ಜಲಪ್ರಳಯದಿಂದ ಮನೆ ತೋಟ ಕಳೆದುಕೊಂಡಿರುವ ನಿರಾಶ್ರಿತರಿಗೆ ಮನೆಯಲ್ಲಿ ಆಶ್ರಯ ನೀಡಿ ಊಟ ಉಪಚಾರ ಮಾಡುತ್ತಿರುವ ಅಗರೀಮಾರ್ ಜಲಜಾಕ್ಷಿ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು : ಜಲಪ್ರಳಯದಿಂದ ಮನೆ ತೋಟ ಕಳೆದುಕೊಂಡಿರುವ ನಿರಾಶ್ರಿತರಿಗೆ ಮನೆಯಲ್ಲಿ ಆಶ್ರಯ ನೀಡಿ ಊಟ ಉಪಚಾರಾ ಮಾಡುತ್ತಿರುವ ಅಗರೀಮಾರ್ ಜಲಜಾಕ್ಷಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಉಂಟಾದ ಜಲಪ್ರವಾಹದಲ್ಲಿ ಮನೆ, ತೋಟ, ಗದ್ದೆ ಸರ್ವಸ್ವವನ್ನೂ ಕಳೆದುಕೊಂಡಿರುವ ನೆರೆ ಸಂತ್ರಸ್ಥರಿಗೆ ತನ್ನ ಮನೆಯಲ್ಲೇ ನೆಲೆ, ಆಶ್ರಯ ನೀಡಿ ಊಟ ಉಪಚಾರ ಮಾಡುತ್ತಿದ್ದಾರೆ ಅಗರೀಮಾರ್ ಜಲಜಾಕ್ಷಿ . ಜಲಪ್ರವಾಹ ಉಂಟಾದ ದಿನದಿಂದ ಇಂದಿನವರೆಗೂ ಅವರು ಸುಮಾರು 56 ಮಂದಿ ನಿರಾಶ್ರಿತರಿಗೆ ಮನೆಯಲ್ಲಿ ಊಟ ಉಪಚಾರ ನೀಡುತ್ತಿದ್ದಾರೆ.

ಅಗರೀಮಾರ್ ಜಲಜಾಕ್ಷಿ ಅವರ ಈ ಸೇವಾ ಕಾರ್ಯಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ.