ಗ್ಯಾರಂಟಿ ಪಡೆದವರು ಫೀಲ್ಡ್ ಗೆ ಬನ್ನಿ ಎಂದ ಕಾಂಗ್ರೆಸ್ ನಾಯಕರಿಗೆ ಮಂಗಳಾರತಿ ಮಾಡಿದ ಕರಾವಳಿ ಜನ : ವಿಶ್ವ ನ್ಯೂಸ್24 Bharath
ಗ್ಯಾರಂಟಿ ಪಡೆದವರು ಫೀಲ್ಡ್ ಗೆ ಬನ್ನಿ ಎಂದ ಕಾಂಗ್ರೆಸ್ ನಾಯಕರಿಗೆ ಮಂಗಳಾರತಿ ಮಾಡಿದ ಕರಾವಳಿ ಜನ : ವಿಶ್ವ ನ್ಯೂಸ್24 Bharath
ಉಡುಪಿ: ಲೋಕಸಭಾ ಚುನಾವಣೆಗೆ ಕೆಲವು ದಿನಗಳು ಬಾಕಿ ಉಳಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮನೆಮನೆ ಮತ ಪ್ರಚಾರದಲ್ಲಿ ಕರಾವಳಿ ಭಾಗದಲ್ಲಿ ಹಿನ್ನಡೆ ದೊರೆತಿದೆ.
ಕೆಲವೊಂದು ಕ್ಷೇತ್ರದಲ್ಲಿ ಮೊದಲ ಸುತ್ತಿನ ಫೀಲ್ಡಿಗೆ ಕಾರ್ಯಕರ್ತರ ಕೊರತೆಯಾಗಿದ್ದರೆ ಇನ್ನು ಕೆಲವು ಕಡೆ ಜಯಪ್ರಕಾಶ್ ಹೆಗ್ಡೆ ಎಂಬ ಕಾರಣಕ್ಕಾಗಿ ಪಾರ್ಟಿ ಪರ ಫೀಲ್ಡಿಗೆ ಇಳಿಯಲು ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ.
ಇತ್ತ ಕರಾವಳಿ ಭಾಗದಲ್ಲಿ ಗ್ಯಾರಂಟಿ ಯೋಜನೆ ಪಟ್ಟಿಯಲ್ಲಿದ್ದವರನ್ನು ಕರೆಮಾಡಿ ಫೀಲ್ಡಿಗೆ ಬನ್ನಿ ಎಂದು ಕರೆಸಿಕೊಳ್ಳುವ ಪ್ರಯತ್ನ ಮಾಡಿದ ಕಾಂಗ್ರೆಸ್ ಮುಖಂಡರಿಗೆ ಮಹಿಳೆಯರು ಮಖಕ್ಕೆ ಮಂಗಳಾರತಿ ಮಾಡಿದ್ದು ಯೋಜನೆ ಸರ್ಕಾರದ್ದೆ ವಿನಹ ನಿಮ್ಮನೆಯಿಂದ ಬಂದಿಲ್ಲ ಎಂದು ತಿರುಗೇಟು ನೀಡಿದ್ದಾರೆಂಬ ಮಾಹಿತಿ ಹರಿದಾಡುತ್ತಿದೆ.
ಒಟ್ಟಾರೆಯಾಗಿ ಈ ಬಾರಿಯ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರೇ ತಿರುಗಿಬಿದ್ದಿರುವ ಪರಿಣಾಮವಾಗಿ ಕಾಂಗ್ರೆಸ್ ಪರವಾದ ನಿರಾಸಕ್ತಿ ಎದ್ದು ಕಾಣುತ್ತಿದೆ.
ಬ್ಯುರೋ ರಿಪೋರ್ಟ್ ವಿಶ್ವನ್ಯೂಸ್24 Bharath
