ಕಾಪು: ಜನರಿಂದ ಜನರಿಗಾಗಿ ಜನರಿಗೋಸ್ಕರ ಆಯ್ಕೆಯಾದ ಮುಖ್ಯಮಂತ್ರಿ ಕಾಪುವಿಗೆ ಬರುವ ಹಿನ್ನಲೆಯಲ್ಲಿ ನಗರದೊಳಗೆ ಹಲವಾರು ತಿಂಗಳಿನಿಂದ ಧೂಳು ಕೆಸರಿನಿಂದ ಕಿತ್ತು ಹೋಗಿದ್ದ ರಸ್ತೆಗೆ ಕಡೆಗೂ ಟಾರ್ ಬಿದ್ದಿದೆ.
ನೂರಾರು ಪ್ರಯಾಣಿಕರು ಈ ಬಗ್ಗೆ ಹತ್ತು ಹಲವು ಬಾರಿ ಸಂಬಂಧಿಸಿದ ಇಲಾಖೆಯ ಗಮನಕ್ಕೆ ತಂದಿದ್ದರು ಕ್ಯಾರೇ ಅನ್ನದ ಅಧಿಕಾರಿ ಹಾಗೂ ಚುನಾಯಿತ ಪ್ರತಿನಿಧಿಗಳು ಶನಿವಾರ ನಿದ್ದೆಯಿಂದ ಎದ್ದಂತೆ ಕಾಣುತ್ತಿದೆ.
ಸೋಮವಾರ ಕಾಪು ಪೇಟೆಯ ಒಳಭಾಗದಲ್ಲಿ ನಡೆಯುವ ಬಿಜೆಪಿ ಸಮಾವೇಶಕ್ಕೆ ಮುಖ್ಯಮಂತ್ರಿ ಆಗಮಿಸುವ ಕಾರಣ ಅವರಿಗೋಸ್ಕರವೇ ಕಳಪೆ ಗುಣಮಟ್ಟದಲ್ಲಿ ರಸ್ತೆಗೆ ಡಾಂಬರು ಹಾಕುವ ಕಾರ್ಯಕ್ಕೆ ಇಂದು ಚಾಲನೆ ದೊರಕಿದೆ.
ಮಣಿಪಾಲ : ಕುಡಿದ ಮತ್ತಿನಲ್ಲಿ ಯುವತಿ ಬೀದಿ ರಂಪಾಟ – Vishwanews24
ಪ್ರಜೆಗಳ ಸಮಸ್ಯೆ ಬಗೆಹರಿಸಲು ಇಲ್ಲದ ಶಾಸಕರ ಕಾಳಜಿ ಪ್ರಜೆಗಳ ದೊರೆ ಆಗಮಿಸುವ ಸಮಯದಲ್ಲಿ ರೋಡಿಗೆ ಟಾರ್ ಹಾಕುವ ಮುಖೇನ ತನ್ನ ಕಾಳಜಿ ತೋರಿಸುತ್ತಿರುವುದು ವಿಪರ್ಯಾಸವಾಗಿದೆ.
ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರಿ ಅಕ್ರೋಶದ ಮಾತುಗಳು ಕೇಳಿ ಬರುತ್ತಿದ್ದು ಜನ ಸಾಮನ್ಯರಿಗೆ ಪ್ರಯಾಣಿಸಲು ಕಷ್ಟವೆನಿಸಿದಾಗ ಸರಿ ಮಾಡಲಾಗದ ರಸ್ತೆಯನ್ನು ಮುಖ್ಯಮಂತ್ರಿ ಆಗಮಿಸುವ ಸಮಯದಲ್ಲಿ ಸರಿ ಮಾಡುತ್ತಿದ್ದಾರೆ ಇದೆಲ್ಲಾ ಯಾವ ನ್ಯಾಯ…?? ಹಾಗದರೇ ಮತ ಹಾಕುವ ಮತದಾರರ ಮಾತಿಗೆ ಕಾಪುವಿನಲ್ಲಿ ಕಿಂಚಿತ್ತು ಬೆಲೆಯಿಲ್ಲವೇ..?? ಕೇವಲ ಮಂತ್ರಿ-ಶಾಸಕ-ಮುಖ್ಯಮಂತ್ರಿಗಳಿಗೆ ಮಾತ್ರವೇ ಇಲ್ಲಿ ಬೆಲೆ ಎಂಬ ಪ್ರಶ್ನೆ ಹಾಕುತ್ತಿದ್ದಾರೆ.
ಅದು ಕೂಡ ಈಗ ಹಾಕುತ್ತಿರುವ ಡಾಂಬರು ಮುಖ್ಯಮಂತ್ರಿಗಳ ಹಿಂದೆ ಮುಂದಿರುವ ಕಾರುಗಳ ಚಕ್ರಗಳಿಗೆ ಸಿಳುಕಿ ಅವರ ಹಿಂದೆಯೇ ಹೋಗುತ್ತದೆ ಅಷ್ಟೊಂದು ಕಳಪೆ ಗುಣಮಟ್ಟದಾಗಿದ್ದು ಯಾರ ಕಣ್ಣಿಗೆ ಮಣ್ಣೆರೆಚುವ ಯತ್ನ ಮಡುತ್ತಿದ್ದಾರೆಂದು ಸಾರ್ವಜಜಿಕರು ಪ್ರಶ್ನೆ ಮಾಡುತ್ತಿದ್ದಾರೆ.
ಕಾಪುವಿಗೆ ಹೊಸ ಮೆರುಗು ತರಲಿದೆ ಹೋಟೆಲ್ “ಕೆ ಒನ್”.. ಹೊಸ ಆಡಳಿತ- ಮಾಲಕತ್ವದೊಂದಿಗೆ ನಾಳೆ ಶುಭಾರಂಭ – Vishwanews24
ಉಡುಪಿ : ಆ. 20 ರಂದು ನೇರ ಸಂದರ್ಶನ ಉಡುಪಿ : ನಗರದ ಅಂಬಲಪಾಡಿ ಕರಾವಳಿ ಬೈಪಾಸ್ ಬಳಿಯ ರೀಗಲ್…
ಉಡುಪಿ: ಗೃಹ ಜ್ಯೋತಿ ಫಲಾನುಭವಿಗಳು ಮರುಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಿ: ರಮೇಶ್ ಕಾಂಚನ್ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆಗಳ ಮರುಪರಿಶೀಲನೆಗೆ…
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹ: ಆ.22ರಂದು ಉಡುಪಿಯಲ್ಲಿ ಸಭೆ ಉಡುಪಿ: ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ…
ಉಡುಪಿ: ಗಣಪತಿ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಹೆಚ್ಚುವರಿ ಸಂಚಾರ ಉಡುಪಿ: ಗಣಪತಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಬೇಡಿಕೆಗೆ ಅನುಸಾರ…
ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ ಮೃತದೇಹ ಪತ್ತೆ ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೈತ್ಯ ಗಾತ್ರದ ಅಲೆಗೆ…
ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ ಬೆಂಗಳೂರು : ನಟಿ ಅನುಪಮಾ ಗೌಡ ಅವರು ನಟನೆಯ ಮೂಲಕ…