‘ ನಾನು ಸಂಪುಟದಲ್ಲಿ ಇರಬೇಕೋ ಅಥವಾ ಪಕ್ಷದ ಸಾರಥ್ಯದಲ್ಲಿ ಇರಬೇಕೋ ಅನ್ನೋದನ್ನು ಪಕ್ಷ ತಿರ್ಮಾನ ಮಾಡಲಿದೆ. ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧವಾಗಿರುತ್ತೇನೆ. ನಾನು ಪಕ್ಷದಲ್ಲಿ ಯಾವತ್ತೂ ಏಕಾಂಗಿಯಾಗಿಲ್ಲ. ಎಕಾಂಗಿ ನನ್ನ ಜಾಯಮಾನವಲ್ಲ ‘ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಡಿ ಕೆ.ಶಿವಕುಮಾರ ಹೇಳಿಕೆ ನೀಡಿದ್ದಾರೆ.
‘ ಎಲೆಕ್ಷನ್ ಮುಗಿದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಹೋಗಿದ್ದೆ. ಅದಕ್ಕೆ ನಾನು ಕಾಣ್ತಿಲ್ಲ ಅನ್ನೋದು ಸರಿಯಿಲ್ಲ. ದೇವಸ್ಥಾನಗಳಿಗೆ ಹೋಗಲೇಬಾರದಾ…? ಕೆಪಿಸಿಸಿ ಸಾರಥ್ಯ ಕೊಟ್ರೇ ನೋಡೋಣ. ಹೈಕಮಾಂಡ್ ಏನ್ ತಿರ್ಮಾನ ಆಗಲಿದೆ ಅಂತ ನೋಡಬೇಕಿದೆ ‘ ಎಂದಿದ್ದಾರೆ.
‘ ಎಸ್ ಆರ್ ಪಾಟೀಲ ಯಾಕೆ ರಾಜೀನಾಮೆ ಕೊಟ್ರು ಅಂತ ಗೊತ್ತಿಲ್ಲ. ಅವರು ಪ್ರಮುಖ ನಾಯಕರು. ದಕ್ಷಿಣ ಕರ್ನಾಟಕದ ಭಾಗದಲ್ಲಿ ನಮ್ಮವರು ( ಒಕ್ಕಲಿಗರು ) ಇದ್ದಾರೆ. ಅಲ್ಲಿ ವೀರಶೈವ ಸಮುದಾಯ ಇದೆ. ಚುನಾವಣೆಯಲ್ಲಿ ನಮಗೆ ಓಟ್ ಹಾಕಿದ ಜನ ಸಹ ರಾಜ್ಯದಲ್ಲಿ ಇದ್ದಾರೆ. ಎಲ್ಲರ ಬಗ್ಗೆ ಹೈಕಮಾಂಡ್ ಯೋಚನೆ ಮಾಡಲಿದೆ. ವೀರಶೈವ ರನ್ನು ಕಡೆಗಣಿಸಲು ಸಾಧ್ಯವಿಲ್ಲ. ಸಚಿವ ಸಂಪುಟ ರಚನೆ ವೇಳೆ ವೀರಶೈವರನ್ನು ನೋಡಬೇಕಾಗುತ್ತದೆ ‘ ಎಸ್ ಆರ್ ಪಾಟೀಲ್ ಪರ ಡಿಕೆಶಿ ಬ್ಯಾಟಿಂಗ್ ಮಾಡಿದ್ದಾರೆ.
ಇಂಧನ ಖಾತೆಗಾಗಿ ಕ್ಯಾತೆ ವಿಚಾರವಾಗಿ ಮಾತನಾಡಿದ ಡಿಕೆಶಿ ‘ಸಿಎಂ ಕುಮಾರಸ್ವಾಮಿ ಯಾವ ಹೇಳಿಕೆ ಕೊಟ್ಟಿದ್ದಾರೆ ಅನ್ನೋ ಬಗ್ಗೆ ರಿಯಾಕ್ಟ್ ಮಾಡಲ್ಲ.
ಅವರು ಎನ್ ಹೇಳಿದ್ದಾರೋ ಗೊತ್ತಿಲ್ಲ ‘ ಎಂದರು.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…