ಕಾಪು: ಪುರಸಭೆ ಚುನಾವಣೆಗೆ ದಿನ ಘೋಷಣೆಯಾದ ಸಮಯದಲ್ಲಿ ಬಿಜೆಪಿಗೆ ಇದ್ದ ಬ್ಯಾಡ್ ಇಮೇಜ್ ಚುನಾವಣೆ ಹತ್ತಿರವಾಗುತ್ತಿದ್ದಂತೆ ಟ್ರೆಂಡ್ ಬದಲಾಗತೊಡಗಿದೆ.
9 ಕಡೆ ಎಸ್ ಡಿ ಪಿ ಐ ಸ್ಪರ್ದೆಗಿಳಿದಿರುವ ಕಾರಣ ಮತ್ತು ಸ್ಥಳಿಯ ಜಿಜೆಪಿ ನಾಯಕರ ಮನೆಮನೆ ನಡಿಗೆ ಬಿಜೆಪಿ ಕಾರ್ಯಕರ್ತರಲ್ಲಿ ಹಾಗೂ ಮತದಾರರಲ್ಲಿ ಕಳೆದೆರಡು ದಿನದಿಂದ ಹೊಸ ಸಂಚಲನ ಉಂಟುಮಾಡಿದೆ.
ಪುರಸಭೆಯ ಸಮಸ್ಯೆಗಳು ಹಾಗೂ ಆಡಳಿತ ಕಾರ್ಯವೈಖರಿಗಳ ಬಗ್ಗೆ ಮನೆಬಾಗಿಲಿಗೆ ಮುಟ್ಟಿಸಿದ ಬಿಜೆಪಿ ನಾಯಕರು ಮತದಾರರ ಮನವರಿವರ್ತನೆ ಮಾಡಿದ ಪರಿಣಾಮ ಚುನಾವಣೆಗೆ ಹೊಸ ಆಯಾಮ ಬರೆದಿದೆ.
ದೇಶ ಸುಭದ್ರವಾಗಬೇಕಾದರೆ ಗ್ರಾಮಮಟ್ಟದಲ್ಲಿ ಬಿಜೆಪಿ ಬೆಳೆಯಬೇಕು ಇದು ಮೋದಿಜಿಯ ಕನಸು ಎಂದು ಮಾತು ಆರಂಭಿಸುವ ಚುನಾವಣೆ ಕಾರ್ಯ ಚಟುವಟಿಕೆ ಹಿಂದೂ ಮತಬ್ಯಾಂಕ್ ಮತ್ತಷ್ಟು ಭದ್ರಗೊಳಿಸುವಲ್ಲಿ ಬಿಜೆಪಿ ಯಶಸ್ವಿಯಾಗುತ್ತಿದೆ.
ಕಾಪು ಶಾಸಕ ಲಾಲಾಜಿ ಆರ್ ಮೆಂಡನ್-ಗುರ್ಮೆ ಸುರೇಶ್ ಶೆಟ್ಟಿ-ಯಶ್ಪಾಲ್ ಸುವರ್ಣ-ಕಿರಣ್ ಕೊಡ್ಗಿ-ಕುಯಿಲಾಡಿ ಸುರೇಶ್ ನಾಯಕ್-ಗೀತಾಂಜಲಿ ಸುವರ್ಣ-ಕಪ್ಪೆಟ್ಟು ಪ್ರವೀಣ್ ಶೆಟ್ಟಿ-ಶ್ರೀಕಾಂತ್ ನಾಯಕ್-ಗಂಗಾಧರ ಸುವರ್ಣ-ಶ್ರೀಶಾ ನಾಯಕ್-ಯುವಮೋರ್ಚ ನಾಯಕರು ನಿರಂತರ ಫೀಲ್ಡ್ನಲ್ಲಿದ್ದು ಪುರಸಭೆಯನ್ನು ಪೂರ್ಣ ಬಹುಮತದೊಂದಿಗೆ ವಶಪಡಿಸಿಕೊಳ್ಳಲು ನಡೆಸುತ್ತಿರುವ ಸರ್ಕಸ್ ವರ್ಕೌಟ್ ಆಗುವಂತಿದೆ.
ಬಿಜೆಪಿಯ ಮತಬ್ಯಾಂಕ್ ತಲ-ತಲಾಂತರಗಳಿAದ ಕೋಸ್ಟಲ್ ಬೆಲ್ಟ್ ಇದು ಸಾಮಾನ್ಯವಾಗಿ ತಿಳಿದಿರುವ ವಿಚಾರ ಕಳೆದ ಪುರಸಭಾ ಚುನಾವಣೆಯಲ್ಲಿ ಕೂಡ ಕೋಸ್ಟಲ್ ಬೆಲ್ಟ್ ಬಿಜೆಪಿಗೆ ಅತೀ ಹೆಚ್ಚು ಸೀಟ್ ನೀಡಿ ಗೆಲ್ಲಿಸಿ ಕಳುಹಿಸಿದ ಕೀರ್ತಿ ಈ ಭಾಗದ ಮತದಾರರಿಗಿದೆ. ಕಾಂಗ್ರೇಸ್ ಪಾರ್ಟಿ ಒಂದು ಸಲ ಈ ಭಾಗದಲ್ಲಿ ಲಗ್ಗೆಯಿಟ್ಟರೆ ಮತ್ತೆ ಅದರ ಹಿಡಿತದಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಕಡಿಮೆ ಎಂಬುದು ಆ ಭಾಗದ ಮತದಾರರಿಗೂ ಗೊತ್ತಿದೆ ಹಾಗಾಗಿ ಶತಾಯ-ಗತಾಯ ಹಿಂದೂ ಭದ್ರಕೋಟೆ ಕಡಲುಕಾಯುವ ಯೋಧರು ಎಂದು ಕರೆಸಿಕೊಳ್ಳುವ ಈ ಭಾಗದ ಮತದಾರರು ಸುಲಭವಾಗಿ ಬಿಜೆಪಿಯನ್ನು ಬಿಟ್ಟುಕೊಡುವ ಪ್ರಶ್ನೆ ಕಡಿಮೆಯಿದೆ ಹಾಗಾಗಿ ಈ ಬಾರಿ ಕೂಡ ಅತೀ ಹೆಚ್ಚು ಸೀಟ್ ಗೆಲ್ಲಿಸಿ ಕರಾವಳಿ ಭಾಗದಿಂದ ಪುರಸಭೆ ಸದಸ್ಯರನ್ನು ಆಯ್ಕೆ ಮಾಡಿ ಕಳುಹಿಸುವ ಭರವಸೆ ಮತ್ತು ನಂಬಿಕೆ ಇದೆ ಅನ್ನುತ್ತಾರೆ.
ಒಟ್ಟಾರೆ ಕಳೆದ ವಾರ ಕೆಲವು ವಾರ್ಡಿನಲ್ಲಿದ್ದ ಬಿಜೆಪಿಯ ಅಭ್ಯರ್ಥಿಗಳ ಬ್ಯಾಡ್ ಇಂಪ್ರೇಷನ್ ಕಲೆದೆರಡು ದಿನಗಳಿಂದ ಮತದಾರನ ಕೋಪ ಸಿಟ್ಟು ಕಡಿಮೆ ಆಗಿದೆ. ಬಿಜೆಪಿಗೆ ನಾವು ಮತ ಹಾಕದೇ ಇದ್ದರೇ ಇನ್ನಾರೂ ಹಾಕುವರೆನ್ನುವ ಕ್ಷಮಾಗುಣ ಬಿಜೆಪಿಯ ಟ್ರೆಂಡ್ ಬದಲು ಮಾಡಿದೆ.
ಪೊಲಿಟಿಕಲ್ ಬ್ಯುರೋ ವಿಶ್ವನ್ಯೂಸ್24
ಕಡಬ: ಚಿನ್ನದ ತೂಕ ಹೆಚ್ಚಿಸಿ ಬ್ಯಾಂಕ್ ಗೆ ವಂಚನೆಗೆ ಯತ್ನ: ಇಬ್ಬರ ಬಂಧನ ಕಡಬ: ಚಿನ್ನಾಭರಣದ ತೂಕವನ್ನು ಕೃತಕವಾಗಿ ಹೆಚ್ಚಿಸಿ…
ಮಹಾರಾಷ್ಟ್ರ : ಮಳೆ ಅಬ್ಬರ - ಕುಸಿದು ಬಿದ್ದ ರತ್ನಗಿರಿ ರೈಲು ನಿಲ್ದಾಣದ ಛಾವಣಿ ; ತಪ್ಪಿದ ದೊಡ್ಡ ದುರಂತ…
ಶಿವಮೊಗ್ಗ: ಬಸ್ ನಿಲ್ದಾಣದಲ್ಲಿ ಚೀಲದೊಳಗೆ ನವಜಾತ ಹೆಣ್ಣು ಮಗು ಪತ್ತೆ ಶಿವಮೊಗ್ಗ: ನವಜಾತ ಹೆಣ್ಣು ಶಿಶುವೊಂದನ್ನು ಬಸ್ ನಿಲ್ದಾಣದಲ್ಲಿ ಅನಾಥವಾಗಿ…
ಪಡುಬಿದ್ರಿ : ನಡಿಪಟ್ಟಣದಲ್ಲಿ ಕಡಲು ಕೊರೆತಕ್ಕೆ ತಡೆಗೋಡೆ ನಿರ್ಮಾಣಕ್ಕೆ ಸಚಿವ ಖಾದರ್ ಗೆ ವಿಶ್ವಾಸ್ ಅಮೀನ್ ಮನವಿ ಪಡುಬಿದ್ರಿ: ಉಡುಪಿ…
ಬಂಟ್ವಾಳ : ಬಸ್ಸಿಗೆ ಕಾಯುತ್ತಿದ್ದ ವಿದ್ಯಾರ್ಥಿಗೆ ಚೂರಿ ಇರಿತ ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾ…
ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…