ಮಂಗಳೂರು: ಸುರತ್ಕಲ್ ಟೋಲ್ ಗೇಟ್ ನ್ನು, ಡಿ.1ರಿಂದ ಹೆಜಮಾಡಿ ಟೋಲ್ ಗೇಟ್ ನೊಂದಿಗೆ ವಿಲೀನ ಮಾಡುವಂತೆ ಸರಕಾರ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹೆಜಮಾಡಿಯಲ್ಲಿ ಟೋಲ್ ಗೇಟ್ ಶುಲ್ಕ ಪರಿಷ್ಕೃರಿಸಿದೆ.ಹೀಗಾಗಿ ನಿರೀಕ್ಷೆಯಂತೆ ಹೆಜಮಾಡಿಯಲ್ಲಿ ಸುಂಕ ದುಬಾರಿಯಾಗಲಿದೆ.
ಹೆಜಮಾಡಿ ಟೋಲ್ ಗೇಟ್ನಲ್ಲಿ ಟೋಲ್ ಸಂಗ್ರಹಕ್ಕೆ ಯಾವುದೇ ಅಡ್ಡಿ ಅಥವಾ ತೊಂದರೆ ನೋಡಿಕೊಳ್ಳಬೇಕು ಮತ್ತು ಒಂದು ವೇಳೆ ಹೆಜಮಾಡಿಯಲ್ಲಿ ವಿಲೀನದ ಬಳಿಕ ಏರಿಕೆಯಾದ ಸುಂಕದ ಬಳಿಕ ಯಾವುದೇ ಸಮಸ್ಯೆಯಾಗಿ ಟೋಲ್ ಸಂಗ್ರಹದಲ್ಲಿ ವ್ಯತ್ಯಯ ಉಂಟಾದರೆ ಎನ್ಎಚ್ಎಐ ಜತೆಗಿನ ರಾಜ್ಯ ಸಹಕಾರ ಒಪ್ಪಂದದಂತೆ ನಷ್ಟವನ್ನು ರಾಜ್ಯವೇ ಭರಿಸಬೇಕುಎಂದು ಎನ್ಎಚ್ಎಐ ಆದೇಶದಲ್ಲಿ ಹೇಳಲಾಗಿದೆ.
ಇದಲ್ಲದೆ ಇದುವರೆಗೆ ಸುರತ್ಕಲ್ ಟೋಲ್ಗೇಟ್ನಲ್ಲಿ ಕೆಎ 19 ನೋಂದಣಿಯ ಕಾರುಗಳಿಗೆ ಇದ್ದ ರಿಯಾಯಿತಿ ರದ್ದಾಗಲಿದೆ.
ಪರಿಷ್ಕೃತ ಟೋಲ್ ಶುಲ್ಕ ಇಂತಿದೆ:
ಏಕಮುಖ ಸಂಚಾರ : ಜೀಪ್, ವ್ಯಾನ್ ಅಥವಾ ಲಘು ಮೋಟಾರು ವಾಹನ:ಸುರತ್ಕಲ್ ನಲ್ಲಿ 60 ರೂ., ಹೆಜಮಾಡಿಯಲ್ಲಿ 40 ರೂ., ಹೆಜಮಾಡಿಯಲ್ಲಿ ಪರಿಷ್ಕೃತ ಟೋಲ್ ಶುಲ್ಕ 100 ರೂ.
ಲಘು ವಾಣಿಜ್ಯ ವಾಹನ ,ಲಘು ಸರಕು ವಾಹನ ಅಥವಾ ಮಿನಿ ಬಸ್: ಸುರತ್ಕಲ್ ನಲ್ಲಿ ರೂ 100 ಮತ್ತು ಹೆಜಮಾಡಿಯಲ್ಲಿ ರೂ 70, ಹೆಜಮಾಡಿಯ ಪರಿಷ್ಕೃತ ಟೋಲ್ ಶುಲ್ಕ 170 ರೂ.
ಬಸ್ ಅಥವಾ ಟ್ರಕ್ (2 ಆಕ್ಸೆಲ್ಗಳು)ಸುರತ್ಕಲ್ ನಲ್ಲಿ ರೂ 210 ಮತ್ತು ಹೆಜಮಾಡಿಯಲ್ಲಿ ರೂ 145, ಹೆಜಮಾಡಿ ಪರಿಷ್ಕೃತ ಟೋಲ್ ಶುಲ್ಕ355ರೂ.
ಭಾರೀ ಕನ್ಸ್ಟ್ರಕನ್ ಮೆಶಿನರಿ ಅಥವಾ ಮಲ್ಟಿ ಆಕ್ಸಲ್ ವಾಹನ ಮೂರರಿಂದ ಆರು ಆಕ್ಸೆಲ್ಗಳುಸುರತ್ಕಲ್ ನಲ್ಲಿ 325 ರೂ., ಹೆಜಮಾಡಿಯಲ್ಲಿ 225 ರೂ., ಪರಿಷ್ಕೃತ ಶುಲ್ಕ 550 ರೂ.
ಏಳು ಅಥವಾ ಹೆಚ್ಚಿನ ಆಕ್ಸೆಲ್ಗಳ ಭಾರೀ ಗಾತ್ರದ ವಾಹನಸುರತ್ಕಲ್ ನಲ್ಲಿ 400 ರೂ., ಹೆಜಮಾಡಿಯಲ್ಲಿ 275 ರೂ., ಪರಿಷ್ಕೃತ ಶುಲ್ಕ 675 ರೂ.
ದ್ವಿಮುಖ ಸಂಚಾರ: ಜೀಪ್, ವ್ಯಾನ್ ಅಥವಾ ಲಘು ಮೋಟಾರು ವಾಹನ ಸುರತ್ಕಲ್ ನಲ್ಲಿ 90 ರೂ., ಹೆಜಮಾಡಿಯಲ್ಲಿ 65 ರೂ., ಹೆಜಮಾಡಿಯಲ್ಲಿ ಪರಿಷ್ಕೃತ ಟೋಲ್ ಶುಲ್ಕ 155 ರೂ.
ಲಘು ವಾಣಿಜ್ಯ ವಾಹನ ಲಘು ಸರಕು ವಾಹನ ಅಥವಾ ಮಿನಿ ಬಸ್ ಸುರತ್ಕಲ್ ನಲ್ಲಿ ರೂ 150 ಮತ್ತು ಹೆಜಮಾಡಿಯಲ್ಲಿ ರೂ 100, ಹೆಜಮಾಡಿ 250 ರಲ್ಲಿ ಪರಿಷ್ಕೃತ ಟೋಲ್ ಶುಲ್ಕ
ಬಸ್ ಅಥವಾ ಟ್ರಕ್ (2 ಆಕ್ಸೆಲ್ಗಳು)ಸುರತ್ಕಲ್ ನಲ್ಲಿ 310 ರೂ., ಹೆಜಮಾಡಿಯಲ್ಲಿ 215 ರೂ., ಹೆಜಮಾಡಿಯಲ್ಲಿ ಪರಿಷ್ಕೃತ ಟೋಲ್ ಶುಲ್ಕ 525 ರೂ.
ಭಾರೀ ನಿರ್ಮಾಣ ಯಂತ್ರಗಳು ಅಥವಾ ಭೂಮಿ ಚಲಿಸುವ ಉಪಕರಣಗಳು ಅಥವಾ ಮಲ್ಟಿ ಆಕ್ಸಲ್ ವಾಹನ ಮೂರರಿಂದ ಆರು ಆಕ್ಸೆಲ್ಗಳು ಸುರತ್ಕಲ್ ನಲ್ಲಿ 490 ರೂ., ಹೆಜಮಾಡಿಯಲ್ಲಿ 335 ರೂ., ಪರಿಷ್ಕೃತ ಶುಲ್ಕ 825 ರೂ.
ಭಾರೀ ಗಾತ್ರದ ವಾಹನ ಏಳು ಅಥವಾ ಹೆಚ್ಚಿನ ಆಕ್ಸೆಲ್ಗಳು ಸುರತ್ಕಲ್ ನಲ್ಲಿ 595 ರೂ., ಹೆಜಮಾಡಿಯಲ್ಲಿ 410 ರೂ., ಪರಿಷ್ಕೃತ ಶುಲ್ಕ 1,005 ರೂ.
ಉಡುಪಿ : ಆ. 20 ರಂದು ನೇರ ಸಂದರ್ಶನ ಉಡುಪಿ : ನಗರದ ಅಂಬಲಪಾಡಿ ಕರಾವಳಿ ಬೈಪಾಸ್ ಬಳಿಯ ರೀಗಲ್…
ಉಡುಪಿ: ಗೃಹ ಜ್ಯೋತಿ ಫಲಾನುಭವಿಗಳು ಮರುಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಿ: ರಮೇಶ್ ಕಾಂಚನ್ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆಗಳ ಮರುಪರಿಶೀಲನೆಗೆ…
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹ: ಆ.22ರಂದು ಉಡುಪಿಯಲ್ಲಿ ಸಭೆ ಉಡುಪಿ: ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ…
ಉಡುಪಿ: ಗಣಪತಿ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಹೆಚ್ಚುವರಿ ಸಂಚಾರ ಉಡುಪಿ: ಗಣಪತಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಬೇಡಿಕೆಗೆ ಅನುಸಾರ…
ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ ಮೃತದೇಹ ಪತ್ತೆ ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೈತ್ಯ ಗಾತ್ರದ ಅಲೆಗೆ…
ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ ಬೆಂಗಳೂರು : ನಟಿ ಅನುಪಮಾ ಗೌಡ ಅವರು ನಟನೆಯ ಮೂಲಕ…