ನಮೋ ಅಂದರೆ ನಮಗೆ ಮೋಸವಲ್ಲ, ಮೋದಕ: ಪ್ರಮೋದ್ ಹೇಳಿಕೆಗೆ ಕೋಟ ತಿರುಗೇಟು

ಉಡುಪಿ

ಉಡುಪಿ: ನಮೋ ಅಂದರೆ ನಮಗೆ ಮೋಸವಲ್ಲ, ದೇಶಾದ್ಯಂತ ಸಾಮಾನ್ಯ ಜನರ ಪಾಲಿಗೆ ನಮೋ ಅಂದರೆ ನಮಗೆ ಮೋದಕ ಎನ್ನುವ ಮೂಲಕ ಸಚಿವ ಪ್ರಮೋದ್ ಮಧ್ವರಾಜ್ ಅವರ “ಮೋದಿ ಅಂದರೆ ನಮಗೆ ಮೋಸ” ಹೇಳಿಕೆಗೆ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ತಿರುಗೇಟು ನೀಡಿದ್ದಾರೆ.


ಕಳೆದ ಮೂರು ದಿನಗಳ ಹಿಂದಷ್ಟೆ ನಡೆದ ಕಾಂಗ್ರೆಸ್ ಸಭೆಯಲ್ಲಿ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿ, ಮೋದಿ ಅಂದರೆ ನಮಗೆ ಮೋಸ ಎಂದು ಹೇಳಿಕೆ ನೀಡಿದ್ದರು.
ಸಚಿವ ಮಧ್ವರಾಜ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೋಟ ಶ್ರೀನಿವಾಸ ಪೂಜಾರಿ, ನಮೋ ಅಂದರೆ ಕಾಂಗ್ರೆಸ್ ಪಾಲಿಗೆ ಮೋಸ ಎಂದು ಅನ್ನಿಸಬಹುದು. ಆದರೆ ದೇಶಾದಾದ್ಯಂತ ಸಾಮಾನ್ಯ ಜನರ ಪಾಲಿಗೆ ಇದು ಮೋದಕವಾಗಿದೆ ಎಂದಿದ್ದಾರೆ.


ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾದ ಬಳಿಕ ಭಾರತ ದೇಶದಾದ್ಯಂತ ಅಭಿವೃದ್ದಿ ಮತ್ತು ರಾಷ್ಟ್ರೀಯತೆಯಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು ದೇಶದ ಜನಸಾಮಾನ್ಯರು ಸಂತೃಪ್ತರಾಗುತ್ತಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಮೋ ಶಕ್ತಿ ಏನು ಎಂಬುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ಚೆನ್ನಾಗಿಯೇ ತಿಳಿಯಲಿದೆ ಎಂದಿದ್ದಾರೆ.