ಶಾಸಕ ಯಶ್ ಪಾಲ್ ಸುವರ್ಣ ಮನವಿ…

1 hour ago