Featured

ಪಡುಬಿದ್ರಿ: UPCL ಯೋಜನಾ ಪ್ರದೇಶ ವ್ಯಾಪ್ತಿಯ ಪರಿಸರ ಹಾನಿಗೊಂಡ ಸ್ಥಳಕ್ಕೆ ಐಸಿಇಸಿ ಪರಿಸರ ತಜ್ಞರ ಭೇಟಿ -Vishwanews24

ಪಡುಬಿದ್ರಿ: UPCL ಯೋಜನಾ ಪ್ರದೇಶ ವ್ಯಾಪ್ತಿಯ ಪರಿಸರ ಹಾನಿಗೊಂಡ ಸ್ಥಳಕ್ಕೆ ಐಸಿಇಸಿ ಪರಿಸರ ತಜ್ಞರ ಭೇಟಿ -Vishwanews24

ಪಡುಬಿದ್ರಿ: ಐಸಿಇಸಿ ಪರಿಸರ ತಜ್ಞರ ಸಮಿತಿ ಮಂಗಳವಾರ ಯುಪಿಸಿಎಲ್ ಯೋಜನಾ ಪ್ರದೇಶ ವ್ಯಾಪ್ತಿಯ ಪರಿಸರ ಹಾನಿಗೊಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು.

ಅಲ್ಲಿನ ಅಂತರ್ಜಲ ಮತ್ತು ಉಪ್ಪು ನೀರಿನ ಸಮಸ್ಯೆ , ಕುಂಠಿತವಾಗಿರುವ ಕೃಷಿ, ತೋಟಗಾರಿಕೆ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆಗಳನ್ನು ತಂಡ ಪರಿಶೀಲಿಸಿತು.

ಡಾ.ಕೃಷ್ಣರಾಜ್, ಡಾ.ಶ್ರೀಕಾಂತ್, ಕೇಂದ್ರೀಯ ಪರಿಸರ ನಿಯಂತ್ರಣ ಮಂಡಳಿ ಬೆಂಗಳೂರು ಇದರ ಜಂಟಿ ನಿರ್ದೇಶಕ ತಿರುಮೂರ್ತಿ ನೇತೃತ್ವದ ಪರಿಸರ ತಜ್ಞರ ಸಮಿತಿ ಮಂಗಳವಾರ ಯುಪಿಸಿಎಲ್ ಯೋಜನಾ ಪ್ರದೇಶ ವ್ಯಾಪ್ತಿಯ ಪರಿಸರ ಹಾನಿಗೊಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು.

ಊಳ್ಳೂರರಿನ ಜಗನ್ನಾಥ ಮೂಲ್ಯ ಹಾಗು ಎಲ್ಲೂರಿನ ಜಯಂತ್ ರಾವ್, ಗಣೇಶ್ ರಾವ್ ಅವರ ಕೃಷಿ ಭೂಮಿಗೆ ತೆರಳಿ ಪರಿಶೀಲನೆ ನಡೆಸಿತು. ಅಲ್ಲಿನ ಅಂತರ್ಜಲ ಮತ್ತು ಉಪ್ಪು ನೀರಿನ ಸಮಸ್ಯೆ, ಕುಂಠಿತವಾಗಿರುವ ಕೃಷಿ ಹಾಗು ತೋಟಗಾರಿಕಾ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ತಂಡವು ಪರಿಶೀಲಿಸಿತು.

ಮುದರಂಗಡಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಜನರ ಆರೋಗ್ಯದ ಕುರಿತಾದ ಮಾಹಿತಿ ಸಂಗ್ರಸಿದರು.

ಯುಪಿಸಿಎಲ್ ನಿಂದ ಉಂಟಾಗಿರುವ ಪರಿಸರ, ನೀರಿನ ಸಮಸ್ಯೆ, ಆರೋಗ್ಯದ ಸಮಸ್ಯೆಗಳನ್ನು ಪರಿಶೀಲಿಸಿ ಕೇಂದ್ರೀಯ ಹಸಿರು ಪೀಠಕ್ಕೆ ಈ ತಂಡ ಜನವರಿ ಅಂತ್ಯದೊಳಗೆ ವರದಿ ನೀಡಬೇಕಿದ್ದು, ಸಮಸ್ಯೆಯ ಆಳವನ್ನು ಅರಿತ ತಜ್ಞರ ತಂಡ ದಿನದ ವಿಸ್ತರಣೆಯಾಗಿದೆ ಎಂದು ತಜ್ಞರ ತಂಡದ ಡಾ.ಕೃಷ್ಣರಾಜ್ ಅಭಿಪ್ರಾಯಿಸಿದ್ದಾರೆ.

ಕೇಂದ್ರೀಯ ಹಸಿರು ನ್ಯಾಯ ಪೀಠದಲ್ಲಿ ನಂದಿಕೂರು ಜನಜಾಗೃತಿ ಸಮಿತಿ 2018 ರಲ್ಲಿ ಹೂಡಿದ್ದ ದಾವೆಯ ತೀರ್ಪು ಸಮಿತಿ ಪರವಾಗಿದ್ದು,ಆ ಕುರಿತಾಗಿ ಸಮಿತಿ ಬೇಡಿಕೆ ಇರಿಸಿದ್ದ 130 ಕೋಟಿ ರೂ. ಪರಿಹಾರ ಕುರಿತಾಗಿ ಈ ತಜ್ಞರ ತಂಡವು ಹಸಿರು ಪೀಠದ ಅದೇಶದಂತೆ ಯೋಜನಾ ಸಂತ್ರಸ್ತರ ಅಹವಾಲು ಆಲಿಸಲು ಅಲ್ಲಿಗೆ ತೆರಳಿದ್ದು, ಜಗನ್ನಾಥನ್ ಮೂಲ್ಯ ಹಾಗೂ ಜಯಂತ್ ಭಟ್ ಅವರ ಕೃಷಿ ಭೂಮಿಗೆ ತೆರಳಿ ಪರಿಶೀಲನೆ ನಡೆಸಿತು. ಕೃಷಿ, ತೋಟಗಾರಿಕೆ, ಆರೋಗ್ಯ , ಪರಿಸರ ಇಲಾಖೆ ಯ ಅಧಿಕಾರಿಗಳು ಜೊತೆಗಿದ್ದರು.

Vishwa News 24

Recent Posts

ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆ ಕಡಿತ ಮಾಡಲ್ಲ :  ಸಿದ್ದರಾಮಯ್ಯ ಸ್ಪಷ್ಟನೆ -vishwanews24

ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆ ಕಡಿತ ಮಾಡಲ್ಲ :  ಸಿದ್ದರಾಮಯ್ಯ ಸ್ಪಷ್ಟನೆ ಬೆಂಗಳೂರು : ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆಯನ್ನು…

15 minutes ago

ಕರಾವಳಿಯಲ್ಲಿ ಜೂನ್ 1 ರಿಂದ ಜುಲೈ 31 ರವರೆಗೆ ಯಾಂತ್ರೀಕೃತ ಮೀನುಗಾರಿಕೆ ನಿಷೇಧ -vishwanews24

ಕರಾವಳಿಯಲ್ಲಿ ಜೂನ್ 1 ರಿಂದ ಜುಲೈ 31 ರವರೆಗೆ ಯಾಂತ್ರೀಕೃತ ಮೀನುಗಾರಿಕೆ ನಿಷೇಧ ಮಂಗಳೂರು/ಉಡುಪಿ :ಕರ್ನಾಟಕ ಸಮುದ್ರ ಮೀನುಗಾರಿಕೆ ನಿಯಂತ್ರಣ…

3 hours ago

ಶಿವಮೊಗ್ಗ : ಮೇ 22ರಿಂದ ಸಕ್ರೆಬೈಲು ಆನೆ ಬಿಡಾರಕ್ಕೆ ಪ್ರವಾಸಿಗರ ಪ್ರವೇಶ ನಿಷೇಧ -vishwanews24

ಶಿವಮೊಗ್ಗ : ಮೇ 22ರಿಂದ ಸಕ್ರೆಬೈಲು ಆನೆ ಬಿಡಾರಕ್ಕೆ ಪ್ರವಾಸಿಗರ ಪ್ರವೇಶ ನಿಷೇಧ ಶಿವಮೊಗ್ಗ: ದುಬಾರೆ ಆನೆ ಬಿಡಾರದಲ್ಲಿ ಎರಡು…

3 hours ago

ಬೆಳ್ತಂಗಡಿ : ಜಲಪಾತ ವೀಕ್ಷಣೆಗೆ ತೆರಳಿದ್ದ ಯುವತಿಯರಿಗೆ ಲೈಂಗಿಕ ಕಿರುಕುಳ; ಕಾಸರಗೋಡಿನ ಮೂವರು ಪೊಲೀಸ್ ವಶಕ್ಕೆ -vishwanews24

ಬೆಳ್ತಂಗಡಿ : ಜಲಪಾತ ವೀಕ್ಷಣೆಗೆ ತೆರಳಿದ್ದ ಯುವತಿಯರಿಗೆ ಲೈಂಗಿಕ ಕಿರುಕುಳ; ಕಾಸರಗೋಡಿನ ಮೂವರು ಪೊಲೀಸ್ ವಶಕ್ಕೆ ಬೆಳ್ತಂಗಡಿ : ಮಂಗಳೂರಿನಲ್ಲಿ…

3 hours ago

ರಾಜ್ಯಾದ್ಯಂತ ಇಂದಿನಿಂದ 4 ದಿನ ಭಾರೀ ಮಳೆ ಮುನ್ಸೂಚನೆ ; ಮುಂದಿನ 3 ದಿನ ಯೆಲ್ಲೋ ಅಲರ್ಟ್ ಘೋಷಣೆ  -vishwanews24

ರಾಜ್ಯಾದ್ಯಂತ ಇಂದಿನಿಂದ 4 ದಿನ ಭಾರೀ ಮಳೆ ಮುನ್ಸೂಚನೆ ; ಮುಂದಿನ 3 ದಿನ ಯೆಲ್ಲೋ ಅಲರ್ಟ್ ಘೋಷಣೆ  ಬೆಂಗಳೂರು…

4 hours ago

ಮಣಿಪಾಲ: ಯುವತಿಯ ಕೊಲೆಗೆ ಯತ್ನಿಸಿ ಸುಲಿಗೆ ಪ್ರಕರಣ: ಸ್ನೇಹಿತೆಯ ಬಂಧನ -vishwanews24

ಮಣಿಪಾಲ: ಯುವತಿಯ ಕೊಲೆಗೆ ಯತ್ನಿಸಿ ಸುಲಿಗೆ ಪ್ರಕರಣ: ಸ್ನೇಹಿತೆಯ ಬಂಧನ ಉಡುಪಿ: ಮಣಿಪಾಲದ ಶಾಂತಿನಗರದ ಬಳಿಯ ರೂಮಿನಲ್ಲಿ ಅಂಕೋಲದ ಯೋಗೀತಾ…

4 hours ago