ನನ್ನ ಹೆಲಿಕಾಪ್ಟರ್‌ನ್ನು ನಿಲ್ಲಿಸಿ ಮೋದಿಯವರ ವಿಮಾನಕ್ಕೆ ಆದ್ಯತೆ ನೀಡಿದರು : ಮಲ್ಲಿಕಾರ್ಜುನ ಖರ್ಗೆ ಕಿಡಿ – vishwanews24

Featured, ರಾಷ್ಟ್ರ ನ್ಯೂಸ್

ನನ್ನ ಹೆಲಿಕಾಪ್ಟರ್‌ನ್ನು ನಿಲ್ಲಿಸಿ ಮೋದಿಯವರ ವಿಮಾನಕ್ಕೆ ಆದ್ಯತೆ ನೀಡಿದರು ..

ಇದೇ ಬಿಜೆಪಿ ಸರ್ಕಾರದ ನಿಜ ಸ್ವರೂಪ ಅವರು ಸದಾ ನಮ್ಮ ದಾರಿಗೆ ಅಡ್ಡಬರುತ್ತಾರೆ : ಮಲ್ಲಿಕಾರ್ಜುನ  ಖರ್ಗೆ ಅಸಮಾಧಾನ

ಪಟನಾ: ಬಿಹಾರ ಚುನಾವಣಾ ಪ್ರಚಾರದ ಮಧ್ಯೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶುಕ್ರವಾರ ರೋಹ್ತಾಸ್ ಜಿಲ್ಲೆಯಲ್ಲಿ ನಡೆದ ಚುನಾವಣಾ ರ‍್ಯಾಲಿಗೆ ನಿಗದಿತ ಸಮಯಕ್ಕಿಂತ ಒಂದು ಗಂಟೆ 30 ನಿಮಿಷ ತಡವಾಗಿ ಆಗಮಿಸಿದರು. ಈ ತಡವಾಗುವಿಕೆಗೆ ಕಾರಣ ವಿವರಿಸುತ್ತಾ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ವಿಮಾನಕ್ಕೆ ಆದ್ಯತೆ ನೀಡಿದ ಕಾರಣ ನಾನು ಹೆಲಿಕಾಪ್ಟರ್‌ನಲ್ಲಿಯೇ ಕಾದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

ಸಭೆಯಲ್ಲಿ ಮಾತನಾಡಿದ ಖರ್ಗೆ “ನಾನು ಸಮಯಕ್ಕೆ ಸರಿಯಾಗಿ ಹೊರಟಿದ್ದೆ. ಆದರೆ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗಳು, ಪ್ರಧಾನಿಯವರ ವಿಮಾನ ಹೊರಡುವವರೆಗೆ ಕಾಯಿರಿ ಎಂದು ಹೇಳಿದರು. ಅದರ ಪರಿಣಾಮವಾಗಿ ನಾನು ಹೆಲಿಕಾಪ್ಟರ್‌ನಲ್ಲೇ ಸುಮಾರು 1.5 ಗಂಟೆ ಕಾಲ ಕುಳಿತೇ ಇರಬೇಕಾಯಿತು. ಇದೇ ಬಿಜೆಪಿ ಸರ್ಕಾರದ ನಿಜ ಸ್ವರೂಪ ಅವರು ಸದಾ ನಮ್ಮ ದಾರಿಗೆ ಅಡ್ಡಬರುತ್ತಾರೆ,” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕಡಬ:  9 ನೇ ತರಗತಿ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ – vishwanews24

ಖರ್ಗೆ ತಮ್ಮ ಭಾಷಣದಲ್ಲಿ ಪ್ರಧಾನಿಯವರ ವಿದೇಶ ಪ್ರವಾಸಗಳನ್ನೂ ಟೀಕಿಸಿದರು. “ಮೋದಿಯವರು ತಮ್ಮ ಹೆಚ್ಚಿನ ಸಮಯವನ್ನು ವಿದೇಶಗಳಲ್ಲಿ ಕಳೆಯುತ್ತಾರೆ. ದೇಶದ ಚುನಾವಣೆಗಳು ಬಂದಾಗ ಮಾತ್ರ ಅವರು ಇಲ್ಲಿ ಕಾಣಿಸಿಕೊಳ್ಳುತ್ತಾರೆ. ಈಗ ಪಂಚಾಯತ್ ಮತ್ತು ಪುರಸಭೆ ಚುನಾವಣೆಗಳಿಗೂ ಪ್ರಚಾರ ಮಾಡಲು ಬರುವಂತಾಗಿದೆ,” ಎಂದು ವ್ಯಂಗ್ಯವಾಡಿದರು. ಬಿಹಾರದಲ್ಲಿ ನಡೆಯುತ್ತಿರುವ ಪ್ರಚಾರಯಾತ್ರೆಯಲ್ಲಿ ಖರ್ಗೆ ಅವರು ಹಲವು ಸಭೆಗಳಲ್ಲಿ ಭಾಗವಹಿಸುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಬಲವನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿದ್ದಾರೆ.

ಮಂಗಳೂರು: ಬಹು ಕೋಟಿ ವಂಚನೆ ಪ್ರಕರಣ : ರೋಷನ್ ಸಲ್ಡಾನ 2.85 ಕೋಟಿ ಮೌಲ್ಯದ ಆಸ್ತಿ ಇಡಿ ಮುಟ್ಟುಗೋಲು – vishwanews24

Leave a Reply