Featured

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ 2021 : ಧನಂಜಯ್ ಅತ್ಯುತ್ತಮ ನಟ, ದಿಯಾ ಖ್ಯಾತಿಯ ಖುಷಿ ಅತ್ಯುತ್ತಮ ನಟಿ -Vishwanews24

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ 2021 : ಧನಂಜಯ್ ಅತ್ಯುತ್ತಮ ನಟ, ದಿಯಾ ಖ್ಯಾತಿಯ ಖುಷಿ ಅತ್ಯುತ್ತಮ ನಟಿ -Vishwanews24

ಬೆಂಗಳೂರು: ‘ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ 2021’ರಲ್ಲಿ ‘ಪಾಪ್‌ಕಾರ್ನ್‌ ಮಂಕಿ ಟೈಗರ್‌’ ಚಿತ್ರಕ್ಕಾಗಿ ನಟ ಧನಂಜಯ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಜೊತೆಗೆ ‘ದಿಯಾ’ ಚಿತ್ರದಲ್ಲಿನ ನಟನೆಗಾಗಿ ಖುಷಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ

ಭಾನುವಾರ ಸಂಜೆ ಚಾಮರಾಜಪೇಟೆಯ ಕನ್ನಡ ಚಲನಚಿತ್ರ ಕಲಾವಿದ ಸಂಘದಲ್ಲಿ ಈ ಕಾರ್ಯಕ್ರಮ ನಡೆಯಿತು. ದಿಯಾ ಚಿತ್ರವು 2020ನೇ ಸಾಲಿನ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದರೆ, ಆ್ಯಕ್ಟ್ 1978 ಚಿತ್ರಕ್ಕೆ ನಿರ್ದೇಶಕ ಮಾಂಸೋರೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ. 2020ರಲ್ಲಿ ತೆರೆಕಂಡ ಕನ್ನಡ ಚಿತ್ರಗಳಲ್ಲಿ ಅತ್ಯುತ್ತಮವಾದ ಚಿತ್ರಗಳನ್ನು ಸಿನೆಮಾ ಪತ್ರಕರ್ತರು 21 ವಿಭಾಗಗಳಲ್ಲಿ ಆಯ್ಕೆ ಮಾಡಿದ್ದರು. ದಿಯಾ ಚಿತ್ರವು ಒಟ್ಟು ಐದು ಪ್ರಶಸ್ತಿ, ಪಾಪ್‌ಕಾರ್ನ್‌ ಮಂಕಿ ಟೈಗರ್ ಚಿತ್ರಕ್ಕೆ ನಾಲ್ಕು ಹಾಗೂ ಜಂಟಲ್‌ಮನ್ ಚಿತ್ರಕ್ಕೆ ಮೂರು ಪ್ರಶಸ್ತಿಗಳು ದೊರೆತಿವೆ.

ಮಂಗಳೂರು : ಬಿಜೆಪಿ ಎಸ್‌ಡಿಪಿಐ ಅನ್ನು ಬೆಳೆಸುತ್ತಿದೆ , ಮೊದಲು ಪಿಎಫ್ಐ ಹಾಗೂ ಎಸ್‌‌ಡಿಪಿಐ ಅನ್ನು ನಿಷೇಧಿಸಲಿ: ಸಿದ್ದರಾಮಯ್ಯ -Vishwanews24

ಮನುಷ್ಯೇತರ ವಿಭಾಗದಲ್ಲಿ ಸಿಂಬಾ ಎಂಬ ನಾಯಿಗೆ ಪ್ರಶಸ್ತಿ: ನಾನು ಮತ್ತು ಗುಂಡ ಸಿನಿಮಾದಲ್ಲಿ ಕಾಣಿಸಿಕೊಂಡ  ‘ಸಿಂಬಾ’ ಎಂಬ ನಾಯಿ ಮನುಷ್ಯೇತರ ವಿಭಾಗದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದೆ. ಎಂಟು ವರ್ಷದ ಈ ಲ್ಯಾಬ್ರಡಾರ್ ನಾಯಿಗೆ ‍‘ನಾನ್‌ ಹ್ಯೂಮನ್‌’ ವರ್ಗದಲ್ಲಿ ಪ್ರಶಸ್ತಿ ಕೊಡಲಾಗಿದೆ. ಮಲಯಾಳಂನ ‘ಬ್ಯಾಂಗಲೂರ್‌ ಡೇಸ್‌’, ಗುಲ್ಟು ಹಾಗೂ ಶಿವಾಜಿ ಸುರತ್ಕಲ್‌ ಚಿತ್ರಗಳಲ್ಲೂ ಸಿಂಬಾ ಕಾಣಿಸಿಕೊಂಡಿತ್ತು.

ಪ್ರಶಸ್ತಿ ಪಟ್ಟಿ

1. ಅತ್ಯುತ್ತಮ ಪೋಷಕ ನಟ: ಅಚ್ಯುತ್ ಕುಮಾರ್(ಮಾಯಾ ಬಜಾರ್‌)
2. ಅತ್ಯುತ್ತಮ ಪೋಷಕ ನಟಿ: ತಾರಾ ಅನುರಾಧಾ(ಶಿವಾರ್ಜುನ)
3. ಅತ್ಯುತ್ತಮ ಚಿತ್ರಕಥೆ: ಅಭಿಜಿತ್ ವೈ.ಆರ್‌. ಮತ್ತು ಆಕಾಶ್ ಶ್ರೀವತ್ಸ್( ಶಿವಾಜಿ ಸುರತ್ಕಲ್)
4. ಅತ್ಯುತ್ತಮ ಬಾಲನಟ/ನಟಿ: ಆರಾಧ್ಯ ಎನ್. ಚಂದ್ರ(ಜಂಟಲ್‌ಮನ್‌)
5. ಅತ್ಯುತ್ತಮ ಸಂಗೀತ ನಿರ್ದೇಶಕ: ರಘು ದೀಕ್ಷಿತ್(ಲವ್ ಮಾಕ್ಟೈಲ್‌)

6. ಅತ್ಯುತ್ತಮ ಹಿನ್ನೆಲೆ ಸಂಗೀತ: ಅಜನೀಶ್ ಲೋಕನಾಥ್(ದಿಯಾ)
7. ಅತ್ಯುತ್ತಮ ಗೀತ ರಚನೆ: ನಾಗಾರ್ಜುನ ಶರ್ಮ ಮತ್ತು ಕಿನ್ನಿಲ್ ರಾಜ್(ಜಂಟಲ್‌ಮನ್ – ಮರಳಿ ಮನಸಾಗಿದೆ)
8. ಅತ್ಯುತ್ತಮ ಗಾಯಕ: ಸಂಚಿತ್ ಹೆಗ್ಡೆ (ಜಂಟಲ್‌ಮನ್– ಮರಳಿ ಮನಸಾಗಿದೆ)
9. ಅತ್ಯುತ್ತಮ ಗಾಯಕಿ: ಚಿನ್ಮಯಿ ಶ್ರೀಪಾದ (ದಿಯಾ–ಸೋಲ್ ಆಫ್ ದಿಯಾ)
10. ಅತ್ಯುತ್ತಮ ಛಾಯಾಗ್ರಹಣ: ಶೇಖರ್ ಎಸ್‍( ಪಾಪ್‌ಕಾರ್ನ್‌ ಮಂಕಿ ಟೈಗರ್)
11. ಅತ್ಯುತ್ತಮ ಸಂಭಾಷಣೆ: ಅಶೋಕ್ ಕೆ.ಎಸ್(ದಿಯಾ)
12. ಅತ್ಯುತ್ತಮ ಸಂಕಲನ: ದೀಪು ಎಸ್ ಕುಮಾರ್(ಪಾಪ್‌ಕಾರ್ನ್‌ ಮಂಕಿ ಟೈಗರ್)
13. ಅತ್ಯುತ್ತಮ ನೃತ್ಯ ಸಂಯೋಜನೆ: ಎ.ಹರ್ಷ(ಮಾಯಾ ಬಜಾರ್– ಲೋಕ ಮಾಯಾ ಬಜಾರ)
14. ಅತ್ಯುತ್ತಮ ಸಾಹಸ: ಜಾಲಿ ಬಾಸ್ಟಿನ್(ಪಾಪ್‌ಕಾರ್ನ್‌ ಮಂಕಿ ಟೈಗರ್)
15. ಅತ್ಯುತ್ತಮ ಕಲಾ ನಿರ್ದೇಶನ: ಗುಣ(ಬಿಚ್ಚುಗತ್ತಿ)
16. ಅತ್ಯುತ್ತಮ ವಿಎಫ್‌ಎಕ್ಸ್: ಕಾಣದಂತೆ ಮಾಯವಾದನು

ರಾಜ್ಯಾದ್ಯಂತ ಎಲ್ಲ ಮದುವೆ ನಡೆಯುವ ಕಡೆ ಓರ್ವ ಮಾರ್ಷಲ್ ಯೋಜನೆ: ಸುಧಾಕರ್ -Vishwanews24

Vishwa News 24

Recent Posts

ಕಾಪು: ಫ್ಲ್ಯಾಟ್ ನಿರ್ಮಿಸಿ ಹಸ್ತಾಂತರಿಸುವುದಾಗಿ ಭರವಸೆ ನೀಡಿ 15 ಲಕ್ಷ ರೂ.ವಂಚನೆ – vishwanews24

ಕಾಪು: ಫ್ಲ್ಯಾಟ್ ನಿರ್ಮಿಸಿ ಹಸ್ತಾಂತರಿಸುವುದಾಗಿ ಭರವಸೆ ನೀಡಿ 15 ಲಕ್ಷ ರೂ.ವಂಚನೆ ಕಾಪು: ಫ್ಲ್ಯಾಟ್ ನಿರ್ಮಿಸಿ ಹಸ್ತಾಂತರಿಸುವುದಾಗಿ ಭರವಸೆ ನೀಡಿ…

3 hours ago

ಹಾಸನ : ಡೆತ್ ನೋಟ್ ಬರೆದಿಟ್ಟು ಪ್ಯಾರಾಮೆಡಿಕಲ್ ವಿದ್ಯಾರ್ಥಿ ಆತ್ಮಹತ್ಯೆ – vishwanews24

ಹಾಸನ : ಡೆತ್ ನೋಟ್ ಬರೆದಿಟ್ಟು ಪ್ಯಾರಾಮೆಡಿಕಲ್ ವಿದ್ಯಾರ್ಥಿ ಆತ್ಮಹತ್ಯೆ ಹಾಸನ: ಡೆತ್ ನೋಟ್ ಬರೆದಿಟ್ಟು 21 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿಯೋರ್ವ…

3 hours ago

ಮೂಳೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ – vishwanews24

ಮೂಳೂರು ಹಾಲು ಉತ್ಪಾದಕರ ಸಹಕಾರ ಸಂಘ ಸಭೆ ೨೦೨೩-೨೦೨೪ ಮೂಳೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ…

4 hours ago

ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ತರಕಾರಿಗಳಿಗೆ ಕೆಮಿಕಲ್‌ ಸ್ಪ್ರೇ ಬಗ್ಗೆ ಕ್ರಮ : ಖಾದರ್‌ – vishwanews24

ಆನ್‌ಲೈನ್‌ನಲ್ಲಿ ಮಾರಾಟ ಮಾಡೋ ತರಕಾರಿಗೆ ಕೆಮಿಕಲ್‌ ಸ್ಪ್ರೇ ಮಾಡುವ ಬಗ್ಗೆ ದೂರು ಬಂದಿದೆ.. ಪರಿಶೀಲನೆ ಮಾಡ್ತಿದ್ದೇವೆ, ಮುಂದಿನ ದಿನಗಳಲ್ಲಿ ಕ್ರಮ…

5 hours ago

ಕಾಸರಗೋಡು : ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದ ಆ್ಯಂಬುಲೆನ್ಸ್ ; ರೋಗಿ ಮೃತ್ಯು, ನಾಲ್ವರಿಗೆ ಗಾಯ – vishwanews24

ಕಾಸರಗೋಡು : ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದ ಆ್ಯಂಬುಲೆನ್ಸ್ ; ರೋಗಿ ಮೃತ್ಯು, ನಾಲ್ವರಿಗೆ ಗಾಯ ಕಾಸರಗೋಡು :…

5 hours ago

ಇನ್ನು ಮುಂದೆ ರಾಜ್ಯ ಸರ್ಕಾರದ ಯಾವುದೇ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಎರಡು ಚರಣ ಮಾತ್ರ ಬಳಕೆ:  CM ಡಿ.ಕೆ. ಶಿ ಸ್ಪಷ್ಟನೆ – vishwanews24

ರಾಜ್ಯ ಸರ್ಕಾರದ ಯಾವುದೇ ಕಾರ್ಯಕ್ರಮಗಳಲ್ಲಿ ಇನ್ನು ಮುಂದೆ ವಂದೇ ಮಾತರಂನ ಎರಡು ಚರಣ ಮಾತ್ರ ಬಳಕೆ:  ಡಿ.ಕೆ. ಶಿ ಸ್ಪಷ್ಟನೆ…

5 hours ago