ನ. 19 ರಂದು ಕಾಪು ವೆಂಕಟರಮಣ ದೇವಸ್ಥಾನದ ನೂತನ ರಥದ ಪುರಪ್ರವೇಶ ಶೋಭಾಯಾತ್ರೆ : vishwanews24

Featured, ಉಡುಪಿ

ನ. 19 ರಂದು ಕಾಪು ವೆಂಕಟರಮಣ ದೇವಸ್ಥಾನದ ನೂತನ ರಥದ ಪುರಪ್ರವೇಶ ಶೋಭಾಯಾತ್ರೆ

ಕಾಪು: ಇಲ್ಲಿನ ಶ್ರೀ ವೆಂಕಟರಮಣ ದೇವಸ್ಥಾನದ ನೂತನ ಭಂಡಿ ರಥ,ರಜತ ಗರುಡ ವಾಹನ,ಶೇಷ ವಾಹನದ ಪುರಪ್ರವೇಶ ಶೋಭಾಯಾತ್ರೆ ದಿನಾಂಕ ನವೆಂಬರ್ 19 ರ ಗುರುವಾರ ಸಂಜೆ ನಡೆಯಲಿದೆ.

ಪುರ ಪ್ರವೇಶ ಶೋಭಾಯಾತ್ರೆಯೂ ಕೋಟೇಶ್ವರ ರಥ ಶಿಲ್ಪ ಕೇಂದ್ರದಿಂದ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಮೂಲಕ ಕಾಪುವಿಗೆ ಆಗಮಿಸಲಿದ್ದು , ಈ ಸಂದರ್ಭ ರಥ ಪ್ರಯಾಣ ಪಥದ ಆಸುಪಾಸಿನ ಗೌಡ ಸಾರಸ್ವತ ಸಮಾಜದ ದೇವಳ, ಮಂದಿರಗಳ ದೇವರ ಅನುಗ್ರಹ ಪೂರ್ವಕ ಪ್ರಸಾದ ಸಹಿತ ರಥಕ್ಕೆ ಆರತಿ ನೀಡಲು ಅವಕಾಶವಿದ್ದು, ಈ ಪುಕಾರ್ಯಕ್ರಮದಲ್ಲಿ, ಆಯಾ ಊರಿನ ದೇವಳದ ಪ್ರತಿನಿಧಿಗಳು, ಸ್ವ-ಸಮಾಜ ಭಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಕಾಪು ವೆಂಕಟರಮಣ ದೇವರ ನೂತನ ಭಂಡಿ ರಥವನ್ನು ಸ್ವಾಗತಿಸಿಸಲು ಕೋರಲಾಗಿದೆ.

ಸಂಜೆ 5 ಗಂಟೆಗೆ ಕಾಪು ಶ್ರೀ ವೀರಭದ್ರ ದೇವಳದ ಬಳಿಯಿಂದ ನಾನಾ ಬಿರುದಾವಳಿ, ಕಲಾ ತಂಡ, ವಾದ್ಯ ತಂಡ, ಟ್ಯಾಬ್ಲೊ ಸಹಿತ ವೈಭವೋಪೇತ ‘ಪುರ ಪ್ರವೇಶ ಶೋಭಾಯಾತ್ರೆ ಮೂಲಕ ಕಾಪು ಪೇಟೆ ಮಾರ್ಗವಾಗಿ ಶ್ರೀ ದೇವಳಕ್ಕೆ ಬರಮಾಡಿ ಕೊಳ್ಳ ಲಾಗುವುದು ಎಂದು ದೇವಳದ ಆಡಳಿತ ಮಂಡಳಿ ಹಾಗೂ ಕಾಪು ಪೇಟೆಯ ಹತ್ತು ಸಮಸ್ತರ ಪ್ರಕಟಣೆ ತಿಳಿಸಿದೆ

 

ಕಾರ್ಕಳ: ಕುದುರೆಮುಖದಲ್ಲಿ ಹೊತ್ತಿ ಉರಿದ ಉಡುಪಿಯ ಟೂರಿಸ್ಟ್ ವಾಹನ ; ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು – vishwanews24

Leave a Reply