ಗ್ರಾಮ ವಾಸ್ತವ್ಯದಿಂದ ಚಿಕ್ಕ ಹಳ್ಳಿಗಳ ಸಮಸ್ಯೆ ನಮ್ಮ ಕಣ್ಣನ್ನು ತೆರೆಸಿದೆ : ಸಾ.ರಾ. ಮಹೇಶ್ -Vishwanews24
ಯಾದಗಿರಿ : ಬಿಜೆಪಿ ಈ ಹಿಂದೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಾಗ ಸಿಎಂ ಗ್ರಾಮ ವಾಸ್ತವ್ಯವನ್ನು ಕೊಂಡಾಡಿದ್ದ ಆದರೆ, ಇದೀಗ ಬಿಜೆಪಿ ನಾಯಕರು ಟೀಕೆ ಮಾಡುತ್ತಿದ್ದಾರೆ ಎಂದು ಸಚಿವ ಸಾ.ರಾ. ಮಹೇಶ್ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಿಜೆಪಿಯವರು ಕೂಡ ಗ್ರಾಮವಾಸ್ತವ್ಯದ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು. ಈಗ ಅವರ ಬಳಿ ಅಧಿಕಾರವಿಲ್ಲ ಎಂಬ ಕಾರಣಕ್ಕೆ ಟೀಕಿಸುತ್ತಿದ್ದಾರೆ. ಒಬ್ಬ ಮಂತ್ರಿಯಾಗಿ ಹಳ್ಳಿಯಲ್ಲಿ ಈ ರೀತಿ ವ್ಯವಸ್ಥೆ ಇದೆ ಎಂದು ಗೊತ್ತಿರಲಿಲ್ಲ. ಈ ಗ್ರಾಮ ವಾಸ್ತವ್ಯದಿಂದ ಹಳ್ಳಿಯ ವಾಸ್ತವ ಚಿತ್ರಣ ನಮಗೆ ತಿಳಿಯಿತು ಎಂದರು.
ಗ್ರಾಮ ವಾಸ್ತವ್ಯದಿಂದ ಚಿಕ್ಕ ಹಳ್ಳಿಗಳ ಸಮಸ್ಯೆ ನಮ್ಮ ಕಣ್ಣನ್ನು ತೆರೆಸಿದೆ. ಈ ಸಮಸ್ಯೆ ನಿವಾರಣೆಗೆ ಸರ್ಕಾರದ ಕ್ರಮ ವಹಿಸಲಿದೆ.
ವಿಧಾನಸೌಧದಲ್ಲಿ ಎಷ್ಟೋ ಜನರಿಗೆ ಸಿಎಂ ಭೇಟಿಗೆ ಅವಕಾಶವಿರುವುದಿಲ್ಲ. ಆದರೆ, ಇಡೀ ಸರ್ಕಾರ ಇಲ್ಲಿಗೆ ಬಂದಿದ್ದರಿಂದ ಜನರ ಸಮಸ್ಯೆಗಳು ನಿವಾರಣೆ ಆಗಲಿದೆ. ಸರ್ಕಾರ ಆಡಳಿತ ಕೂಡ ಚುರಕಾಗಲಿದೆ. ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸ ಮಾಡುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.
