ನಾನು ಎಂಟು ಅತ್ಯುನ್ನತ ಬ್ರಾಹ್ಮಣ ಗೋತ್ರಗಳಲ್ಲಿ ಒಂದಾದ ‘ಶಾಂಡಿಲ್ಯ ಗೋತ್ರದವಳು : ಮಮತಾ ಬ್ಯಾನರ್ಜಿ -Vishwanews24
ನಾನು ಎಂಟು ಅತ್ಯುನ್ನತ ಬ್ರಾಹ್ಮಣ ಗೋತ್ರಗಳಲ್ಲಿ ಒಂದಾದ ‘ಶಾಂಡಿಲ್ಯ ಗೋತ್ರದವಳು : ಮಮತಾ ಬ್ಯಾನರ್ಜಿ -Vishwanews24
ಕೋಲ್ಕತ್ತಾ : ಬಂಗಾಳ ಚುನಾವಣೆಯ ಎರಡನೇ ಹಂತದ ಪ್ರಚಾರಕ್ಕಾಗಿ ಮಂಗಳವಾರ(ಮಾ. 30) ತೆರೆ ಬೀಳುತ್ತಿದ್ದಂತೆ, ನಾನು, ಎಂಟು ಅತ್ಯುನ್ನತ ಬ್ರಾಹ್ಮಣ ಗೋತ್ರಗಳಲ್ಲಿ ಒಂದಾದ ‘ಶಾಂಡಿಲ್ಯ ಗೋತ್ರದವಳು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ, ನಂದಿಗ್ರಾಮದಲ್ಲಿ ದೇವಸ್ಥಾನಕ್ಕೆ ಬೇಟಿ ನೀಡಿರುವ ವಿಚಾರಕ್ಕೆ ಸ್ಪಂದಿಸಿದ ಮಮತಾ, ನನ್ನ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ನಾನು ದೇವಸ್ಥಾನಕ್ಕೆ ಭೇಟಿ ನೀಡಿದೆ. ಅಲ್ಲಿ ದೇವಸ್ಥಾನದ ಪುರೋಹಿತರು ನನ್ನ ಗೋತ್ರವನ್ನು ಕೇಳಿದರು, ನಾನು ‘ಮಾ ಮತಿ ಮನುಷ್’ ಎಂದು ಅವರಿಗೆ ಹೇಳಿದೆ ಎಂದು ಹೇಳಿದ್ದಾರೆ.
ತ್ರಿಪುರಾದ ತ್ರಿಪುರೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಅದು ನೆನಪಿಸಿತು. ಅಲ್ಲಿಯೂ ಕೂಡ ಪುರೋಹಿತರು ನನ್ನ ಗೋತ್ರವನ್ನು ಕೇಳಿದ್ದರು, ಆಗ ಕೂಡ ‘ಮಾ ಮತಿ ಮನುಷ್’ ಎಂದು ಹೇಳಿದ್ದೆ. ಆದಾಗ್ಯೂ, ನನ್ನ ಗೋತ್ರ ‘ಶಾಂಡಿಲ್ಯ’ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ : ಬಂಟ್ವಾಳ : ಕಂದಕಕ್ಕೆ ಉರುಳಿದ ಖಾಸಗಿ ಬಸ್ ; ವಿದ್ಯಾರ್ಥಿಗಳು ಸೇರಿ ಹಲವರಿಗೆ ಗಾಯ -Vishwanews24
