ಉಡುಪಿ

ಕೋಳಿ, ಮೀನಿನ ಬೆಲೆ ದುಬಾರಿ

ಮಂಗಳೂರು : ಸಾಮಾನ್ಯವಾಗಿ ಈ ಹೊತ್ತಿಗೆ ಮೀನು ಅಥವಾ ಕೋಳಿ ಮಾಂಸದ ಬೆಲೆ ಕಡಿಮೆಯಾಗಿರುತ್ತದೆ. ದುರದೃಷ್ಟವೋ ಎಂಬಂತೆ ಪ್ರಸಕ್ತ ಹವಾಮಾನದಿಂದ ಮೀನು ಮತ್ತು ಕೋಳಿ ಮಾಂಸ ಪೂರೈಕೆ ಕುಸಿದಿದ್ದು, ಪರಿಸ್ಥಿತಿ ಮಾಂಸಾಹಾರಿಗಳಿಗೆ ಹಿತಕರವಾಗಿಲ್ಲ. ಬೆಲೆ ಗಗನಕ್ಕೇರಿದೆ.

ಎರಡ್ಮೂರು ತಿಂಗಳ ಹಿಂದೆ ಜೀವಂತ ಕೋಳಿ( ಚಿಕನ್/ಬ್ರೋಯ್ಲರ್) ಕಿಲೋಗೆ 70 ರೂ ಆಗಿದ್ದರೆ, ಈಗ 136 ರೂ ಆಗಿದೆ. ಇದೇ ರೀತಿ ಎರಡು ತಿಂಗಳ ಹಿಂದೆ ಚರ್ಮ ಸುಲಿದ ಕೋಳಿ ಕಿಲೋಗೆ 190 ರೂ ಆಗಿದ್ದರೆ ಈಗ 220 ರೂ ಆಗಿದೆ.

ಕಡಿಮೆ ಉತ್ಪಾದನೆ ಮತ್ತು ಹವಾಮಾನ ಬದಲಾವಣೆಯಿಂದ ಈಗ ಮಾಂಸಕ್ಕೆ ಬೆಲೆ ಹೆಚ್ಚಾಗಿದೆ ಎಂದು ಅನುಪಮ ಫೀಡ್ಸ್ ಮತ್ತು ಐಡಿಯಲ್ ಚಿಕನ್ ಆಡಳಿತ ಪಾಲುದಾರ ವಿನ್ಸೆಂಟ್ ಕುಟಿನ್ಹೋ ತಿಳಿಸಿದರು.

“ಅಧಿಕ ಉಷ್ಟಾಂಶವಿದ್ದಾಗ ಕೋಳಿಗಳು ಕಡಿಮೆ ಆಹಾರ ತಿನ್ನುತ್ತವೆ. ಪರಿಣಾಮ ಅವುಗಳ ತೂಕ ಕಡಿಮೆಯಾಗುತ್ತದೆ. ಎರಡನೇಯದಾಗಿ, ಅಧಿಕ ಉಷ್ಟಾಂಶದಿಂದ ಶೇ 10ರಷ್ಟು ಕೋಳಿಗಳು ಸತ್ತಿವೆ. ಹಾಗಾಗಿ ಈಗ ಕೋಳಿ ಮಾಂಸ ಬೆಲೆ ಜಾಸ್ತಿಯಾಗಿದೆ” ಎಂದವರು ವಿವರಿಸಿದರು.

ಮಂಗಳೂರು ನಗರಕ್ಕೆ ದಿನಕ್ಕೆ 1,00,000 ಕಿಲೋ ಚಿಕನ್ ಅಗತ್ಯವಿದೆ. ಈಗ ಈ ಪ್ರಾಂತ್ಯದಲ್ಲಿ ಕೇವಲ 50,000-60,000 ಕಿಲೋ ಕೋಳಿ ಮಾಂಸ ಲಭ್ಯವಿದೆ. ಇಲ್ಲಿನ ಅಗತ್ಯಕ್ಕೆ ಶಿವಮೊಗ್ಗ, ಹಾಸನ ಮತ್ತು ಚಿಕ್ಕಮಗಳೂರಿಂದ ಕೋಳಿ ತರಿಸಲಾಗುತ್ತಿದೆ ಎಂದು ಕುಟಿನ್ಹೋ ತಿಳಿಸಿದರು.

ಅಚ್ಚರಿಯೆಂದರೆ ಕೋಳಿ ಮಾಂಸ ಬೆಲೆ ಹೆಚ್ಚಾಗಿದ್ದರೂ ಮೊಟ್ಟೆ ಬೆಲೆ ನಿಯಂತ್ರಣದಲ್ಲಿದೆ. ಶುಕ್ರವಾರ 100 ಮೊಟ್ಟೆ ಬೆಲೆ 440 ರೂ ಆಗಿತ್ತು. ಎರಡ್ಮೂರು ತಿಂಗಳ ಹಿಂದೆ 100 ಮೊಟ್ಟೆಗೆ 380 ರೂ ಆಗಿತ್ತು. “ಬೇಸಗೆಯಲ್ಲಿ ಹೆಚ್ಚಿನವರು ಮೊಟ್ಟೆ ಬಳಕೆ ಮಾಡುವುದಿಲ್ಲ” ಎಂದು ಮೊಟ್ಟೆ ರಖಂ ವ್ಯಾಪಾರಿಗಳು ಹೇಳಿದ್ದಾರೆ.

ಮೀನು ದುಬಾರಿ : ಬೆಲೆಬಾಳುವ ಮೀನು ಅಲಭ್ಯವಾಗಿದ್ದು, ಮೀನಿನ ಬೆಲೆ ಗಗನಕ್ಕೇರಿದೆ. ಈ ಹೊತ್ತಿಗೆ ಭೂತಾಯಿ, ಬಂಗುಡೆ, ಏಡಿ, ಸಿಗಡಿ, ತಾಟೆ ಮೊದಲಾದ ಮೀನುಗಳು ಯಥೇಚ್ಛ ಸಿಗಬೇಕಿದ್ದರೂ, ದೊಡ್ಡ ಮೀನಿನ ಪ್ರಮಾಣ ಕಡಿಮೆಯಾಗಿದ್ದು, ಮೀನಿನ ಬೆಲೆ ದ್ವಿಗುಣಗೊಂಡಿದೆ ಎಂದು ಮಾರುಕಟ್ಟೆ ಮೂಲಗಳು ಹೇಳಿವೆ. ಈಗ ಪಾಂಫ್ರೆಟ್ ಕಿಲೋಗೆ 1,000 ರೂ ಆಗಿದ್ದರೆ, ಕಿಂಗ್‍ಫಿಶ್/ಅಂಜಲಿಗೆ 600-900 ರೂ ಆಗಿದೆ.

Vishwa News 24

Recent Posts

ಶಿರ್ವ: ಆತ್ಮಹತ್ಯೆಗೆ ಪ್ರಚೋದನೆ ; ಮೂವರ ವಿರುದ್ಧ ದೂರು ದಾಖಲು – vishwanews24

ಶಿರ್ವ: ಆತ್ಮಹತ್ಯೆಗೆ ಪ್ರಚೋದನೆ ; ಮೂವರ ವಿರುದ್ಧ ದೂರು ದಾಖಲು ಶಿರ್ವ: ಪತ್ನಿ, ಆಕೆಯ ಸಹೋದರಿ ಮತ್ತು ಪತ್ನಿಗೆ ಇನ್‌ಸ್ಟಾಗ್ರಾಮ್…

1 minute ago

ಹಳೆಯಂಗಡಿ: ನಿಂತಿದ್ದ ಬಸ್ಸಿಗೆ ಟಿಪ್ಪರ್ ಢಿಕ್ಕಿ; ನಾಲ್ವರು ವಿದ್ಯಾರ್ಥಿಗಳಿಗೆ ಗಾಯ – vishwanews24

ಹಳೆಯಂಗಡಿ: ನಿಂತಿದ್ದ ಬಸ್ಸಿಗೆ ಟಿಪ್ಪರ್ ಢಿಕ್ಕಿ; ನಾಲ್ವರು ವಿದ್ಯಾರ್ಥಿಗಳಿಗೆ ಗಾಯ ಹಳೆಯಂಗಡಿ: ಕಿನ್ನಿಗೋಳಿಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಸರ್ವಿಸ್ ಬಸ್ಸಿಗೆ…

22 minutes ago

ಉಡುಪಿ: ಸ್ಪೀಡ್‌ ರಾಡಾರ್‌ ಕೆಮರಾ ಕಣ್ಣು ; ಒಂದು ವಾರದಲ್ಲಿ 47,709 ವಾಹನಗಳು ಸಂಚಾರ ನಿಯಮ ಉಲ್ಲಂಘನೆ  – vishwanews24

ಉಡುಪಿ: ಸ್ಪೀಡ್‌ ರಾಡಾರ್‌ ಕೆಮರಾ ಕಣ್ಣು ; ಒಂದು ವಾರದಲ್ಲಿ 47,709 ವಾಹನಗಳು ಸಂಚಾರ ನಿಯಮ ಉಲ್ಲಂಘನೆ  ಉಡುಪಿ :…

39 minutes ago

CMRL ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ಈಡಿ ದಾಳಿ – vishwanews24

CMRL ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ಈಡಿ ದಾಳಿ ತಿರುವನಂತಪುರಂ: ಕೊಚ್ಚಿನ್…

47 minutes ago

ಮೇ 30-31 ರಂದು ದ.ಕ. ಜಿಲ್ಲೆಗೆ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಭೇಟಿ – vishwanews24

ಮೇ 30-31 ರಂದು ದ.ಕ. ಜಿಲ್ಲೆಗೆ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಭೇಟಿ ಮಂಗಳೂರು: ಭಾರತದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು…

59 minutes ago

ಬೇಕರಿ ತಿನಿಸು, ಚಿಪ್ಸ್‌ಗಳಲ್ಲಿ ಕ್ಯಾನ್ಸರ್ ಕಾರಕ ರಾಸಾಯನಿಕ ಬಣ್ಣಗಳ ಬಳಕೆ: ಆಹಾರ ಸುರಕ್ಷತಾ ಇಲಾಖೆ ವರದಿ ಪ್ರಕಟ – vishwanews24

ಬೇಕರಿ ತಿನಿಸು, ಚಿಪ್ಸ್‌ಗಳಲ್ಲಿ ಕ್ಯಾನ್ಸರ್ ಕಾರಕ ರಾಸಾಯನಿಕ ಬಣ್ಣಗಳ ಬಳಕೆ: ಆಹಾರ ಸುರಕ್ಷತಾ ಇಲಾಖೆ ವರದಿ ಪ್ರಕಟ ಬೆಂಗಳೂರು: ಬೇಕರಿಯ…

1 hour ago