ಕಾಪು: ಶಂಕರಪುರ ಸಾಯಿ ಸಾಂತ್ವನ ಮಂದಿರದ ವತಿಯಿಂದ ದಾನಿಗಳೊಬ್ಬರು ನೀಡಿದ ಕಂಬಳಿಯನ್ನ ರಾತ್ರಿ ಹೊತ್ತು ರಸ್ತೆ ಬದಿ ಹಾಗೂ ಬಸ್ ನಿಲ್ದಾಣಗಳಲ್ಲಿ ಮಲಗುವ ನಿರ್ಗತಿಕರಿಗೆ ನೀಡುವ ಮೂಲಕ ಗುರೂಜಿ ಸಾಯಿ ಈಶ್ವರ್ ಮಾನವೀಯತೆ ಮೆರೆದಿದ್ದಾರೆ.
ಗುರುವಾರ ರಾತ್ರಿ ಮಂದಿರದ ಹಿತೈಶಿಗಳ ಜತೆಗೂಡಿ ಉಡುಪಿ ಬಸ್ ನಿಲ್ದಾಣಗಳಲ್ಲಿ ಗಾಳಿಮಳೆಗೆ ಮೈಯೊಡ್ಡಿ ಮಲಗಿರುವ ನಿರ್ಗತಿಕರಿಗೆ ಸುಮಾರು ೫೦ ರಷ್ಟು ಕಂಬಳಿಗಳನ್ನ ನೀಡಿ ಅವರ ಕಷ್ಟಗಳಿಗೆ ಸ್ಪಂದಿಸಿದರು.
ಕಳೆದ ಕೆಲವು ತಿಂಗಳ ಹಿಂದೆ ಸಾಯಿತುತ್ತು ಕಾರ್ಯಕ್ರಮದಡಿ ಬಿಕ್ಷೆ ಬೇಡುವ ನಿರ್ಗತಿಕರಿಗೆ,ಹಸಿವಿನಿಂದ ಬಳಲುತ್ತಿರುವವರಿಗ ಮಧ್ಯಾಹ್ನದ ಊಟ ನೀಡುವ ಯೋಜನೆ ಮತ್ತು ರಸ್ತೆ ಬದಿಯಲ್ಲಿ ಅಫಘಾತವಾಗಿ ಮರಣಹೊಂದುವ ಪ್ರಾಣಿ ಪಕ್ಷಿಗಳನ್ನ ಮಣ್ಣುಮಾಡುವ ಕಾರ್ಯದಲ್ಲಿಯೂ ಕೈಜೋಡಿಸಿರುವುದು ವಿಶೇಷ.
“ದೇವರ ಸೇವೆಯೆಂದರೆ ಕೇವಲ ಪೂಜೆಪುರಸ್ಕಾರ ಮಾತ್ರವಲ್ಲ. ಬಡವ, ನಿರ್ಗತಿಕರ, ಪ್ರಾಣಿ ಪಕ್ಷಿಗಳ ಸೇವೆ ಕೂಡ ದೇವರ ಸೇವೆಯೆಂದು ನಾನು ನಂಬಿದ್ದೆನೆ, ಮತ್ತು ಆಹಾರವಿಲ್ಲದೆ ಯಾರು ಕೂಡ ನಿದ್ರಿಸಬಾರದೆಂಬ ಕಾರಣದಿಂದ ಸಾಯಿತುತ್ತು ಕಾರ್ಯಕ್ರಮ ಅದರ ಜತೆಗೆ ಈ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೂ ಮರಣವಿದೆ, ಮರಣನಂತರ ಅದರದ್ದೆ ಪ್ರಾಣಿಗಳು ರಸ್ತೆಬದಿಯಲ್ಲಿ ಕೊಳೆತುಹೋಗುವ ಬದಲು ಅದಕ್ಕೆ ವಿಧಿವಿಧಾನ ಕಾರ್ಯದೊಂದಿಗೆ ಅಂತ್ಯಕ್ರೀಯೆ ಮುಗಿಸಿದರೆ ಅದುಕ್ಕೂ ಒಂದು ಸಂತೃಪ್ತಿಯಿದೆ ಎಂಬ ನಂಬಿಕೆಯಿಂದ ಈ ಕಾರ್ಯಕ್ಕೆ ಇಳಿದಿದ್ದೆನೆ.ದಾನಿಯೊಬ್ಬರು ನೀಡಿರುವ ಕಂಬಳಿಯನ್ನ ಬಡವರಿಗೆ ಹಂಚಿದ್ದೇವೆ ಇದರಲ್ಲಿ ಸ್ವಾರ್ಥವಿಲ್ಲ ಎಲ್ಲವೂ ದೇವರ ಸೇವೆ”
ಗುರೂಜಿ ಸಾಯಿ ಈಶ್ವರ್
ವಿಶ್ವದ ನಂಬರ್ ೧ ಪೆಂಡ್ಯೂಲಮ್ ಶಾಸ್ತ್ರಜ್ಞ, ಸಾಯಿ ಸಾಂತ್ವನ ಮಂದಿರ ಶಂಕರಪುರ
ಇತಿಹಾಸ ಪ್ರಸಿದ್ಧ ಕಾಪು ಮಾರಿಗುಡಿಗಳಲ್ಲಿ ಜು. 28 ಮತ್ತು 29ರಂದು ವೈಭವದ ಆಟಿ ಮಾರಿಪೂಜೆ ಸಂಭ್ರಮ ಕಾಪು : ಉಡುಪಿ…
ಭಾರೀ ಮಳೆ ಹಿನ್ನೆಲೆ : ಜು.25 ರಂದು ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ- ಕಾಲೇಜುಗಳಿಗೆ ರಜೆ ಮಂಗಳೂರು: ಕರಾವಳಿ ಜಿಲ್ಲೆ…
ನಿರಂತರ ಮಳೆ ಹಿನ್ನೆಲೆ : ಜು.25ರಂದು (ನಾಳೆ)ಉಡುಪಿ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಉಡುಪಿ : ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ…
ಉಡುಪಿ: ಮೀನುಗಾರರಿಗೆ ಯೋಜನೆಗಳ ಮಾಹಿತಿ ತಲುಪಿಸಿ: ಶಾಸಕ ಯಶ್ಪಾಲ್ ಸುವರ್ಣ ಉಡುಪಿ: ಮೀನುಗಾರಿಕೆ ದೇಶದ ಆರ್ಥಿಕತೆಗೆ ಮಹತ್ತರ ಕೊಡುಗೆ ನೀಡುವ…
ನಾಳೆ ಮಧ್ಯಾಹ್ನ ಸಿಜೆಪಿಗೆ ಸರ್ಕಾರದ ನಿರ್ಧಾರ ತಿಳಿಸುತ್ತೇವೆ: ಜೆಪಿ ನಡ್ಡಾ ನವದೆಹಲಿ: ನಾಳೆ ಮಧ್ಯಾಹ್ನ ಮತ್ತೆ ಕಾಕ್ರೋಚ್ ಜನತಾ ಪಾರ್ಟಿ…
ಉಡುಪಿ ಅಕ್ಕಪಡೆ ತ್ವರಿತ ಕಾರ್ಯಾಚರಣೆ : ಕಾಣೆಯಾಗಿದ್ದ 8ನೇ ತರಗತಿ ವಿದ್ಯಾರ್ಥಿ ಸುರಕ್ಷಿತವಾಗಿ ಪತ್ತೆ ಉಡುಪಿ :ಜಿಲ್ಲೆಯಲ್ಲಿ ಕಾಣೆಯಾಗಿದ್ದ ಎಂಟನೇ…