ಉಡುಪಿ

ದೇವರಿಗಾಗಿ ಕೋರ್ಟ್ ಮೆಟ್ಟಿಲೇರಿದ ಶಿರೂರು ಶ್ರೀಗಳು, ಉಡುಪಿ ಕೃಷ್ಣ ಮಠದಲ್ಲಿ ಏನು ನಡೆಯುತ್ತಿದೆಯೆಂಬ ಆತಂಕದಲ್ಲಿ ಭಕ್ತರು…

ಉಡುಪಿ: ಶೀರೂರು ಮಠದ ಶ್ರೀಲಕ್ಷ್ಮೇವರತೀರ್ಥ ಶ್ರೀಪಾದರು ಉಡುಪಿಯ ಹಿರಿಯ ಸಿವಿಲ್‌ ನ್ಯಾಯಾಧೀಶರ ನ್ಯಾಯಾಲಯ ಹಾಗೂ ಸಿವಿಲ್‌ ನ್ಯಾಯಾಧೀಶರ ನ್ಯಾಯಾಲಯದಲ್ಲಿ (ಕಿರಿಯ ವಿಭಾಗ) ಬುಧವಾರ ಕೇವಿಯೆಟ್‌ ಅರ್ಜಿ ಸಲ್ಲಿಸಿದ್ದಾರೆ.  ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರ ಹೊರತು ಆರು ಮಠಗಳ ಎಂಟು ಯತಿಗಳು ಶೀರೂರು ಶ್ರೀಗಳ ವಿರುದ್ಧ ಯಾವುದೇ ದಾವೆ ಹೂಡಿದರೆ ನ್ಯಾಯಾಲಯ ಏಕಪಕ್ಷೀಯ ಮಧ್ಯಂತರ ಆದೇಶ ನೀಡದೆ, ನೋಟಿಸ್‌ ನೀಡಿ ಕೇವಿಯೆಟ್‌ ವಾದ ಆಲಿಸಿ ತೀರ್ಪು ನೀಡಬೇಕು.  ಕೇವಿಯೆಟ್‌ 90 ದಿನಗಳ ಕಾಲ ಅಸ್ತಿತ್ವದಲ್ಲಿ ಇರಲಿದ್ದು, ಪೇಜಾವರ ಮಠದ ಹಿರಿಯ ಯತಿ ಶ್ರೀವಿಶ್ವೇಶತೀರ್ಥರು, ಕಿರಿಯ ಯತಿ ಶ್ರೀವಿಶ್ವಪ್ರಸನ್ನತೀರ್ಥರು, ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥರು, ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥರು, ಸೋದೆ ಶ್ರೀವಿಶ್ವವಲ್ಲಭತೀರ್ಥರು, ಕಾಣಿಯೂರು ಶ್ರೀವಿದ್ಯಾವಲ್ಲಭತೀರ್ಥರು, ಅದಮಾರು ಶ್ರೀವಿಶ್ವಪ್ರಿಯತೀರ್ಥರು, ಕಿರಿಯ ಯತಿ ಶ್ರೀಈಶಪ್ರಿಯತೀರ್ಥರು ಪ್ರತಿವಾದಿಗಳಾಗಿದ್ದಾರೆ.  47 ವರ್ಷಗಳಿಂದ ಶೀರೂರು ಶ್ರೀಲಕ್ಷ್ಮೇವರತೀರ್ಥರು ಯತಿಗಳಾಗಿದ್ದು, ಪ್ರತಿವಾದಿ ಯತಿಗಳು ಶೀರೂರು ಶ್ರೀಗಳ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿ ಏಕಪಕ್ಷೀಯ ಮಧ್ಯಂತರ ಆದೇಶ ಪಡೆದುಕೊಳ್ಳದಂತೆ ಕೇವಿಯೆಟ್‌ ಸಲ್ಲಿಸಲಾಗಿದೆ ಎಂದು ಶೀರೂರು ಶ್ರೀಗಳ ಪರ ಕೇವಿಯೆಟ್‌ ಅರ್ಜಿ ಸಲ್ಲಿಸಿದ ಕುಂದಾಪುರದ ನ್ಯಾಯವಾದಿ ರವಿಕಿರಣ ಮುರ್ಡೇಶ್ವರ ತಿಳಿಸಿದ್ದಾರೆ. 

ಶೀರೂರು ಶ್ರೀಲಕ್ಷ್ಮೇವರತೀರ್ಥ ಶ್ರೀಪಾದರು ಶೀರೂರು ಮಠದ ಪಟ್ಟದ ದೇವರಾದ ವಿಠಲ ದೇವರ ಸಹಿತ ಶ್ರೀದೇವಿ, ಭೂದೇವಿಯ ಮೂರ್ತಿಯನ್ನು ಶ್ರೀಕೃಷ್ಣ ಮಠದಲ್ಲಿಡುತ್ತಿದ್ದು, ಅನಾರೋಗ್ಯಕ್ಕೀಡಾದ ಸಂದರ್ಭ ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯತೀರ್ಥರು ಹಿರಿಯಡ್ಕದಲ್ಲಿರುವ ಮೂಲ ಮಠದಲ್ಲಿ ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದ್ದರು.  ಶ್ರೀರಾಮ ನವಮಿ ಸಂದರ್ಭ ಪಟ್ಟದ ದೇವರನ್ನು ಶ್ರೀಕೃಷ್ಣ ಮಠಕ್ಕೆ ಒಯ್ದು ಉತ್ಸವ ಬಳಿಕ ಶೀರೂರು ಶ್ರೀ ಮರಳಿಸಿದ್ದರು. ವಿಧಾನಸಭೆ ಚುನಾವಣೆ ಪ್ರಚಾರದ ಜತೆಗೆ ನಾಮಪತ್ರ ಸಲ್ಲಿಸಿ, ಹಿಂತೆಗೆದುಕೊಂಡಿದ್ದ ಶೀರೂರು ಶ್ರೀಗಳು ಇದಕ್ಕೂ ಮೊದಲು ಸಪ್ತ ಮಠಾಧೀಶರ ವಿರುದ್ಧ ಚಾನೆಲ್‌ಗೆ ನೀಡಿದ್ದ ಹೇಳಿಕೆ ಅನ್ಯ ಮಠಾಧೀಶರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ.  ಶೀರೂರು ಶ್ರೀಗಳು ಬಹಿರಂಗವಾಗಿ ತಾನು ಸನ್ಯಾಸ ಧರ್ಮ ಪಾಲನೆ ಮಾಡದಿರುವುದನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಕ್ಷಮೆ ಯಾಚಿಸಬೇಕೆಂದು ಪಟ್ಟು ಹಿಡಿದಿದ್ದ ಯತಿಗಳು ಬಳಿಕ ಪೂಜೆ ಸಲ್ಲಿಸುವ ನೈತಿಕತೆಯಿಲ್ಲದವರಿಗೆ ಪಟ್ಟದ ದೇವರನ್ನು ಕೊಡಬಾರದು, ಶೀರೂರು ಶ್ರೀಗಳು ಶಿಷ್ಯ ಸ್ವೀಕಾರ ಮಾಡಬೇಕೆನ್ನುವ ಒತ್ತಡ ಹೇರಿದ್ದಾರೆ.  ಪುತ್ತಿಗೆ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಎರಡು ದಶಕಗಳ ಹಿಂದೆ ಅಮೆರಿಕಕ್ಕೆ ಧರ್ಮ ಪ್ರಸಾರ/ಪ್ರಚಾರಕ್ಕೆ ಹೋಗಿ ಬಂದಾಗ ಶಿಷ್ಯ ಸ್ವೀಕಾರದ ಆಗ್ರಹವಿತ್ತು. ವಿದೇಶಕ್ಕೆ ಹೋಗಿ ಬಂದರೂ ಯತಿ ಧರ್ಮ ಪಾಲನೆ ಮಾಡಿದ ಪುತ್ತಿಗೆ ಶ್ರೀಗಳಿಗೆ ಶಿಷ್ಯ ಸ್ವೀಕಾರ ಕೃಷ್ಣಾಪುರ ಮಠಾಧೀಶರಿಂದಾಗಬೇಕು. ಧಾರ್ಮಿಕವಾಗಿ ತೊಡಗಲು ಷರತ್ತು ವಿಧಿಸಲಾಗಿದೆ.  ಆದರೆ ಶೀರೂರು ಶ್ರೀಗಳು ಸನ್ಯಾಸ ಧರ್ಮ ಪಾಲನೆ ಮಾಡದಿರುವುದನ್ನು ಒಪ್ಪಿಕೊಂಡಿದ್ದರಿಂದ ಶಿಷ್ಯ ಸ್ವೀಕಾರ ಮಾಡುವ ತನಕ ಪಟ್ಟದ ದೇವರನ್ನು ಹಿಂತಿರುಗಿಸದಿರಲು ಪೇಜಾವರ ಶ್ರೀವಿಶ್ವೇಶತೀರ್ಥರ ನೇತೃತ್ವದಲ್ಲಿ ಏಳು ಮಠಾಧೀಶರು ನಿರ್ಧಾರ ತಳೆದಿದ್ದಾರೆ.  ಏಳು ಮಠಗಳ ಯತಿಗಳು ಶೀರೂರು ಶ್ರೀಗಳ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿ ಏಕಪಕ್ಷೀಯ ಮಧ್ಯಂತರ ಆದೇಶ ಪಡೆಯದಂತೆ ಶೀರೂರು ಶ್ರೀ ಕೇವಿಯೆಟ್‌ ಸಲ್ಲಿಸಿದ್ದರೂ ಅನ್ಯ ಯತಿಗಳು ಪಟ್ಟದ ದೇವರನ್ನು ಹಿಂತಿರುಗಿಸುವ, ಶೀರೂರು ಶ್ರೀ ಶಿಷ್ಯರನ್ನು ಸ್ವೀಕರಿಸಬೇಕೆನ್ನುವ ಆಗ್ರಹದ ವಿಚಾರದಲ್ಲಿ ಯತಿಗಳು ಸಭೆ ನಡೆಸಲು, ಹೇಳಿಕೆ ನೀಡಲು ನ್ಯಾಯಾಲಯದಿಂದ ಹೊರಗೆ ಕ್ರಮ ಕೈಗೊಳ್ಳಲು ಯಾವುದೇ ಅಡ್ಡಿ ಕೇವಿಯೆಟ್‌ನಿಂದಾಗದು. 

“ಶೀರೂರು ಮೂಲಮಠದಲ್ಲಿ ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದ ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯತೀರ್ಥರು ಬಳಿಕ ಮೂರ್ತಿಯನ್ನು ಶ್ರೀಕೃಷ್ಣ ಮಠದಲ್ಲಿಟ್ಟು ಮರಳಿಸದೆ ವಿಶ್ವಾಸ ದ್ರೋಹ ಎಸಗಿದ್ದಾರೆ. ಪಟ್ಟದ ದೇವರನ್ನು ಕೊಡದಿದ್ದರೆ ನ್ಯಾಯಾಲಯದ ಮೊರೆ ಹೋಗುವೆ.”  –

ಶ್ರೀಲಕ್ಷ್ಮೇವರತೀರ್ಥ ಶ್ರೀಪಾದರು, ಶೀರೂರು ಮಠ, ಉಡುಪಿ 

Vishwa News 24

Recent Posts

ಶಿರ್ವ : ವ್ಯಕ್ತಿ ನಾಪತ್ತೆ ; ಪ್ರಕರಣ ದಾಖಲು – vishwanews24

ಶಿರ್ವ : ವ್ಯಕ್ತಿ ನಾಪತ್ತೆ ; ಪ್ರಕರಣ ದಾಖಲು ಶಿರ್ವ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಬೆಳಪು ಬಡಿಕೇರಿ ಹೌಸ್ ನಿವಾಸಿ…

8 minutes ago

ಉದ್ಯಾವರ : ರಸ್ತೆ ದಾಟುತ್ತಿದ್ದಾಗ ಕ್ರೇನ್  ಢಿಕ್ಕಿ ; ಮಹಿಳೆ ಸಾವು – vishwanews24

ಉದ್ಯಾವರ : ರಸ್ತೆ ದಾಟುತ್ತಿದ್ದಾಗ ಕ್ರೇನ್  ಢಿಕ್ಕಿ ; ಮಹಿಳೆ ಸಾವು ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಗುಡ್ಡೆಯಂಗಡಿ ಬಳಿ ಗುರುವಾರ…

1 hour ago

ಉಡುಪಿ: ಮಹಾವೀರ ಜಯಂತಿ – ಸಾರ್ವತ್ರಿಕ ರಜೆಯಲ್ಲಿ ಬದಲಾವಣೆ  – vishwanews24

ಉಡುಪಿ: ಮಹಾವೀರ ಜಯಂತಿ ಸಾರ್ವತ್ರಿಕ ರಜೆಯಲ್ಲಿ ಬದಲಾವಣೆ  ಮಾ.31ರ ಮಂಗಳವಾರ ಬದಲಾಗಿ ಮಾ. 30ರ ಸೋಮವಾರ ರಜೆ ಘೋಷಣೆ ಉಡುಪಿ:…

22 hours ago

ಮಾ.30ಕ್ಕೆ ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ – vishwanews24

ಮಾ.30ಕ್ಕೆ ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ ಬೆಂಗಳೂರು: ಮಾ.30ಕ್ಕೆ ನಡೆಯಬೇಕಿದ್ದ ಎಸ್‌ಎಸ್‌ಎಲ್‌ಸಿ ಹಿಂದಿ ಪರೀಕ್ಷೆ  ಮಾ.31ಕ್ಕೆ ಮುಂದೂಡಿಕೆ…

22 hours ago

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ ನಿಯಮದಲ್ಲಿಈ ವರ್ಷವೂ 60 ದಿನಗಳ ವಿನಾಯಿತಿ : ಮಧು ಬಂಗಾರಪ್ಪ – vishwanews24

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ ನಿಯಮದಲ್ಲಿಈ ವರ್ಷವೂ 60 ದಿನಗಳ ವಿನಾಯಿತಿ : ಮಧು ಬಂಗಾರಪ್ಪ ಬೆಂಗಳೂರು:…

23 hours ago

ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ಬ್ರಹ್ಮಕಲಶೋತ್ಸವಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಆಹ್ವಾನ – vishwanews24

ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ಬ್ರಹ್ಮಕಲಶೋತ್ಸವಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಆಹ್ವಾನ ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ…

24 hours ago