ಕಾಪು: ಶಂಕರಪುರ ಸಾಯಿ ಸಾಂತ್ವನ ಮಂದಿರದ ವತಿಯಿಂದ ದಾನಿಗಳೊಬ್ಬರು ನೀಡಿದ ಕಂಬಳಿಯನ್ನ ರಾತ್ರಿ ಹೊತ್ತು ರಸ್ತೆ ಬದಿ ಹಾಗೂ ಬಸ್ ನಿಲ್ದಾಣಗಳಲ್ಲಿ ಮಲಗುವ ನಿರ್ಗತಿಕರಿಗೆ ನೀಡುವ ಮೂಲಕ ಗುರೂಜಿ ಸಾಯಿ ಈಶ್ವರ್ ಮಾನವೀಯತೆ ಮೆರೆದಿದ್ದಾರೆ.
ಗುರುವಾರ ರಾತ್ರಿ ಮಂದಿರದ ಹಿತೈಶಿಗಳ ಜತೆಗೂಡಿ ಉಡುಪಿ ಬಸ್ ನಿಲ್ದಾಣಗಳಲ್ಲಿ ಗಾಳಿಮಳೆಗೆ ಮೈಯೊಡ್ಡಿ ಮಲಗಿರುವ ನಿರ್ಗತಿಕರಿಗೆ ಸುಮಾರು ೫೦ ರಷ್ಟು ಕಂಬಳಿಗಳನ್ನ ನೀಡಿ ಅವರ ಕಷ್ಟಗಳಿಗೆ ಸ್ಪಂದಿಸಿದರು.
ಕಳೆದ ಕೆಲವು ತಿಂಗಳ ಹಿಂದೆ ಸಾಯಿತುತ್ತು ಕಾರ್ಯಕ್ರಮದಡಿ ಬಿಕ್ಷೆ ಬೇಡುವ ನಿರ್ಗತಿಕರಿಗೆ,ಹಸಿವಿನಿಂದ ಬಳಲುತ್ತಿರುವವರಿಗ ಮಧ್ಯಾಹ್ನದ ಊಟ ನೀಡುವ ಯೋಜನೆ ಮತ್ತು ರಸ್ತೆ ಬದಿಯಲ್ಲಿ ಅಫಘಾತವಾಗಿ ಮರಣಹೊಂದುವ ಪ್ರಾಣಿ ಪಕ್ಷಿಗಳನ್ನ ಮಣ್ಣುಮಾಡುವ ಕಾರ್ಯದಲ್ಲಿಯೂ ಕೈಜೋಡಿಸಿರುವುದು ವಿಶೇಷ.
“ದೇವರ ಸೇವೆಯೆಂದರೆ ಕೇವಲ ಪೂಜೆಪುರಸ್ಕಾರ ಮಾತ್ರವಲ್ಲ. ಬಡವ, ನಿರ್ಗತಿಕರ, ಪ್ರಾಣಿ ಪಕ್ಷಿಗಳ ಸೇವೆ ಕೂಡ ದೇವರ ಸೇವೆಯೆಂದು ನಾನು ನಂಬಿದ್ದೆನೆ, ಮತ್ತು ಆಹಾರವಿಲ್ಲದೆ ಯಾರು ಕೂಡ ನಿದ್ರಿಸಬಾರದೆಂಬ ಕಾರಣದಿಂದ ಸಾಯಿತುತ್ತು ಕಾರ್ಯಕ್ರಮ ಅದರ ಜತೆಗೆ ಈ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೂ ಮರಣವಿದೆ, ಮರಣನಂತರ ಅದರದ್ದೆ ಪ್ರಾಣಿಗಳು ರಸ್ತೆಬದಿಯಲ್ಲಿ ಕೊಳೆತುಹೋಗುವ ಬದಲು ಅದಕ್ಕೆ ವಿಧಿವಿಧಾನ ಕಾರ್ಯದೊಂದಿಗೆ ಅಂತ್ಯಕ್ರೀಯೆ ಮುಗಿಸಿದರೆ ಅದುಕ್ಕೂ ಒಂದು ಸಂತೃಪ್ತಿಯಿದೆ ಎಂಬ ನಂಬಿಕೆಯಿಂದ ಈ ಕಾರ್ಯಕ್ಕೆ ಇಳಿದಿದ್ದೆನೆ.ದಾನಿಯೊಬ್ಬರು ನೀಡಿರುವ ಕಂಬಳಿಯನ್ನ ಬಡವರಿಗೆ ಹಂಚಿದ್ದೇವೆ ಇದರಲ್ಲಿ ಸ್ವಾರ್ಥವಿಲ್ಲ ಎಲ್ಲವೂ ದೇವರ ಸೇವೆ”
ಗುರೂಜಿ ಸಾಯಿ ಈಶ್ವರ್
ವಿಶ್ವದ ನಂಬರ್ ೧ ಪೆಂಡ್ಯೂಲಮ್ ಶಾಸ್ತ್ರಜ್ಞ, ಸಾಯಿ ಸಾಂತ್ವನ ಮಂದಿರ ಶಂಕರಪುರ
ಮಲ್ಪೆ : ಸೈಂಟ್ಮೇರೀಸ್ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ ಮೇ 16ರಿಂದ ಸೆಪ್ಟೆಂಬರ್15ರ ವರೆಗೆ ಸಂಪೂರ್ಣ ನಿಷೇಧ ಮಲ್ಪೆ:…
ಜೂನ್ 21ರಂದು ನೀಟ್ ಯುಜಿ ಮರು ಪರೀಕ್ಷೆ ನವದೆಹಲಿ: ಜೂನ್ 21 ರಂದು ನೀಟ್–ಯುಜಿ ಮರು ಪರೀಕ್ಷೆ ನಡೆಸಲಾಗುವುದು ರಾಷ್ಟ್ರೀಯ…
ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ : ಪೃಥ್ವಿರಾಜ್…
ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…
ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…
ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…