ನಾನು ಸಂಪುಟದಲ್ಲಿ ಇರಬೇಕೋ ಬೇಡವೋ ಎಂಬುದನ್ನು ಪಕ್ಷ ತೀರ್ಮಾನಿಸಲಿದೆ : ಡಿಕೆಶಿ

Featured, ರಾಜ್ಯ ನ್ಯೂಸ್

‘ ನಾನು ಸಂಪುಟದಲ್ಲಿ ಇರಬೇಕೋ ಅಥವಾ ಪಕ್ಷದ ಸಾರಥ್ಯದಲ್ಲಿ ಇರಬೇಕೋ ಅನ್ನೋದನ್ನು ಪಕ್ಷ ತಿರ್ಮಾನ ಮಾಡಲಿದೆ. ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧವಾಗಿರುತ್ತೇನೆ. ನಾನು ಪಕ್ಷದಲ್ಲಿ ಯಾವತ್ತೂ ಏಕಾಂಗಿಯಾಗಿಲ್ಲ. ಎಕಾಂಗಿ ನನ್ನ ಜಾಯಮಾನವಲ್ಲ ‘ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಡಿ ಕೆ.ಶಿವಕುಮಾರ ಹೇಳಿಕೆ ನೀಡಿದ್ದಾರೆ. 

‘ ಎಲೆಕ್ಷನ್ ಮುಗಿದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಹೋಗಿದ್ದೆ. ಅದಕ್ಕೆ ನಾನು ಕಾಣ್ತಿಲ್ಲ ಅನ್ನೋದು ಸರಿಯಿಲ್ಲ. ದೇವಸ್ಥಾನಗಳಿಗೆ ಹೋಗಲೇಬಾರದಾ…? ಕೆಪಿಸಿಸಿ ಸಾರಥ್ಯ ಕೊಟ್ರೇ ನೋಡೋಣ. ಹೈಕಮಾಂಡ್ ಏನ್ ತಿರ್ಮಾನ ಆಗಲಿದೆ ಅಂತ ನೋಡಬೇಕಿದೆ ‘ ಎಂದಿದ್ದಾರೆ.

‘ ಎಸ್ ಆರ್ ಪಾಟೀಲ ಯಾಕೆ ರಾಜೀನಾಮೆ ಕೊಟ್ರು ಅಂತ ಗೊತ್ತಿಲ್ಲ. ಅವರು ಪ್ರಮುಖ ನಾಯಕರು. ದಕ್ಷಿಣ ಕರ್ನಾಟಕದ ಭಾಗದಲ್ಲಿ ನಮ್ಮವರು ( ಒಕ್ಕಲಿಗರು ) ಇದ್ದಾರೆ. ಅಲ್ಲಿ ವೀರಶೈವ ಸಮುದಾಯ ಇದೆ. ಚುನಾವಣೆಯಲ್ಲಿ ನಮಗೆ ಓಟ್ ಹಾಕಿದ ಜನ ಸಹ ರಾಜ್ಯದಲ್ಲಿ ಇದ್ದಾರೆ. ಎಲ್ಲರ ಬಗ್ಗೆ ಹೈಕಮಾಂಡ್ ಯೋಚನೆ ಮಾಡಲಿದೆ. ವೀರಶೈವ ರನ್ನು ಕಡೆಗಣಿಸಲು ಸಾಧ್ಯವಿಲ್ಲ. ಸಚಿವ ಸಂಪುಟ ರಚನೆ ವೇಳೆ ವೀರಶೈವರನ್ನು ನೋಡಬೇಕಾಗುತ್ತದೆ ‘ ಎಸ್ ಆರ್ ಪಾಟೀಲ್ ಪರ ಡಿಕೆಶಿ ಬ್ಯಾಟಿಂಗ್ ಮಾಡಿದ್ದಾರೆ.

ಇಂಧನ ಖಾತೆಗಾಗಿ ಕ್ಯಾತೆ ವಿಚಾರವಾಗಿ ಮಾತನಾಡಿದ ಡಿಕೆಶಿ ‘ಸಿಎಂ ಕುಮಾರಸ್ವಾಮಿ ಯಾವ ಹೇಳಿಕೆ ಕೊಟ್ಟಿದ್ದಾರೆ ಅನ್ನೋ ಬಗ್ಗೆ ರಿಯಾಕ್ಟ್ ಮಾಡಲ್ಲ.
ಅವರು ಎನ್ ಹೇಳಿದ್ದಾರೋ ಗೊತ್ತಿಲ್ಲ ‘ ಎಂದರು.