ಪಡುಬಿದ್ರಿ : ಬಿಗ್ ಬಾಸ್ ರನ್ನರ್ ಅಪ್ ರಕ್ಷಿತಾ ಶೆಟ್ಟಿಗೆ ಹುಟ್ಟೂರಲ್ಲಿ ಅದ್ದೂರಿ ಸ್ವಾಗತ – vishwanews24
ಪಡುಬಿದ್ರಿ : ಬಿಗ್ ಬಾಸ್ ರನ್ನರ್ ಅಪ್ ರಕ್ಷಿತಾ ಶೆಟ್ಟಿಗೆ ಹುಟ್ಟೂರಲ್ಲಿ ಅದ್ದೂರಿ ಸ್ವಾಗತ
ಪಡುಬಿದ್ರಿ: ಕನ್ನಡದ ಬಿಗ್ ಬಾಸ್ ಸೀಸನ್ 12 ರಲ್ಲಿ ರನ್ನರ್ ಅಪ್ ಆದ ಬಳಿಕ ಉಡುಪಿಗೆ ಆಗಮಿಸಿದ ರಕ್ಷಿತಾ ಗೆ ಭರ್ಜರಿಯಾದ ಸ್ವಾಗತ ಸಿಕ್ಕಿದೆ.
ಹೆಜಮಾಡಿಯ ಟೋಲ್ ಗೇಟ್ ಪರಿಸರಕ್ಕೆ ರಕ್ಷಿತಾ ಆಗಮಿಸಿದಾಗ ಸೇರಿದ್ದ ಬೃಹತ್ ಸಂಖ್ಯೆಯ ಅಭಿಮಾನಿಗಳು ಹೂಮಾಲೆಗಳ ಗೌರವದೊಂದಿಗೆ ಆಕೆಯನ್ನು ಸ್ವಾಗತಿಸಿದರು. ಬಳಿಕ ಆಕೆಯನ್ನು ತೆರೆದ ಜೀಪಿನಲ್ಲಿ ಪಡುಬಿದ್ರಿಗೆ ಬೃಹತ್ ವಾಹನ ಜಾಥಾ, ಚೆಂಡೆ, ವಾದ್ಯಗಳ ಸಡಗರದೊಂದಿಗೆ ಕರೆತರಲಾಯಿತು.
ರಕ್ಷಿತಾ ಶೆಟ್ಟಿಯವರಿಗೆ ಜಾಥಾದಲ್ಲಿ ಮೀನುಗಾರ ಮಹಿಳೆಯೋರ್ವರು ಬಂಗುಡೆ ಮೀನು ನೀಡುವ ಮೂಲಕ ಸ್ವಾಗತಿಸಿದರು. ರಕ್ಷಿತಾ ಮತ್ತೆ ಪಡುಬಿದ್ರಿ ಬೇಂಗ್ರೆಯ ತನ್ನ ಅಜ್ಜಿ ಮನೆ ಬಳಿಗೆ ತೆರಳಿದಳು. ಅಲ್ಲಿ ಬೇಂಗ್ರೆ ನಾಗರಿಕರು ಆಯೋಜಿಸಿದ್ದ ಹುಟ್ಟೂರ ಸಮ್ಮಾನದಲ್ಲಿ ರಕ್ಷಿತಾಗೆ ಬೂತಾಯಿ ರಕ್ಷಿತಾ ಎಂಬ ಬಿರುದನ್ನಿತ್ತು ಸಮ್ಮಾನಿಸಲಾಯಿತು.
ಬೇಂಗ್ರೆ ಸದಾನಂದ ಶೆಟ್ಟಿ ಬಟಾರ ಮನೆಯ ರಕ್ಷಿತಾ ತಂದೆ ರವಿ ಶೆಟ್ಟಿ, ತಾಯಿ ಹರಿಣಿ ಶೆಟ್ಟಿ, ಪಡುಬಿದ್ರಿ ಬೇಂಗ್ರೆ ಅಭಿಮಾನಿ ಬಳಗದ ನಾಗೇಶ್, ಜಯ ಸಾಲ್ಯಾನ್, ವಿಶ್ವಜಿತ್ ರಾವ್, ಅರುಣ್ ಶೆಟ್ಟಿ, ಪ್ರಮುಖರಾದ ಸಂತೋಷ್ ಕುಮಾರ್ ಶೆಟ್ಟಿ ಪಲ್ಲವಿ, ನವೀನ್ ಚಂದ್ರ ಜೆ. ಶೆಟ್ಟಿ, ಶರತ್ ಶೆಟ್ಟಿ, ರವಿ ಎಚ್. ಕುಂದರ್ ಮತ್ತಿತರಿದ್ದರು.
