Featured

ಡಿ.21ರಂದು ಸಮೀಪದಲ್ಲಿ ಗೋಚರಿಸಲಿವೆ ಗುರು ಹಾಗೂ ಶನಿ ಗ್ರಹ  – Vishwanews24

ಡಿ.21ರಂದು ಸಮೀಪದಲ್ಲಿ ಗೋಚರಿಸಲಿವೆ ಗುರು ಹಾಗೂ ಶನಿ ಗ್ರಹ  – Vishwanews24

ಉಡುಪಿ: ಸೌರವ್ಯೂಹದ ಎರಡು ಬೃಹತ್ ಗ್ರಹಗಳಾದ ಗುರು ಮತ್ತು ಶನಿ ಡಿಸೆಂಬರ್‌ ತಿಂಗಳಿನಲ್ಲಿ ಬಹಳ ಸಮೀಪವಿದ್ದಂತೆ ಕಾಣುತ್ತವೆ. ಸಂಜೆಯ ಪಶ್ಚಿಮ ಆಕಾಶದಲ್ಲಿ ಜೋಡಿ ಗ್ರಹಗಳು ಆಕರ್ಷಣೀಯವಾಗಿ ಕಾಣುತ್ತವೆ ಎಂದು ಪೂರ್ಣಪ್ರಜ್ಞ ಅಮೆಚೂರ್‌ ಆಸ್ಟ್ರೋನಾಮರ್ಸ್‌ ಕ್ಲಬ್‌ನ ಸಂಸ್ಥಾಪಕ ಸಹ ಸಂಚಾಲಕ ಡಾ.ಎ.ಪಿ.ಭಟ್ ತಿಳಿಸಿದ್ದಾರೆ.

ಗುರುಗ್ರಹವು ಸೂರ್ಯನನ್ನು ಒಮ್ಮೆ ಸುತ್ತಲು 11.9 ವರ್ಷ ಬೇಕಾಗುತ್ತದೆ. ಶನಿಗ್ರಹಕ್ಕೆ 29.5 ವರ್ಷಗಳು ಬೇಕಾಗುತ್ತದೆ. ಪ್ರತಿ 20 ವರ್ಷಕ್ಕೊಮ್ಮೆ ಈ ಎರಡು ಗ್ರಹಗಳು ಸಮೀಪದಲ್ಲಿ ಕಾಣುತ್ತವೆಯಾದರೂ ಈ ಸಲ ಹೆಚ್ಚು ಸಮೀಪದಲ್ಲಿ ಕಾಣುತ್ತಿವೆ. ಡಿಸೆಂಬರ್‌ನಲ್ಲಿ ಎರಡೂ ಗ್ರಹಗಳು ಪ್ರತಿದಿನ ಹತ್ತಿರಕ್ಕೆ ಬಂದು 21ರಂದು ಕನಿಷ್ಠ ಅಂತರಕ್ಕೆ ಬರಲಿವೆ.

ಹಿಂದೆ 1,226, ಮಾರ್ಚ್ 4ರಂದು ಗುರು ಹಾಗೂ ಶನಿ ತೀರಾ ಹತ್ತಿರಕ್ಕೆ ಬಂದಿದ್ದವರು. ಮುಂದೆ, 2,080 ಹಾಗೂ 2,400ರಲ್ಲಿ ಈ ಗ್ರಹಮಗಳು ಮತ್ತೆ ಸಮೀಪದಲ್ಲಿ ಕಾಣಲಿವೆ. ಇದೊಂದು ಅಪರೂಪದ ಆಕಾಶದ ವಿದ್ಯಮಾನ ಎಂದು ಎ.ಪಿ.ಭಟ್ ತಿಳಿಸಿದ್ದಾರೆ.

ಗುರು ಗ್ರಹವು ಭೂಮಿಯಿಂದ ಸುಮಾರು 89 ಕೋಟಿ ಕಿ.ಮೀ. ದೂರದಲ್ಲಿದೆ. ಶನಿ ಗ್ರಹವು ಗುರು ಗ್ರಹದಿಂದ ಅಷ್ಟೇ ಆಳದಲ್ಲಿದೆ. ಅಂದರೆ ಭೂಮಿಯಿಂದ ಸುಮಾರು 159 ಕೋಟಿ ಕಿ.ಮೀ. ದೂರದಲ್ಲಿದೆ. ಆದರೂ, ಭೂಮಿಯಿಂದ ನೋಡುವಾಗ ಸಮೀಪ ಬಂದಂತೆ ಭಾಸವಾಗುತ್ತವೆ. ಇದೂ ಆಕಾಶದಲ್ಲಿ ನಡೆಯುವ ಚಮತ್ಕಾರ. ಖಗೋಳ ಆಸಕ್ತರು ಇದನ್ನು ನೋಡಿ ಆನಂದಿಸಬೇಕು ಎನ್ನುತ್ತಾರೆ ಎ.ಪಿ.ಭಟ್ ಅವರು.

Vishwa News 24

Recent Posts

ಕೇರಳ ವಿಧಾನಸಭೆಯ ನೂತನ ಸ್ಪೀಕರ್ ಆಗಿ ತಿರುವಾಂಚೂರ್ ರಾಧಾಕೃಷ್ಣನ್ ಆಯ್ಕೆ -vishwanews24

ಕೇರಳ ವಿಧಾನಸಭೆಯ ನೂತನ ಸ್ಪೀಕರ್ ಆಗಿ ತಿರುವಾಂಚೂರ್ ರಾಧಾಕೃಷ್ಣನ್ ಆಯ್ಕೆ ತಿರುವನಂತಪುರಂ : ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಎಂಟು…

42 minutes ago

ಕಟಪಾಡಿಯಲ್ಲಿ ಮೇ.22 ,23, 24 ರಂದು ಹಲಸು ಮೇಳ – 2026 -vishwanews24

ಕಟಪಾಡಿಯಲ್ಲಿ ಮೇ.22 ,23, 24 ರಂದು ಹಲಸು ಮೇಳ - 2026 ಕಟಪಾಡಿಯ SVS ಕ್ರೀಡಾಂಗಣದಲ್ಲಿ ಮೇ 22 ರಿಂದ…

2 hours ago

ವಿಟ್ಲ : ಅಕ್ರಮ ಗೋ ಸಾಗಾಟ ಆರೋಪ: ಗೋವು ಸಹಿತ ವಾಹನ ಚಾಲಕ ವಶಕ್ಕೆ -vishwanews24

ವಿಟ್ಲ : ಅಕ್ರಮ ಗೋ ಸಾಗಾಟ ಆರೋಪ: ಗೋವು ಸಹಿತ ವಾಹನ ಚಾಲಕ ವಶಕ್ಕೆ ಕೊಳ್ನಾಡು: ಪಂಜರಕೋಡಿ ಎಂಬಲ್ಲಿ ಪಿಕಪ್…

2 hours ago

ಉಡುಪಿ : ಮೀನು ಮಾರಾಟ ಫೆಡರೇಶನ್ ವತಿಯಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ : ಯಶ್ಪಾಲ್ ಸುವರ್ಣ -vishwanews24

ಉಡುಪಿ : ಮೀನು ಮಾರಾಟ ಫೆಡರೇಶನ್ ವತಿಯಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ : ಯಶ್ಪಾಲ್ ಎ ಸುವರ್ಣ ಉಡುಪಿ:…

3 hours ago

ಉಡುಪಿ: ಜೂ.1ರಿಂದ ಡಾ.ಟಿಎಂಎ ಪೈ ಆಸ್ಪತ್ರೆ ಸ್ಥಳಾಂತರ -vishwanews24

ಉಡುಪಿ: ಜೂ.1ರಿಂದ ಡಾ.ಟಿಎಂಎ ಪೈ ಆಸ್ಪತ್ರೆ ಸ್ಥಳಾಂತರ ಉಡುಪಿ : ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆಯು ಉಡುಪಿ ಸ್ವಾಗತ…

3 hours ago

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ -vishwanews24

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ ಬಂಟ್ವಾಳ : ಪಾಣೆಮಂಗಳೂರು ನೇತ್ರಾವತಿ ನದಿಯಲ್ಲಿ ಯುವಕನೋರ್ವನ ಮೃತದೇಹ ಗುರುವಾರ ಪತ್ತೆಯಾಗಿದೆ.…

3 hours ago