ಜಮ್ಮ-ಕಾಶ್ಮೀರದಲ್ಲಿರುವ ಭಯೋತ್ಪಾದನೆಯನ್ನು ಮೋದಿ ಐದು ವರ್ಷದ ಅವಧಿಯಲ್ಲಿ ನಿಶ್ಚಿತವಾಗಿ ನಿಲ್ಲಿಸುತ್ತಾರೆ :ಪ್ರಮೋದ್ ಮುತಾಲಿಕ್ -Vishwanews24
ಧಾರವಾಡ: ಭಯೋತ್ಪಾದನೆ ವಿರುದ್ಧ ಹೋರಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಈಗ ಎಲ್ಲ ರೀತಿಯ ಕ್ರಮ ಕೈಗೊಂಡಿದೆ. ಉಗ್ರವಾದವನ್ನು ಸಂಪೂರ್ಣ ನಿಯಂತ್ರಿಸಲು ಮೋದಿ ಪಣ ತೊಟ್ಟಿದ್ದಾರೆ ಎಂದು ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಯೋತ್ಪಾದನೆ ಅನ್ನೋದು ಈಗ ಜಮ್ಮ-ಕಾಶ್ಮೀರಕ್ಕೆ ಮಾತ್ರ ಸಿಮೀತವಾಗಿದೆ. ಅದನ್ನು ಈ ಐದು ವರ್ಷದ ಅವಧಿಯಲ್ಲಿ ಮೋದಿ ನಿಶ್ಚಿತವಾಗಿ ಅಲ್ಲಿಯೂ ನಿಲ್ಲಿಸುತ್ತಾರೆ ಎಂದು ಹೇಳಿದರು.
ಪಾಕಿಸ್ತಾನದಲ್ಲಿ 40 ಸಾವಿರಕ್ಕೂ ಅಧಿಕ ಉಗ್ರರು ಇದ್ದಾರೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರೇ ಹೇಳಿಕೊಂಡಿದ್ದಾರೆ. ಅವರನ್ನು ನಾಶ ಮಾಡಬೇಕು. 40 ಸಾವಿರ ಉಗ್ರರು ಇಡೀ ಜಗತ್ತು ನಡುಗಿಸುವಂತಹದ್ದು, ಅವರನ್ನು ನಾಶ ಮಾಡಲು ಭಾರತದ ಸಹಾಯವನ್ನು ಪಾಕ್ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

