ನಟ ದುನಿಯಾ ವಿಜಯ್ 4 ವರ್ಷದ ಹಿಂದಿನ ಗಲಾಟೆ ಕೇಸ್ ರೀ ಓಪನ್ : ಕೋರ್ಟ್ ಅನುಮತಿಯ ಮೇರೆಗೆ ಪಾನಿಪುರಿ ಕಿಟ್ಟಿ ವಿರುದ್ಧ FIR ದಾಖಲು – Vishwanews24
ನಟ ದುನಿಯಾ ವಿಜಯ್ ಗಲಾಟೆ ಕೇಸ್: ಕೋರ್ಟ್ ಅನುಮತಿಯ ಮೇರೆಗೆ ಪಾನಿಪುರಿ ಕಿಟ್ಟಿ ವಿರುದ್ಧ FIR ದಾಖಲು
ಬೆಂಗಳೂರು: ನಟ ದುನಿಯಾ ವಿಜಯ್ ಹಾಗೂ ಪಾನಿಪುರಿ ಕಿಟ್ಟಿ ಕಳೆದ ನಾಲ್ಕು ವರ್ಷಗಳ ಹಿಂದೆ ಮಾಡಿಕೊಂಡ ಗಲಾಟೆ ಪ್ರಕರಣಕ್ಕೆ ಈಗ ಮರುಜೀವ ಬಂದಿದೆ. ಈ ಸಂಬಂಧ ಪಾನಿಪುರಿ ಕಿಟ್ಟಿ ವಿರುದ್ಧ ಪೊಲೀಸರು ಕೋರ್ಟ್ ಅನುಮತಿಯ ಮೇರೆಗೆ ಎಫ್ಐಆರ್ ದಾಖಲಿಸಿದ್ದಾರೆ.
ಈ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿದಂತ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ಅವರು, ಅಂಬೇಡ್ಕರ್ ಭವನದಲ್ಲಿ ನಡೆದ ಗಲಾಟೆ ಸಂಬಂಧ ನಟ ವಿಜಿ, ಪಾನಿಪುರಿ ಕಿಟ್ಟಿ ದೂರು, ಪ್ರತಿ ದೂರು ದಾಖಲಿಸಿದ್ದರು. ಸದರಿ ಪ್ರಕರಣದಲ್ಲಿ ತನಿಖೆ ನಡೆಸಿ, ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದರು.
ಮಂಗಳೂರು: ಪಂಪವೆಲ್ ಬಳಿ ಲಾಡ್ಜ್ ನಲ್ಲಿ ನಗ್ನ ಸ್ಥಿತಿಯಲ್ಲಿ ವ್ಯಾಪಾರಿಯ ಮೃತದೇಹ ಪತ್ತೆ… Vishwanews24
ಇದೀಗ ಕೋರ್ಟ್ ಅನುಮತಿ ಮೇಲೆ ಪಾನಿಪುರಿ ಕಿಟ್ಟಿ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಿಸಲಾಗಿದೆ. ಅಲ್ಲದೇ ಪ್ರಕರಣ ಸಂಬಂಧ ಪಾನಿಪುರಿ ಕಿಟ್ಟಿಗೆ ನೋಟಿಸ್ ನೀಡಿ ಕರೆಸಲಾಗಿತ್ತು. ಶೇಷಾದ್ರಿಪುರಂ ಎಸಿಪಿ ಪಾನಿಪುರಿ ಕಿಟ್ಟಿಯನ್ನು ವಿಚಾರಣೆ ಕೂಡ ನಡೆಸಿದ್ದಾರೆ ಎಂದು ಹೇಳಿದರು.

