ಉಡುಪಿ

ನಾವು ಸ್ವಾವಲಂಬಿ ಭಾರತೀಯರಾಗಬೇಕು, ಎಲ್ಲರೂ ಸರಕಾರದಿಂದ ಅನುದಾನ ಪಡೆದರೆ ದೇಶಕ್ಕೆ ಹೊರೆ ಜಾಸ್ತಿ’ : ಅದಮಾರು ಶ್ರೀ -Vishwanews24

ನಾವು ಸ್ವಾವಲಂಬಿ ಭಾರತೀಯರಾಗಬೇಕು, ಎಲ್ಲರೂ ಸರಕಾರದಿಂದ ಅನುದಾನ ಪಡೆದರೆ ದೇಶಕ್ಕೆ ಹೊರೆ ಜಾಸ್ತಿ’ : ಅದಮಾರು ಶ್ರೀ -Vishwanews24

ಉಡುಪಿ: ಶ್ರೀಕೃಷ್ಣ ಮಠಕ್ಕೆ ಕೋವಿಡ್ ಕಾರಣದಿಂದ ಭಕ್ತರ ನಿರ್ಬಂಧವಿರುವುದರಿಂದ ಆದಾಯಕ್ಕೂ ಧಕ್ಕೆಯಾಗಿದೆ.
ಹೀಗಾಗಿ ಬ್ಯಾಂಕ್‌ಗಳಿಂದ 1 ಕೋ.ರೂ. ಸಾಲ ಪಡೆಯಲು ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ನಿರ್ಧರಿಸಿರುವುದು ಸುದ್ದಿಯಾಗಿರುವಂತೆ ಹಲವರಿಂದ ಹಲವು ರೀತಿಯ ಪ್ರತಿಕ್ರಿಯೆ ಗಳು ಬರುತ್ತಿವೆ.

ಸ್ವಾಮೀಜಿ ಅವರನ್ನು “ಸರಕಾರದಿಂದ ಅನುದಾನ ಕೇಳುತ್ತೀರಾ?’ ಎಂದು ಪ್ರಶ್ನಿಸಿದಾಗ “ಕೋವಿಡ್ ಅವಧಿಯಲ್ಲಿ ನಾವೇ ಸರಕಾರಕ್ಕೆ ದೇಣಿಗೆ ಕೊಟ್ಟಿದ್ದೇವೆ. ನಾವು ಸ್ವಾವಲಂಬಿ ಭಾರತೀಯರಾಗಬೇಕು. ನಮಗೂ ಕರ್ತವ್ಯಗಳಿರುತ್ತವೆ. ಎಲ್ಲರೂ ಸರಕಾರದಿಂದ ಕೇಳುತ್ತ ಹೋದರೆ  ಜನಸಾಮಾನ್ಯರ ಮೇಲಿನ ಹೊರೆ ಜಾಸ್ತಿಯಾ ಗುತ್ತದೆ. ಸರಕಾರವಾದರೂ ಎಷ್ಟು ಜನರಿಗೆ ಎಷ್ಟು ಹಣ ಕೊಡಲು ಸಾಧ್ಯ?’ ಎಂದು ಉತ್ತರಿಸಿದರು.

ಶಿಕ್ಷಣ ಸಂಸ್ಥೆ ಆದಾಯ ಮೂಲವಲ್ಲ ಕೆಲವರು ಅದಮಾರು ಮಠಕ್ಕೆ ಅನೇಕ  ಶಿಕ್ಷಣ ಸಂಸ್ಥೆಗಳಿವೆ. ಸಾಲ ಮಾಡುವುದೇಕೆ? ಶಿಕ್ಷಣ ಸಂಸ್ಥೆಗಳಿಂದ ಹಣ ಪಡೆಯ ಬಹುದಲ್ಲವೆ ಎಂದು ಕೇಳುತ್ತಾರೆ. “ಭಾರತ ಸ್ವಾವಲಂಬಿಯಾಗಬೇಕು ಎಂದು ದುಡ್ಡು ಕೊಡುವ ಬದಲು ದುಡ್ಡು ಸಂಪಾದಿಸ ಬೇಕಾದ ಶಿಕ್ಷಣ ಕೊಡುವ ಸಂಸ್ಥೆಗಳನ್ನು ಶ್ರೀ ವಿಬುಧೇಶತೀರ್ಥರು ಸ್ಥಾಪಿಸಿದರು.

ಶ್ರೀ ವಿಶ್ವಪ್ರಿಯ ತೀರ್ಥರು ತಮಗೆ ಬಂದ ಕಾಣಿಕೆಗಳನ್ನುಬಡ ವಿದ್ಯಾರ್ಥಿಗಳು ಕೇಳಿದಾಗ ಶುಲ್ಕ ಪಾವತಿಗೆ ಕೊಡುತ್ತಾರೆ. ನಾವು ಶಿಕ್ಷಣ ಸಂಸ್ಥೆಗಳಿಗೆ ಕೊಡಬೇಕೆ ವಿನಾ ಅಲ್ಲಿಂದ ಪಡೆಯ ಬಾರದು. ಅದು ನಮಗೆ ಆದಾಯದ ಮೂಲವಾಗಬಾರದು. ನಾವು ಸಾಲ ಮಾಡಿದರೆ ಒಂದು ಎಚ್ಚರಿಕೆಯೂ ಇರುತ್ತದೆ. ಸಾಲ ಕೊಡುವ ಬ್ಯಾಂಕ್‌ನವರೂ ಸುಮ್ಮನೆ ಕೊಡುತ್ತಾರೋ? ಮಠದಲ್ಲಿ ಭೂಮಿ ಮೊದಲಾದ ಸಂಪನ್ಮೂಲವಿದೆ ಎಂದು ಅದನ್ನು ಖಾಲಿ ಮಾಡುವುದು ತರವಲ್ಲ ಎಂದು ಹೇಳಿದರು.

ಶ್ರೀ ವಿಬುಧೇಶತೀರ್ಥರು 1988-90ರ ಅವಧಿಯಲ್ಲಿ ನಮ್ಮ ಗುರುಗಳಾದ ಶ್ರೀ ವಿಶ್ವಪ್ರಿಯತೀರ್ಥರಿಂದ ಪರ್ಯಾಯ ಪೂಜೆ ಮಾಡಿಸಿದಾಗ 60 ಲ.ರೂ. ಸಾಲ ಮಾಡಿದ್ದರು. ಪರ್ಯಾಯ ಪೀಠದಿಂದ ನಿರ್ಗಮಿಸುವಾಗ 25 ಲ.ರೂ. ಸಾಲ ಉಳಿದಿತ್ತು. ಅದನ್ನು ಶ್ರೀ ವಿಬುಧೇಶತೀರ್ಥರೇ ತೀರಿಸಿದರು. ಶ್ರೀಕೃಷ್ಣ ಮಠದಲ್ಲಿ ಪ್ರಸ್ತುತ ನಿತ್ಯ 1ರಿಂದ 1.25 ಲ.ರೂ. ಖರ್ಚು ಬರುತ್ತದೆ.
– ಶ್ರೀ ಈಶಪ್ರಿಯತೀರ್ಥ ಶ್ರೀಪಾದರು

 

Vishwa News 24

Recent Posts

ಬೈಕಂಪಾಡಿ ದರೋಡೆ ಪ್ರಕರಣ: ಮತ್ತೆ ನಾಲ್ವರು ಆರೋಪಿಗಳ ಬಂಧನ – vishwanews24

ಬೈಕಂಪಾಡಿಯಲ್ಲಿ ದರೋಡೆ ಪ್ರಕರಣ: ಮತ್ತೆ ನಾಲ್ವರು ಆರೋಪಿಗಳ ಬಂಧನ ಸುರತ್ಕಲ್: ಬೈಕಂಪಾಡಿಯಲ್ಲಿ ನಡೆದಿದ್ದ ಕೇರಳದ ಜ್ಯುವೆಲ್ಲರಿ ಉದ್ಯಮಿ ವಿಕಾಸ್ ಅವರ…

13 hours ago

ಕರ್ನಾಟಕ ಬಂದ್‌ಗೆ ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ  – vishwanews24

ಕರ್ನಾಟಕ ಬಂದ್‌ಗೆ ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ  ಉಡುಪಿ : ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ…

13 hours ago

ವಿಧಾನ ಪರಿಷತ್ ಸಭಾ​​ ನಾಯಕರಾಗಿ ಯತೀಂದ್ರ ಸಿದ್ದರಾಮಯ್ಯ – vishwanews24

ವಿಧಾನ ಪರಿಷತ್ ಸಭಾ​​ ನಾಯಕರಾಗಿ ಯತೀಂದ್ರ ಸಿದ್ದರಾಮಯ್ಯ ಬೆಂಗಳೂರು: ವಿಧಾನಮಂಡಲದ ಮುಂಗಾರು ಅಧಿವೇಶನ ಇಂದಿನಿಂದ ಪ್ರಾರಂಭವಾಗಿದ್ದು, ವಿಧಾನ ಪರಿಷತ್​​ ಕಲಾಪ…

14 hours ago

ಬೆಂಗಳೂರು: ಸ್ಕೂಟರ್ ಸ್ಕಿಡ್ ಆಗಿ ಲಾರಿಗೆ ಡಿಕ್ಕಿ; ಮಹಿಳೆ ಸಾವು – vishwanews24

ಬೆಂಗಳೂರು: ಸ್ಕೂಟರ್ ಸ್ಕಿಡ್ ಆಗಿ ಲಾರಿಗೆ ಡಿಕ್ಕಿ; ಮಹಿಳೆ ಸಾವು ಬೆಂಗಳೂರು : ಸಿಲಿಕಾನ್ ಸಿಟಿಯ ಎಲೆಕ್ಟ್ರಾನಿಕ್ ಸಿಟಿಯ ಜನನಿಬಿಡ…

14 hours ago

ಹಿಂದೂ ಸಂಘಟನೆಗಳ ಮುಖಂಡರಿಗೆ ಜಿಲ್ಲೆ ಪ್ರವೇಶ ನಿಷೇಧ: ಉಡುಪಿ ಜಿಲ್ಲಾ ವಿಹಿಂಪ–ಬಜರಂಗದಳ ತೀವ್ರ ಖಂಡನೆ – vishwanews24

ಹಿಂದೂ ಸಂಘಟನೆಗಳ ಮುಖಂಡರಿಗೆ ಉಡುಪಿ ಜಿಲ್ಲೆಗೆ ಪ್ರವೇಶ ನಿಷೇಧಿಸಿರುವುದು ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನೀತಿ : ದಿನೇಶ್ ಮೆಂಡನ್ ಆರೋಪ…

14 hours ago

ಉಡುಪಿ ಜಿಲ್ಲೆಗೆ ಹಿಂದೂ ಸಂಘಟನೆಗಳ ಮುಖಂಡರ ಪ್ರವೇಶ ನಿರ್ಬಂಧ: ವಿಹಿಂಪ ಖಂಡನೆ – vishwanews24

ಉಡುಪಿ ಜಿಲ್ಲೆಗೆ ಹಿಂದೂ ಸಂಘಟನೆಗಳ ಮುಖಂಡರನ್ನು ನಿರ್ಬಂಧಿಸಿರುವುದು ಖಂಡನೀಯ : ಸುನಿಲ್ ಕೆ.ಆರ್ ಉಡುಪಿ: ಕಾಪು ಪ್ರಖಂಡದ ಬಜರಂಗದಳದ ವತಿಯಿಂದ…

14 hours ago