ತಿರುಪತಿ ರೈಲು: ಮುರ್ಡೇಶ್ವರ, ಕುಂದಾಪುರ ,ಉಡುಪಿಯಲ್ಲಿ ಉತ್ತಮ ಸ್ಪಂದನೆ  – vishwanews24

Featured, ಉಡುಪಿ

ತಿರುಪತಿ ರೈಲು: ಮುರ್ಡೇಶ್ವರ,ಕುಂದಾಪುರ,ಉಡುಪಿಯಲ್ಲಿ ಉತ್ತಮ ಸ್ಪಂದನೆ 

ಕುಂದಾಪುರ: ವಿಜಯದಶಮಿಯ ದಿವಸ ಅ. 10ರಂದು ಮುರ್ಡೇಶ್ವರಕ್ಕೆ ವಿಸ್ತರಣೆ ಗೊಂಡ ಹೈದರಾಬಾದ್‌ ತಿರುಪತಿ (ರೇಣಿಗುಂಟ)- ಮಂಗಳೂರು ರೈಲು 3 ತಿಂಗಳಲ್ಲೇ ಜನಪ್ರಿಯತೆ ಗಳಿಸಿದೆ. ಉಡುಪಿ, ಕುಂದಾಪುರದಿಂದ ಮಂಗಳೂರು ನಗರಕ್ಕೆ ತೆರಳಿ ಅಲ್ಲಿಂದ ತಿರುಪತಿ ರೈಲು ಹತ್ತುತ್ತಿದ್ದ ಜನರಿಗೆ ಈಗ ಮನೆ ಬಾಗಿಲಿನಲ್ಲೇ ತಿರುಪತಿ ರೈಲು ಏರುವ ಅವಕಾಶ ಸಿಕ್ಕಿದೆ.

ಮೊದಲು ಕಾಸರಗೋಡಿನ ನಂತರ ತುಂಬುತ್ತಿದ್ದ ರೈಲು ಈಗ ಉಡುಪಿ ತಲುಪುವಷ್ಟರಲ್ಲಿ ಕನಿಷ್ಠ ಶೇ 40-50 ಮೀಸಲು ಸೀಟು ತುಂಬಿ ಓಡುತ್ತಿದ್ದು ಜನರಲ್‌ ಬೋಗಿಗಳೂ ಕೂಡ ತುಂಬಿಯೇ ಇರುತ್ತವೆ. ರೈಲಿನ ಬುಕ್ಕಿಂಗ್‌ ವೆಬ್‌ ಸೈಟುಗಳಲ್ಲಿ ಮುರುಡೇಶ್ವರ ರೇಣಿಗುಂಟ ತಿರುಪತಿ ನಡುವೆ ವೇಟಿಂಗ್‌ ಲಿಸ್ಟ್‌ ತೋರಿಸುತ್ತಿದೆ. ಮುರುಡೇಶ್ವರ, ಮಂಗಳೂರು ನಡುವೆ ಫೆಬ್ರವರಿ ತಿಂಗಳ ಬುಕ್ಕಿಂಗ್‌ ಗಮನಿಸಿದರೆ, ಪ್ರತೀ ಪ್ರಯಾಣಕ್ಕೂ ಕೇವಲ 40-50 ಸೀಟುಗಳು ಮಾತ್ರ ಖಾಲಿ ಇರುವುದು ಕಂಡು ಬರುತ್ತಿದೆ.

ಕಾಪು: ಶಾಸಕರಿಂದ ಕಾಮಗಾರಿ ಪರಿಶೀಲಿಸಿ , ಸ್ಥಳೀಯರ ಸಮಸ್ಯೆಗಳ ಬಗ್ಗೆ ಗಮನ ಹರಿಸುವಂತೆ ಸೂಚನೆ – vishwanews24

ಐದು ರಾಜ್ಯಗಳ ಸಂಪರ್ಕ: ಭಾರತದ ದಕ್ಷಿಣ ಭಾಗದ ಎಲ್ಲಾ ಐದೂ ರಾಜ್ಯಗಳ ಮೂಲಕ ಹಾದು ಹೋಗುವ ಈ ರೈಲಿನಿಂದ ಗಾರ್ಮೆಂಟ್‌ ಉದ್ಯಮದ ತಿರುಪುರ್‌, ಆದಿಯೋಗಿ ಕೇಂದ್ರವಾದ ಕೊಯಮತ್ತೂರು, ಗಿರಿಧಾಮ ಊಟಿ, ತೆಲಂಗಾಣದ ಪ್ರಮುಖ ನಗರಗಳ ಸಂಪರ್ಕ ಲಭಿಸಿದೆ. ಈ ರೈಲನ್ನು ಕಾರವಾರಕ್ಕೂ ವಿಸ್ತರಿಸಬೇಕೆಂಬ ಬೇಡಿಕೆ ಕೇಳಿಬಂದಿದೆ.

ಈ ರೈಲಿನ ಅನುಕೂಲ ಹೇಗೆ?
-ಕರಾವಳಿಯಿಂದ ತಿರುಪತಿಗೆ ಬೆಂಗಳೂರು ಮೂಲಕ ರೈಲು ಓಡಿಸಿದರೆ ಕನಿಷ್ಠ 16ರಿಂದ 20 ಗಂಟೆ ಪ್ರಯಾಣದ ಅವಧಿ ಇದೆ.
-ರೇಣಿಗುಂಟ ರೈಲು ಸಂಜೆ ಕುಂದಾಪುರದಿಂದ ಹೊರಟರೆ ಮರುದಿನ ಬೆಳಗ್ಗೆ 11.40ಕ್ಕೆ ರೇಣಿಗುಂಟ ತಲುಪುತ್ತದೆ. ಅಲ್ಲಿಂದ ತಿರುಪತಿ ಪಟ್ಟಣದ 9 ಕಿ.ಮೀ. ದೂರದಲ್ಲಿದೆ.
-ಪ್ರತೀ ಬುಧವಾರ ಮತ್ತು ಶನಿವಾರ ರೈಲು ಹೊರಡುತ್ತದೆ. ಬುಧವಾರ ಹೊರಟವರಿಗೆ ಗುರುವಾರ ತಿರುಪತಿ ತಲುಪಿ, ಶುಕ್ರವಾರ ಸಂಜೆ 4.45ಕ್ಕೆ ರೇಣಿಗುಂಟದಿಂದ ರೈಲು ಹತ್ತಲು ಅವಕಾಶವಿದೆ. ಶನಿವಾರ ಹೊರಟ ವರಿಗೆ ಮರಳಿ ಬರುವ ರೈಲು ಇರುವುದು ಮಂಗಳವಾರ ಸಂಜೆ.

ಕರಾವಳಿಯಿಂದ ತಿರುಪತಿಗೆ ತೆರಳುವ ಭಕ್ತರ ಜತೆಗೆ, ಮಧ್ಯ ಕೇರಳ ಹಾಗು ತಮಿಳುನಾಡಿನಿಂದ ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಬರುವ ಭಕ್ತಾದಿ ಗಳಿಂದಲೂ ರೈಲಿಗೆ ಉತ್ತಮ ಸ್ಪಂದನ ವ್ಯಕ್ತವಾಗಿದೆ.
– ಗಣೇಶ್‌ ಪುತ್ರನ್‌, ಅಧ್ಯಕ್ಷರು, ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಸದಸ್ಯರು, ಕೊಂಕಣ ರೈಲ್ವೇ ಸಲಹಾ ಸಮಿತಿ

ನನಗೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅವಕಾಶ ಕೊಟ್ಟರೆ ನಿಭಾಯಿಸುವೆ : ಶ್ರೀರಾಮುಲು  – vishwanews24

Leave a Reply