Featured

ದಲಿತರು ಶಿಕ್ಷಣದ ಮೂಲಕ ಸದೃಡರಾಗಿ – ಶ್ರೀ ರಾಯಪ್ಪ, ದ.ಸಂ.ಸ ಕಾಪು ತಾಲೂಕು ಸಮಿತಿ ಉದ್ಘಾಟನೆ.

 

ದ.ಸಂ.ಸ ಕಾಪು ತಾಲೂಕು ಸಮಿತಿ ಉದ್ಘಾಟನೆ.

ಕಾಪು ಸೆ.15 – ಹೊಸದಾಗಿ ರಚನೆಗೊಂಡಿರುವ ಕಾಪು ತಾಲೂಕಿನ ದ.ಸಂ.ಸ ಅಂಬೇಡ್ಕರ್ ವಾದ ತಾಲೂಕು ಸಮಿತಿಯ ನೂತನ ಶಾಖೆಯನ್ನು ಕಾಪು ಪುರಸಭೆಯ ಮುಖ್ಯಾಧಿಕಾರಿ ಶ್ರೀ ರಾಯಪ್ಪನವರು ಉದ್ಘಾಟಿಸಿದರು.

ದಲಿತರು ಶಿಕ್ಷಣದ ಮೂಲಕ ಸದೃಡರಾಗಿ – ಶ್ರೀ ರಾಯಪ್ಪ.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ ರಾಯಪ್ಪನವರು, ದಲಿತರು ಅಂಬೇಡ್ಕರರ ಶಿಕ್ಷಣವೆಂಬ ಮೂಲಮಂತ್ರದ ಮೂಲಕ ಮುನ್ನಡೆದು ಸಡೃದ ಸಮಾಜದ ಕತೃಗಳಾಗಬೇಕು. ದಲಿತರು ಸರಕಾರದ ವಿವಿಧ ಸೌಲಭ್ಯಗಳನ್ನು ಪಡೆಯುವಲ್ಲಿ ತಾಂತ್ರಿಕ ದೋಷಗಳು ಇದ್ದು,ಮುಂದಿನ ದಿನಗಳಲ್ಲಿ ದ.ಸಂ.ಸ ಕಾಪು ತಾಲೂಕು ಸಮಿತಿ ಮುಂದಿನ ದಿನಗಳಲ್ಲಿ ಕಾರ್ಯಯೋಚನೆಗಳನ್ನು ಮಾಡುವಂತಾಗಳಿ ಎಂದು ಶುಭಾಶಯಗಳನ್ನು ನೀಡಿದರು.

ಸಂವಿಧಾನದ ಔಕಟ್ಟಿನೊಳಗೆ ಹೋರಾಟ ಮುಂದುವರಿಯಲಿ. – ಮಹೇಶ್ ಪ್ರಸಾದ್
ಮುಖ್ಯಅತಿಥಿಯಾಗಿ ಮಾತನಾಡಿದ ಕಾಪು ವೃತ್ತ ನಿರೀಕ್ಷಕರಾದ ಶ್ರೀ ಮಹೇಶ್ ಪ್ರಸಾದ್,”ಅಂಬೇಡ್ಕರರ ಸಂವಿಧಾನದ ಪರಿಧಿಯೊಳಗೆ ಕಾನೂನು ಪಾಲಣೆಯೊಂದಿಗೆ ದಲಿತರ ಹಿತರಕ್ಷಣೆ ಕಾಪಾಡುವಂತಗಾಲಿ”ಎಂದರು.

ದಲಿತರ ಸಾಮಾಜಿಕ ನ್ಯಾಯಕ್ಕೆ, ತಮ್ಮ ವ್ಯಾಪ್ತಿಯಿಂದ ಸಂವಿಧಾನದ ಬದ್ದವಾಗಿ ಸಹಕಾರ ನೀಡುವುದರೊಂದಿಗೆ ಕಂದಾಯ ಇಲಾಖ ವ್ಯಾಪ್ತಿಯ ಸಮಸ್ಯೆಗಳ ಪರಿಹಾರಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಕಾಪು ತಾಲೂಕು ತಹಶೀಲ್ದಾರ್ ಶ್ರೀ ಮಹಮ್ಮದ್ ಇಶಾಕ್ ಹೇಳಿದರು.

ವಿದ್ಯಾರ್ಥಿ ಒಕ್ಕೂಟದ ರಾಜ್ಯ ಸಮಿತಿ ಪ್ರಾ.ಕಾರ್ಯದರ್ಶಿ ಶ್ರೀ ಎಸ್ ಎಸ್ ಪ್ರಸಾದ್ ಪ್ರಾಸ್ತಾವಿಕ ಮಾತಾನ್ನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಪ್ರಾ.ಸಂಚಾಲಕ ಸುಂದರ್ ಮಾಸ್ಟರ್ ಹೊಸ ಪದಾಧಿಕಾರಿಗಳಿಗೆ ಪ್ರಮಾಣ ವಚನ ಮಾಡಿದರು.

ಸಮಾಜ ಸೇವಕ ಕಾಪು ಲೀಲಾದರ ಶೆಟ್ಟಿ,ತಾಲೂಕು ಸಮಿತಿ ಪ್ರಾ.ಸಂಚಾಲಕ ಲೋಕೇಶ್ ಅಂಚನ್, ಹಿರಿಯ ಹೋರಾಟಗಾರ ಸುಂದರ್ ಗುಜ್ಜಾರ್ ಬೆಟ್ಟು,ಮಹಿಳಾ ಸಮಿತಿಯ ವಿಮಲ ಅಂಚನ್ ಸಂದರ್ಬೊಚಿತವಾಗಿ ಮಾತನಾಡಿದರು.

ಜಿಲ್ಲಾ ಸಮಿತಿಯ ಪ್ರಾ.ಸಂಚಾಲಕ ಶ್ರೀ ಸುಂದರ್ ಮಾಸ್ಟರ್ ಅದ್ಯಕ್ಷತೆ ವಹಿಸಿದ್ದರು,ಶ್ರೀ ರಾಜೇಂದ್ರ ನಾಥ್,ಶ್ರೀ ರಾಘವೇಂದ್ರ, ಜಗದೀಶ್ ಕಾಪು ವೇದಿಕೆಯಲ್ಲಿದ್ದರು.

ಶಿವರಾಂ ಕಾಪು ಸ್ವಾಗತಿಸಿ, ಸಂತೋಷ್ ನಂಬಿಯಾರ್ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ನೀಡಿದರು.

Vishwa News 24

Recent Posts

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ – vishwanews24

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ ಮಂಗಳೂರು: ಯಕ್ಷಗಾನ…

15 hours ago

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ – vishwanews24

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…

16 hours ago

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ – vishwanews24

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…

16 hours ago

ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್ – vishwanews24

ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ  :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ  ಗೌರವ ಡಾಕ್ಟರೇಟ್ ಮಂಗಳೂರು…

17 hours ago

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ – vishwanews24

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…

18 hours ago

ಕೇಂದ್ರ ಸರ್ಕಾರ ತೈಲ ಬೆಲೆ ಏರಿಸುವ ಮೂಲಕ ನಮ್ಮನ್ನ ಕೊಲೆ ಮಾಡ್ತಿದೆ :  ಡಿಕೆಶಿ – vishwanews24

ಕೇಂದ್ರ ಸರ್ಕಾರ ತೈಲ ಬೆಲೆ ಏರಿಸುವ ಮೂಲಕ ನಮ್ಮನ್ನ ಕೊಲೆ ಮಾಡ್ತಿದೆ :  ಡಿಕೆಶಿ ಬೆಂಗಳೂರು : ಕೇಂದ್ರ ಸರ್ಕಾರ…

18 hours ago