Featured

ದೇವರ ಫೋಟೋಗಳನ್ನು ಎಸೆದು ವಾಸ್ತವದ ನಡುವೆ ಬದುಕಿ ; ರಾಮ ಮಂದಿರ ಕಟ್ಟುವವರಿಗೆ ವೋಟ್ ಹಾಕ್ಬೇಡಿ : ವಿವಾದಾತ್ಮಕ ಹೇಳಿಕೆ ನೀಡಿದ ಪ್ರೊ. ಕೆ.ಎಸ್. ಭಗವಾನ್

ಮೈಸೂರು: ಶಾಲಾ, ಕಾಲೇಜುಗಳಲ್ಲಿ ಓದುವ ಇತಿಹಾಸದಲ್ಲಿನ ಪಠ್ಯಗಳು ಶೇಕಡ 50 ರಷ್ಟು ಸುಳ್ಳು. ಬುದ್ಧ ಬರುವುದಕ್ಕೆ ಮುನ್ನ ಹಿಂದೂ ಧರ್ಮ ಮೂಢನಂಬಿಕೆ, ಕಂದಾಚಾರದಿಂದ ತುಂಬಿದ ಧರ್ಮ ಆಗಿತ್ತು ಎಂದು ವಿವೇಕಾನಂದರೇ ಹೇಳಿದ್ದಾರೆ ಅಂತಾ ಪ್ರಗತಿಪರ ಚಿಂತಕ ಪ್ರೊ. ಕೆ.ಎಸ್. ಭಗವಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಹಿಷ ದಸರಾ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೆ.ಎಸ್​. ಭಗವಾನ್​, ಹರಪ್ಪ ನಾಗರಿಕತೆಯಲ್ಲೇ ಶಿವನ ಹೆಸರಿದೆ. ಶಿವ ಯಜ್ಞ, ಯಾಗಗಳನ್ನು ನಿರಾಕರಿಸಿದವನು. ದೇಶದ ಮೂಲ ದೇವರಾದ ಶಿವನ ದೇವಸ್ಥಾನ ಕಟ್ಟುತ್ತಿಲ್ಲ, ಆದ್ರೆ ಜಾತಿ, ವರ್ಣಭೇದ ಮಾಡಿದ ರಾಮನ ದೇವಸ್ಥಾನ ನಿರ್ಮಾಣ ಮಾಡಲು ಹೊರಟಿದ್ದಾರೆ. ಇರುವುದು ಎರಡು ಜಾತಿ.. ಜನಿವಾರ ಹಾಕಿದವರು, ಜನಿವಾರ ಹಾಕದವರು. ರಾಮಾಯಣದಲ್ಲಿ ರಾಮನ ಬಾಯಲ್ಲಿ ಬುದ್ಧನನ್ನು ಬೈಯಿಸಿದ್ದಾರೆ. ಆದರೆ ಪುರಾಣದಲ್ಲಿ ರಾಮನ ಒಂದು ಅವತಾರ ಬುದ್ಧ ಅಂತ ಹೇಳುತ್ತಾರೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮನುವಾದಿಗಳನ್ನ ತಿರಸ್ಕರಿಸಿ. ರಾಮನ ದೇವಸ್ಥಾನ ಕಟ್ಟಲು ಹೊರಟಿರೋ ಮಂದಿಗೆ ಓಟ್ ಹಾಕ್ಬೇಡಿ. ರಾಮ ಮಂದಿರ ಕಟ್ಟುವ ಹಣವನ್ನು ದೇಶದ ಅಭಿವೃದ್ಧಿಗೆ ಬಳಸಿ. ರಾಮ ಮಂದಿರ ಕಟ್ಟುವ ಬದಲು ಹೊಸ ಡ್ಯಾಂಗಳನ್ನ ಕಟ್ಟಿ. ದೇಶದ ಮೇಲೆ 27 ಬಾರಿ ವಿದೇಶಿಯರಿಂದ ಆಕ್ರಮಣ  ಆಯ್ತು. ನಿಮ್ಮ ರಾಮ, ಚಾಮುಂಡೇಶ್ಚರಿ, ಶಿವ ಎಲ್ಲಿ ಹೋಗಿದ್ರು, ಯಾಕೆ ರಕ್ಷಣೆ ಮಾಡಲಿಲ್ಲ? ಹೀಗಾಗಿ ದೇವರ ಪೊಟೋಗಳನ್ನ ಎಸೆದು ವಾಸ್ತವದ ನಡುವೆ ಬದುಕಿ, ನಮಗೆ ರಾಮರಾಜ್ಯ ಬೇಡ, ಭೀಮರಾಜ್ಯ ಬೇಕು  ಎಂದು ಹೇಳಿದ್ದಾರೆ.

 

 

Vishwa News 24

Recent Posts

ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ :  ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ – vishwanews24

ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ :  ಪೃಥ್ವಿರಾಜ್…

13 hours ago

ಜನಿವಾರ, ಹಿಜಾಬ್, ಉಡುದಾರ, ರುದ್ರಾಕ್ಷಿ ಹಾಕಿಕೊಳ್ಳಬಹುದು ಹೊರತು ಕೇಸರಿ ಶಾಲಿಗೆ ಅವಕಾಶ ಇಲ್ಲ : ಸಿಎಂ ಸ್ಪಷ್ಟನೆ – vishwanews24

ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…

15 hours ago

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ತಮಿಳುನಾಡು ಸರ್ಕಾರ ಆದೇಶ – vishwanews24

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ :  ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…

15 hours ago

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ – vishwanews24

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…

16 hours ago

ಸಕ್ಕರೆ ರಫ್ತಿಗೆ ಸೆ.30 ರವರೆಗೆ ಸಂಪೂರ್ಣ ನಿಷೇಧ ಹೇರಿದ ಸರ್ಕಾರ – vishwanews24

ಸಕ್ಕರೆ ರಫ್ತಿಗೆ ಸೆ.30 ರವರೆಗೆ ಸಂಪೂರ್ಣ ನಿಷೇಧ ಹೇರಿದ ಸರ್ಕಾರ ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆಯನ್ನು ನಿಯಂತ್ರಿಸಲು ಮತ್ತು…

16 hours ago

ಹಿಜಬ್‌ಗೆ ಅವಕಾಶ :ಪ್ರಣಾಳಿಕೆಯಲ್ಲಿ ಸಮಾನತೆಯ ಮಾತು ಕೊಟ್ಟಿದ್ವಿ , ಯಾವುದೇ ಕಾರಣಕ್ಕೂ ಆದೇಶ ವಾಪಸ್ ಪಡೆಯಲ್ಲ : ಮಧು ಬಂಗಾರಪ್ಪ – vishwanews24

ಹಿಜಬ್ ಬಗ್ಗೆ ಮಾತಾಡುವ ಬಿಜೆಪಿಯವರು  ನೀಟ್ ಬಗ್ಗೆ ಮಾತಾಡಲಿ : ಮಧು ಬಂಗಾರಪ್ಪ ಆಕ್ರೋಶ ಬೆಂಗಳೂರು: ಹಿಜಬ್ ಬಗ್ಗೆ ಮಾತಾಡುವ…

16 hours ago