ಮಂಗಳೂರು : ಸಾಮಾನ್ಯವಾಗಿ ಈ ಹೊತ್ತಿಗೆ ಮೀನು ಅಥವಾ ಕೋಳಿ ಮಾಂಸದ ಬೆಲೆ ಕಡಿಮೆಯಾಗಿರುತ್ತದೆ. ದುರದೃಷ್ಟವೋ ಎಂಬಂತೆ ಪ್ರಸಕ್ತ ಹವಾಮಾನದಿಂದ ಮೀನು ಮತ್ತು ಕೋಳಿ ಮಾಂಸ ಪೂರೈಕೆ ಕುಸಿದಿದ್ದು, ಪರಿಸ್ಥಿತಿ ಮಾಂಸಾಹಾರಿಗಳಿಗೆ ಹಿತಕರವಾಗಿಲ್ಲ. ಬೆಲೆ ಗಗನಕ್ಕೇರಿದೆ.
ಎರಡ್ಮೂರು ತಿಂಗಳ ಹಿಂದೆ ಜೀವಂತ ಕೋಳಿ( ಚಿಕನ್/ಬ್ರೋಯ್ಲರ್) ಕಿಲೋಗೆ 70 ರೂ ಆಗಿದ್ದರೆ, ಈಗ 136 ರೂ ಆಗಿದೆ. ಇದೇ ರೀತಿ ಎರಡು ತಿಂಗಳ ಹಿಂದೆ ಚರ್ಮ ಸುಲಿದ ಕೋಳಿ ಕಿಲೋಗೆ 190 ರೂ ಆಗಿದ್ದರೆ ಈಗ 220 ರೂ ಆಗಿದೆ.
ಕಡಿಮೆ ಉತ್ಪಾದನೆ ಮತ್ತು ಹವಾಮಾನ ಬದಲಾವಣೆಯಿಂದ ಈಗ ಮಾಂಸಕ್ಕೆ ಬೆಲೆ ಹೆಚ್ಚಾಗಿದೆ ಎಂದು ಅನುಪಮ ಫೀಡ್ಸ್ ಮತ್ತು ಐಡಿಯಲ್ ಚಿಕನ್ ಆಡಳಿತ ಪಾಲುದಾರ ವಿನ್ಸೆಂಟ್ ಕುಟಿನ್ಹೋ ತಿಳಿಸಿದರು.
“ಅಧಿಕ ಉಷ್ಟಾಂಶವಿದ್ದಾಗ ಕೋಳಿಗಳು ಕಡಿಮೆ ಆಹಾರ ತಿನ್ನುತ್ತವೆ. ಪರಿಣಾಮ ಅವುಗಳ ತೂಕ ಕಡಿಮೆಯಾಗುತ್ತದೆ. ಎರಡನೇಯದಾಗಿ, ಅಧಿಕ ಉಷ್ಟಾಂಶದಿಂದ ಶೇ 10ರಷ್ಟು ಕೋಳಿಗಳು ಸತ್ತಿವೆ. ಹಾಗಾಗಿ ಈಗ ಕೋಳಿ ಮಾಂಸ ಬೆಲೆ ಜಾಸ್ತಿಯಾಗಿದೆ” ಎಂದವರು ವಿವರಿಸಿದರು.
ಮಂಗಳೂರು ನಗರಕ್ಕೆ ದಿನಕ್ಕೆ 1,00,000 ಕಿಲೋ ಚಿಕನ್ ಅಗತ್ಯವಿದೆ. ಈಗ ಈ ಪ್ರಾಂತ್ಯದಲ್ಲಿ ಕೇವಲ 50,000-60,000 ಕಿಲೋ ಕೋಳಿ ಮಾಂಸ ಲಭ್ಯವಿದೆ. ಇಲ್ಲಿನ ಅಗತ್ಯಕ್ಕೆ ಶಿವಮೊಗ್ಗ, ಹಾಸನ ಮತ್ತು ಚಿಕ್ಕಮಗಳೂರಿಂದ ಕೋಳಿ ತರಿಸಲಾಗುತ್ತಿದೆ ಎಂದು ಕುಟಿನ್ಹೋ ತಿಳಿಸಿದರು.
ಅಚ್ಚರಿಯೆಂದರೆ ಕೋಳಿ ಮಾಂಸ ಬೆಲೆ ಹೆಚ್ಚಾಗಿದ್ದರೂ ಮೊಟ್ಟೆ ಬೆಲೆ ನಿಯಂತ್ರಣದಲ್ಲಿದೆ. ಶುಕ್ರವಾರ 100 ಮೊಟ್ಟೆ ಬೆಲೆ 440 ರೂ ಆಗಿತ್ತು. ಎರಡ್ಮೂರು ತಿಂಗಳ ಹಿಂದೆ 100 ಮೊಟ್ಟೆಗೆ 380 ರೂ ಆಗಿತ್ತು. “ಬೇಸಗೆಯಲ್ಲಿ ಹೆಚ್ಚಿನವರು ಮೊಟ್ಟೆ ಬಳಕೆ ಮಾಡುವುದಿಲ್ಲ” ಎಂದು ಮೊಟ್ಟೆ ರಖಂ ವ್ಯಾಪಾರಿಗಳು ಹೇಳಿದ್ದಾರೆ.
ಮೀನು ದುಬಾರಿ : ಬೆಲೆಬಾಳುವ ಮೀನು ಅಲಭ್ಯವಾಗಿದ್ದು, ಮೀನಿನ ಬೆಲೆ ಗಗನಕ್ಕೇರಿದೆ. ಈ ಹೊತ್ತಿಗೆ ಭೂತಾಯಿ, ಬಂಗುಡೆ, ಏಡಿ, ಸಿಗಡಿ, ತಾಟೆ ಮೊದಲಾದ ಮೀನುಗಳು ಯಥೇಚ್ಛ ಸಿಗಬೇಕಿದ್ದರೂ, ದೊಡ್ಡ ಮೀನಿನ ಪ್ರಮಾಣ ಕಡಿಮೆಯಾಗಿದ್ದು, ಮೀನಿನ ಬೆಲೆ ದ್ವಿಗುಣಗೊಂಡಿದೆ ಎಂದು ಮಾರುಕಟ್ಟೆ ಮೂಲಗಳು ಹೇಳಿವೆ. ಈಗ ಪಾಂಫ್ರೆಟ್ ಕಿಲೋಗೆ 1,000 ರೂ ಆಗಿದ್ದರೆ, ಕಿಂಗ್ಫಿಶ್/ಅಂಜಲಿಗೆ 600-900 ರೂ ಆಗಿದೆ.
ಉಡುಪಿ ಮಲಬಾರ್ ಗೋಲ್ಡ್ನಲ್ಲಿ ಹಫೀಝ್ ರೆಹಮಾನ್ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…