ಉಡುಪಿ

ಗ್ರಂಥಾಲಯಕ್ಕೆ ಹೋಗಲು ಹರಸಾಹಸದ ಕೆಲಸ!​​​​​​​!! ಉಡುಪಿ ಗ್ರಂಥಾಲಯ ಪ್ರವೇಶ ಬಾಗಿಲಲ್ಲೇ ನಗರಸಭಾ ಕಚೇರಿ…………

ಗ್ರಂಥಾಲಯ ಚೆನ್ನಾಗಿದ್ದು,ಓದುಗರ ಮನ ತಣಿಸಲು ಸಶಕ್ತವೆನಿಸುವಷ್ಟು ಪುಸ್ತಕ,ಪತ್ರಿಕೆಗಳ ಸಂಗ್ರಹವೂ ಇಲ್ಲಿದೆ. ಆದರೆ ಇಲ್ಲಿಗೆ ಪ್ರವೇಶದ್ದೇ ಸಮಸ್ಯೆ.

ಉಡುಪಿ: ಓದುಗರಿಗೆ ಬೇಕಾದಷ್ಟು ಪುಸ್ತಕ, ಪತ್ರಿಕೆಗಳು ಈ ಗ್ರಂಥಾಲಯದಲ್ಲಿದೆ. ಕಟ್ಟಡವೂ ಚೆನ್ನಾಗಿದೆ. ಆದರೆ ಈ ಗ್ರಂಥಾಲಯಕ್ಕೆ ಪ್ರವೇಶಿಸುವುದೇ ಪ್ರಯಾಸದ ಕೆಲಸ!

ನಗರದ ಕೆ.ಎಂ. ಮಾರ್ಗದಲ್ಲಿ ನಗರಸಭಾ ಕಚೇರಿ ಕಟ್ಟಡಕ್ಕೆ ಹೊಂದಿ ಕೊಂಡಂತೆ ಇರುವ ನಗರ ಕೇಂದ್ರ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯದ ಪ್ರವೇಶ ಬಾಗಿಲಲ್ಲೇ ನಗರಸಭೆಯ ತೆರಿಗೆ ಸ್ವೀಕಾರ ಕಚೇರಿ ಕಾರ್ಯ ನಿರ್ವಹಿಸುತ್ತಿರುವುದ ರಿಂದ ಗ್ರಂಥಾಲಯ ಪ್ರವೇಶಿಸುವವರಿಗೆ ಅಡ್ಡಿಯಾಗಿದೆ.

ಹಿರಿಯರ ಗೋಳು
ಲೈಬ್ರೆರಿ ಕಟ್ಟಡದಲ್ಲೇ ಹಿರಿಯ ನಾಗರಿಕರ ವಿಭಾಗವಿದೆ. ನಿತ್ಯ ಹಲವಾರು ಮಂದಿ ಹಿರಿಯ ನಾಗರಿಕರು ಇಲ್ಲಿಗೆ ಆಗಮಿಸುತ್ತಾರೆ. ವಾಹನ, ಜನ ಸಂದಣಿ ದಾಟಿಕೊಂಡು ಬರಲು ಅವರು ಹರಸಾಹಸ ಪಡಬೇಕಾಗಿದೆ. “ಮೆಟ್ಟಿಲು ಗಳನ್ನಾದರೂ ಏರಬಹುದು. ಆದರೆ ಜನ, ವಾಹನಗಳನ್ನು ದಾಟಿಕೊಂಡು ಬರುವುದು ಕಷ್ಟಸಾಧ್ಯ ವಾಗಿದೆ’ ಎನ್ನುತ್ತಾರೆ ಹಿರಿಯ ನಾಗರಿಕರಾಗಿರುವ ಜಗದೀಶ್‌ ಅವರು.

ಸ್ಪಂದನೆಯೇ ಇಲ್ಲ
ದಾರಿ ಸಮಸ್ಯೆ ಬಗ್ಗೆ ಈಗಾಗಲೇ ದೂರು ಕೊಟ್ಟಿದ್ದೇವೆ. ಆದರೆ ಅಧಿಕಾರಿಗಳು ಇದೊಂದು ಸಮಸ್ಯೆಯೇ ಅಲ್ಲ ಎಂಬಂತೆ ವರ್ತಿಸುತ್ತಾರೆ. ಇಲ್ಲಿನ ಮೆಟ್ಟಿಲುಗಳಲ್ಲಿಯೂ ಸಾಲಾಗಿ ಕುಳಿತು ಕೊಳ್ಳುವವರಿದ್ದಾರೆ. ಇಲ್ಲೇ ಉಗುಳುತ್ತಾರೆ. ಗ್ರಂಥಾಲಯವೆಂದರೆ ಇಷ್ಟೊಂದು ಅಸಡ್ಡೆ ಯಾಕೆ ಎಂಬುದು ಗ್ರಂಥಾಲಯದ ಬಳಕೆದಾರರಾದ ವಿಶಾಲಾಕ್ಷಿ ಅವರ ಪ್ರಶ್ನೆ.

ಕಚೇರಿ ಒಂದು,ಜನ ಹತ್ತಾರು
ಗ್ರಂಥಾಲಯ ಬಾಗಿಲಿನ ಎದುರಲ್ಲಿಯೇ ನಡೆದಾಡಲೂ ಜಾಗವನ್ನು ಬಿಡದೆ  2 ಮೇಜು, ಮೂರು-ನಾಲ್ಕು ಕುರ್ಚಿ ಹಾಕಿ ಕಚೇರಿ ಮಾಡಲಾಗಿದೆ. ಸಿಬಂದಿ, ಸಾರ್ವಜನಿಕರೆಲ್ಲ ಸೇರಿದಾಗ ದಾರಿ ಅಕ್ಷರಶಃ ಮುಚ್ಚಿಯೇ ಹೋಗುತ್ತದೆ. ಇದರ ಜತೆಗೆ ವಾಹನ ಪಾರ್ಕಿಂಗ್‌ ಭರಾಟೆ. ನಗರಸಭೆ ಕಟ್ಟಡದಲ್ಲಿ, ಹೊರಗಡೆ ಸ್ಥಳಾವಕಾಶ ಸಾಕಾಗದೇ ಇರುವುದರಿಂದ  ವಾಹನಗಳನ್ನು ಕೂಡ ಲೈಬ್ರೆರಿ ದ್ವಾರದಲ್ಲಿಯೇ ಪಾರ್ಕಿಂಗ್‌ ಮಾಡಲಾಗುತ್ತದೆ. ಇವುಗಳ ಮಧ್ಯೆ ನುಸುಳಿ ಗ್ರಂಥಾಲಯ ಪ್ರವೇಶಿಸಬೇಕಾದ ಅನಿವಾರ್ಯ ಇಲ್ಲಿನದು.

ಭದ್ರತೆ,ಸ್ವಚ್ಛತೆಗೆ ಗಮನ
ಸಮಸ್ಯೆ ಗಮನಕ್ಕೆ ಬಂದಿದ್ದು, ಅಧಿಕಾರಿಗಳ ಗಮನಕ್ಕೂ ತಂದಿದ್ದೇನೆ. ಆದರೆ ಪ್ರಯೋ ಜನವಾಗಿಲ್ಲ. ಮತ್ತೂಮ್ಮೆ ಆಯುಕ್ತರು ಮತ್ತು ನಗರಸಭೆ ಅಧ್ಯಕ್ಷರ ಜತೆಗೆ ಮಾತ ನಾಡುತ್ತೇನೆ. ಇಲ್ಲಿ  ಭದ್ರತಾ ವ್ಯವಸ್ಥೆ, ಸ್ವಚ್ಛತೆ ಕಾಪಾಡಲು ವ್ಯವಸ್ಥೆ ಆಗಬೇಕಾಗಿದೆ.
– ವಸಂತಿ ಶೆಟ್ಟಿ, ನಗರಸಭಾ ಸದಸ್ಯರು, ಗ್ರಂಥಾಲಯ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರು 

ಗ್ರಂಥಾಲಯ ಪ್ರವೇಶ ಕಷ್ಟ
ಬೆಳಗ್ಗೆ ಹೊತ್ತು ಹೆಚ್ಚು ಜನ ಇರುತ್ತಾರೆ. ಆಗ ಗ್ರಂಥಾಲಯ ಪ್ರವೇಶಿಸುವುದೇ ಕಷ್ಟ. ಒಂದೋ  ಗ್ರಂಥಾಲಯವನ್ನು ಸ್ಥಳಾಂತರಿಸಲಿ, ಇಲ್ಲವೇ ಆ ಕಚೇರಿ ಸ್ಥಳಾಂತರಿಸಲಿ. ಗ್ರಂಥಾಲಯದ ಪ್ರಾಮುಖ್ಯವನ್ನು ಕೂಡ ಅಧಿಕಾರಿಗಳು ಅರಿತುಕೊಳ್ಳಬೇಕು.
– ರೇಣುಕಾ, ವಿದ್ಯಾರ್ಥಿನಿ 

 

 

Vishwa News 24

Recent Posts

ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ – vishwanews24

 ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…

2 days ago

ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ : ಬೆಸ್ಕಾಂ ಸ್ಪಷ್ಟನೆ – vishwanews24

ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ ಬೆಂಗಳೂರು: ರಾಜ್ಯಾದ್ಯಂತ ಜುಲೈ 1 ರಿಂದ ಆರಂಭಗೊಂಡಿರುವ ಗೃಹ ಜ್ಯೋತಿ…

2 days ago

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ – vishwanews24

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ ನವದೆಹಲಿ: ರಾಮನಗರ ಜಿಲ್ಲೆಯಲ್ಲಿ ನಡೆದ ಮತದಾರರ…

2 days ago

ಅಕ್ರಮ ಎಸ್‌ಐಆರ್‌ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್‌ ಸಂಚು : ಶೋಭಾ ಕರಂದ್ಲಾಜೆ ಆರೋಪ – vishwanews24

ಅಕ್ರಮ ಎಸ್‌ಐಆರ್‌ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್‌ ಸಂಚು : ಶೋಭಾ ಕರಂದ್ಲಾಜೆ ಗಂಭೀರ…

2 days ago

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ: ಸಂಸದ ಯದುವೀರ್ ಒಡೆಯರ್ ಆಕ್ಷೇಪ – vishwanews24

ಮೂಲ ನೆಲದಿಂದ ಬೇರ್ಪಡಿಸಿ ಕರಾವಳಿಯ ಮಣ್ಣಿನ ಸಂಸ್ಕೃತಿಯ ಪಾವಿತ್ರ್ಯಕ್ಕೆ ಧಕ್ಕೆ ತರಬೇಡಿ .. ಕರಾವಳಿ ಕಂಬಳವು ತನ್ನದೇ ಆದ ಆಳವಾದ ಸಾಂಪ್ರದಾಯಿಕ…

2 days ago

ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ – vishwanews24

ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ ಮಂಗಳೂರು: ಖಾಸಗಿ ಸಾರಿಗೆ ಸಂಸ್ಥೆಯಾದ…

2 days ago