ಕುಂದಾಪುರ: ವಿಜಯದಶಮಿಯ ದಿವಸ ಅ. 10ರಂದು ಮುರ್ಡೇಶ್ವರಕ್ಕೆ ವಿಸ್ತರಣೆ ಗೊಂಡ ಹೈದರಾಬಾದ್ ತಿರುಪತಿ (ರೇಣಿಗುಂಟ)- ಮಂಗಳೂರು ರೈಲು 3 ತಿಂಗಳಲ್ಲೇ ಜನಪ್ರಿಯತೆ ಗಳಿಸಿದೆ. ಉಡುಪಿ, ಕುಂದಾಪುರದಿಂದ ಮಂಗಳೂರು ನಗರಕ್ಕೆ ತೆರಳಿ ಅಲ್ಲಿಂದ ತಿರುಪತಿ ರೈಲು ಹತ್ತುತ್ತಿದ್ದ ಜನರಿಗೆ ಈಗ ಮನೆ ಬಾಗಿಲಿನಲ್ಲೇ ತಿರುಪತಿ ರೈಲು ಏರುವ ಅವಕಾಶ ಸಿಕ್ಕಿದೆ.
ಮೊದಲು ಕಾಸರಗೋಡಿನ ನಂತರ ತುಂಬುತ್ತಿದ್ದ ರೈಲು ಈಗ ಉಡುಪಿ ತಲುಪುವಷ್ಟರಲ್ಲಿ ಕನಿಷ್ಠ ಶೇ 40-50 ಮೀಸಲು ಸೀಟು ತುಂಬಿ ಓಡುತ್ತಿದ್ದು ಜನರಲ್ ಬೋಗಿಗಳೂ ಕೂಡ ತುಂಬಿಯೇ ಇರುತ್ತವೆ. ರೈಲಿನ ಬುಕ್ಕಿಂಗ್ ವೆಬ್ ಸೈಟುಗಳಲ್ಲಿ ಮುರುಡೇಶ್ವರ ರೇಣಿಗುಂಟ ತಿರುಪತಿ ನಡುವೆ ವೇಟಿಂಗ್ ಲಿಸ್ಟ್ ತೋರಿಸುತ್ತಿದೆ. ಮುರುಡೇಶ್ವರ, ಮಂಗಳೂರು ನಡುವೆ ಫೆಬ್ರವರಿ ತಿಂಗಳ ಬುಕ್ಕಿಂಗ್ ಗಮನಿಸಿದರೆ, ಪ್ರತೀ ಪ್ರಯಾಣಕ್ಕೂ ಕೇವಲ 40-50 ಸೀಟುಗಳು ಮಾತ್ರ ಖಾಲಿ ಇರುವುದು ಕಂಡು ಬರುತ್ತಿದೆ.
ಐದು ರಾಜ್ಯಗಳ ಸಂಪರ್ಕ: ಭಾರತದ ದಕ್ಷಿಣ ಭಾಗದ ಎಲ್ಲಾ ಐದೂ ರಾಜ್ಯಗಳ ಮೂಲಕ ಹಾದು ಹೋಗುವ ಈ ರೈಲಿನಿಂದ ಗಾರ್ಮೆಂಟ್ ಉದ್ಯಮದ ತಿರುಪುರ್, ಆದಿಯೋಗಿ ಕೇಂದ್ರವಾದ ಕೊಯಮತ್ತೂರು, ಗಿರಿಧಾಮ ಊಟಿ, ತೆಲಂಗಾಣದ ಪ್ರಮುಖ ನಗರಗಳ ಸಂಪರ್ಕ ಲಭಿಸಿದೆ. ಈ ರೈಲನ್ನು ಕಾರವಾರಕ್ಕೂ ವಿಸ್ತರಿಸಬೇಕೆಂಬ ಬೇಡಿಕೆ ಕೇಳಿಬಂದಿದೆ.
ಈ ರೈಲಿನ ಅನುಕೂಲ ಹೇಗೆ?
-ಕರಾವಳಿಯಿಂದ ತಿರುಪತಿಗೆ ಬೆಂಗಳೂರು ಮೂಲಕ ರೈಲು ಓಡಿಸಿದರೆ ಕನಿಷ್ಠ 16ರಿಂದ 20 ಗಂಟೆ ಪ್ರಯಾಣದ ಅವಧಿ ಇದೆ.
-ರೇಣಿಗುಂಟ ರೈಲು ಸಂಜೆ ಕುಂದಾಪುರದಿಂದ ಹೊರಟರೆ ಮರುದಿನ ಬೆಳಗ್ಗೆ 11.40ಕ್ಕೆ ರೇಣಿಗುಂಟ ತಲುಪುತ್ತದೆ. ಅಲ್ಲಿಂದ ತಿರುಪತಿ ಪಟ್ಟಣದ 9 ಕಿ.ಮೀ. ದೂರದಲ್ಲಿದೆ.
-ಪ್ರತೀ ಬುಧವಾರ ಮತ್ತು ಶನಿವಾರ ರೈಲು ಹೊರಡುತ್ತದೆ. ಬುಧವಾರ ಹೊರಟವರಿಗೆ ಗುರುವಾರ ತಿರುಪತಿ ತಲುಪಿ, ಶುಕ್ರವಾರ ಸಂಜೆ 4.45ಕ್ಕೆ ರೇಣಿಗುಂಟದಿಂದ ರೈಲು ಹತ್ತಲು ಅವಕಾಶವಿದೆ. ಶನಿವಾರ ಹೊರಟ ವರಿಗೆ ಮರಳಿ ಬರುವ ರೈಲು ಇರುವುದು ಮಂಗಳವಾರ ಸಂಜೆ.
ಕರಾವಳಿಯಿಂದ ತಿರುಪತಿಗೆ ತೆರಳುವ ಭಕ್ತರ ಜತೆಗೆ, ಮಧ್ಯ ಕೇರಳ ಹಾಗು ತಮಿಳುನಾಡಿನಿಂದ ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಬರುವ ಭಕ್ತಾದಿ ಗಳಿಂದಲೂ ರೈಲಿಗೆ ಉತ್ತಮ ಸ್ಪಂದನ ವ್ಯಕ್ತವಾಗಿದೆ.
– ಗಣೇಶ್ ಪುತ್ರನ್, ಅಧ್ಯಕ್ಷರು, ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಸದಸ್ಯರು, ಕೊಂಕಣ ರೈಲ್ವೇ ಸಲಹಾ ಸಮಿತಿ
ಉಡುಪಿ: ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯಕ್ಕೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಶ್ವಿನ್ ಕೋಟ್ಯಾನ್ ಖಂಡನೆ ಉಡುಪಿ: ಇತ್ತೀಚೆಗೆ ನ್ಯಾಯಯುತವಾದ…
ಐಫೋನ್ ಬದಲು ಆಯಿಲ್ ಕಳುಹಿಸಿದ್ದ ಫ್ಲಿಪ್ಕಾರ್ಟ್ : ಭಾರಿ ದಂಡ ವಿಧಿಸಿದ ಮುಂಬೈನ ಗ್ರಾಹಕ ನ್ಯಾಯಾಲಯ ಮುಂಬೈ: ಆನ್ಲೈನ್ನಲ್ಲಿ ಲಕ್ಷಾಂತರ…
ಕೇಂದ್ರದ ಭರವಸೆಯ ಬಳಿಕ ಸೋನಂ ವಾಂಗ್ಚುಕ್ 26 ದಿನಗಳ ಉಪವಾಸ ಅಂತ್ಯ ನವದೆಹಲಿ: ಹೋರಾಟಗಾರ ಹಾಗೂ ಲಡಾಖ್ನ ಸಾಮಾಜಿಕ ಕಾರ್ಯಕರ್ತ…
ಜು.26ರಂದು ಬೆಂಗಳೂರು ತುಳುವೆರೆ ಚಾವಡಿಯಿಂದ 28ನೇ ವರ್ಷದ ‘ಪರ್ಬದ ಲೇಸ್’ ಕಾರ್ಯಕ್ರಮ ಬೆಂಗಳೂರು: ತುಳುವೆರೆ ಚಾವಡಿಯ 28ನೇ ವರ್ಷದ "ಪರ್ಬದ…
ಬೆಳ್ತಂಗಡಿ: ಚಾರ್ಮಾಡಿ ಘಾಟ್ ನಲ್ಲಿ ಚಿರತೆ ಪ್ರತ್ಯಕ್ಷ ; ವಾಹನ ಸವಾರರಲ್ಲಿ ಆತಂಕ ಬೆಳ್ತಂಗಡಿ,: ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು…
ಸುಳ್ಯ : ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯ: ಯುವಕನ ಬಂಧನ ಸುಳ್ಯ: ಮನೆ ಬಿಟ್ಟು ತೆರಳಿದ್ದ ಅಪ್ರಾಪ್ತ ಬಾಲಕಿಯನ್ನು…