Featured

ಪೂಜಾ ಕೋಣೆಯಲ್ಲಿ ದೇವರ ಮೂರ್ತಿಗಳನ್ನು ಇಡುವ ರೀತಿ ನಿಮಗೆ ಗೊತ್ತಾ..?? ಹಾಗಾದರೆ ಓದಿ ಈ ವರದಿ -Vishwanews24

ಹಿಂದೂ ಶಾಸ್ತ್ರದ ಪ್ರಕಾರ ಪ್ರತಿಯೊಂದು ಮನೆಯಲ್ಲೂ ದೇವರ ಆರಾಧನೆಗೆ ಒಂದು ಪವಿತ್ರವಾದ ಸ್ಥಳ ಇರುತ್ತದೆ. ಅಲ್ಲಿ ದೇವರ ಚಿತ್ರ ಅಥವಾ ದೇವರ ಮೂರ್ತಿಯನ್ನು ಇಟ್ಟು ಪೂಜಿಸಲಾಗುವುದು. ಮೂರ್ತಿಯನ್ನು ಇಟ್ಟು ಪೂಜಿಸುವಾಗ ಕೆಲವು ರೀತಿ-ನೀತಿಗಳನ್ನು ಹಾಗೂ ಧಾರ್ಮಿಕ ನಿಯಮಗಳನ್ನು ಅನುಸರಿಸಬೇಕು ಎಂದು ಹೇಳುವುದು. ಮನೆಯೊಳಗೆ ಮೂರ್ತಿಯನ್ನು ಇಟ್ಟು ಪೂಜೆ ಮಾಡಬೇಕಾದರೆ ಆದರ್ಶ ಸಂಖ್ಯೆಯ ವಿಗ್ರಹಗಳನ್ನು ಇಡಬೇಕು. ಅದು ಶುಭಕರವಾದ ಫಲಿತಾಂಶವನ್ನು ನೀಡುವುದು. ಮನೆಯಲ್ಲಿ ಮೂರ್ತಿಯನ್ನು ಇಟ್ಟು ಪೂಜಿಸುವಾಗ ಕೆಲವು ನಿಯಮಗಳನ್ನು ಅನುಸರಿಸಬೇಕು.

ಪೂಜಾ ಕೋಣೆ ಪ್ರತ್ಯೇಕವಾಗಿರಲಿ

ಸ್ಥಳದ ಅಭಾವ ಎನ್ನುವ ಕಾರಣಕ್ಕೆ ಕೆಲವರು ದೇವರ ಚಿತ್ರ ಹಾಗೂ ಮೂರ್ತಿಯನ್ನು ಮಲಗುವ ಕೋಣೆಯಲ್ಲಿ ಇಟ್ಟು ಪೂಜಿಸುವುದು ಉಂಟು. ಆದರೆ ಈ ಕ್ರಮವು ಉಚಿತವಾದುದ್ದಲ್ಲ. ಮೂರ್ತಿ ಅಥವಾ ಚಿತ್ರ ಯಾವುದೇ ಆದರೂ ಅದಕ್ಕಾಗಿ ವಿಶೇಷ ಕೋಣೆ ಅಥವಾ ಸ್ಥಳವನ್ನು ನಿಗದಿಪಡಿಸಬೇಕು. ಮಲಗುವ ಕೋಣೆಯು ಮನುಷ್ಯ ವಿಶ್ರಾಂತಿ ಪಡೆಯುವ ಸ್ಥಳ. ಜೊತೆಗೆ ಸಂಭೋಗ ಕ್ರಿಯೆಯನ್ನು ಅನುಸರಿಸುವನು. ಅಂತಹ ಸ್ಥಳದಲ್ಲಿ ದೇವರನ್ನು ಇಟ್ಟು ಪೂಜೆ ಮಾಡಬಾರದು. ಧಾರ್ಮಿಕ ಸ್ಥಳದಲ್ಲಿಯೂ ಸಹ ಮಲಗುವುದು ಅಥವಾ ಲೈಂಗಿಕ ಕ್ರಿಯೆ ನಡೆಸುವುದು ಮಾಡಬಾರದು.

ಅಡುಗೆ ಮನೆಯ ಒಳಗೆ ದೇವರನ್ನು ಇಡಬಾರದು

ಅಡುಗೆ ಮನೆಯು ಶುದ್ಧ ಸ್ಥಳ ಎಂದು ಪರಿಗಣಿಸುತ್ತೇವೆ. ಆದರೆ ಬಹುತೇಕ ಜನರು ಅಡುಗೆ ಮನೆಯ ಒಳಗೆ ಕಸದ ಬುಟ್ಟಿಯನ್ನು ಇಟ್ಟಿರುತ್ತಾರೆ. ಅದರಿಂದ ಉಂಟಾಗುವ ಅಶುಚಿ ಹಾಗೂ ಅಡುಗೆ ಮಾಡುವಾಗ ಉಂಟಾಗುವ ಎಲ್ಲಾ ರೀತಿಯ ಹೊಗೆಗಳು ದೇವರ ಮೂರ್ತಿ ಹಾಗೂ ಚಿತ್ರಗಳಿಗೆ ತಗುಲುವುದು. ಆಗ ಅಲ್ಲಿ ಧನಾತ್ಮಕ ಶಕ್ತಿ ಇರದು. ಹಾಗಾಗಿ ದೇವರ ಪೂಜೆ ಅಥವಾ ದೇವರ ಮನೆಯನ್ನು ಅಡುಗೆ ಮನೆಯ ಒಳಗೆ ಅಥವಾ ಎದುರಿಗೆ ಇಡಬಾರದು.

ಶೌಚಾಲಯಕ್ಕೆ ತಾಗಿಯೇ ದೇವರ ಮನೆ ಇರಬಾರದು

ಬಹುತೇಕ ಮನೆಗಳಲ್ಲಿ ಮಲಗುವ ಕೋಣೆಯ ಸ್ನಾನ ಗೃಹ ಅಥವಾ ಶೌಚಾಲಯವು ದೇವರ ಮನೆಗೆ ತಾಗುವಂತೆ ಇರುತ್ತದೆ. ಶೌಚಾಲಯಕ್ಕೆ ತಾಗಿಯೇ ದೇವರ ಮನೆ ಇರಬಾರದು. ಎರಡು ಅಂತಸ್ತಿನ ಮನೆಯನ್ನು ನಿರ್ಮಿಸುವಾಗಲೂ ದೇವರ ಮನೆಯ ಮೇಲ್ಭಾಗದಲ್ಲಿ ಯಾವುದೇ ಮಲಗುವ ಕೋಣೆ ಅಥವಾ ಶೌಚಾಲಯಗಳು ಇರಬಾರದು. ಅದು ಮನೆಯಲ್ಲಿ ಅಶಾಂತಿ ಹಾಗೂ ಋಣಾತ್ಮಕ ಪರಿಸ್ಥಿತಿಯನ್ನು ಉಂಟುಮಾಡುವುದು

ದೇವರ ಕೋಣೆಯ ಬಾಗಿಲಿಗೆ ಬೀಗ ಹಾಕಬಾರದು

ದೇವರ ಮನೆಯು ಅತ್ಯಂತ ಪವಿತ್ರವಾದ ಸ್ಥಳ. ದೇವರ ಆರಾಧನೆಯಿಂದ ಮನೆಯಲ್ಲಿ ಸಂತೋಷ ಸುಖ ನೆಲೆಸುವುದು. ದೇವರನ್ನು ಬಂಧಿಸುವಂತೆ ದೇವರ ಕೋಣೆಗೆ ಬೀಗವನ್ನು ಹಾಕಬಾರದು. ಹೊರಗಡೆ ಹೋಗುವುದಾದರೂ ಮನೆಯ ಮುಖ್ಯವಾದ ಬಾಗಿಲಿಗೆ ಬೀಗವನ್ನು ಹಾಕಬೇಕೇ ಹೊರತು ದೇವರ ಮನೆಗೆ ಬೀಗ ಹಾಕಬಾರದು. ಬೀಗ ಹಾಕುವುದರಿಂದ ಶಕ್ತಿಯುತವಾದ ಶಕ್ತಿಯನ್ನು ಬಂಧಿಸಿದಂತೆ ಆಗುವುದು.

ದೇವರ ಮನೆಯನ್ನು ಸ್ವಚ್ಛವಾಗಿ ಇರಿಸಬೇಕು

ವಾರದಲ್ಲಿ ಒಮ್ಮೆ ದೇವರ ಮನೆಯನ್ನು ಸ್ವಚ್ಛಗೊಳಿಸುವುದು ಅಥವಾ ಕಸ ಕಡ್ಡಿ ಇರುವಾಗ ಮಾತ್ರ ದೇವರ ಮನೆಯನ್ನು ಸ್ವಚ್ಛಮಾಡುವುದಲ್ಲ. ನಿತ್ಯವೂ ದೇವರ ಮನೆಯನ್ನು ಸ್ವಚ್ಛಗೊಳಿಸಿ, ಬಾಗಿಲಿಗೆ ರಂಗೋಲಿ ಹಾಗೂ ಅರಿಶಿನ ಕುಂಕುಮವನ್ನು ಇಡಬೇಕು. ನಿತ್ಯವೂ ದೇವರಿಗೆ ಆರಾಧನೆ ಮಾಡಬೇಕು. ನಿತ್ಯವೂ ದೀಪವನ್ನು ಬೆಳಗಿ ದೇವರ ಪ್ರಾರ್ಥನೆ ಮಾಡಬೇಕು.

ದೇವರ ವಿಗ್ರಹಗಳ ಸಂಖ್ಯೆ

ಮನೆಯಲ್ಲಿ ದೇವರ ಮನೆಯನ್ನು ಇಡಬಹುದು ಆದರೆ ದೇವಾಲಯವನ್ನೇ ಮನೆಯನ್ನಾಗಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಮನೆ ಎನ್ನುವುದು ಭೌತಿಕ ಜಗತ್ತನ್ನು ಪ್ರತಿಬಿಂಬಿಸುವುದು. ಹಾಗಾಗಿ ಮನೆಯಲ್ಲಿ ದೇವರ ಮೂರ್ತಿಯನ್ನು ಹಾಗೂ ಚಿತ್ರವನ್ನು ಮಿತಿಯಿಲ್ಲದೆ ಇಡಬಾರದು. ದೇವರ ಚಿತ್ರ ಮತ್ತು ಮೂರ್ತಿಯನ್ನು ಇಡಬೇಕಾದರೆ ಕೆಲವು ಧಾರ್ಮಿಕ ನಿಯಮಗಳನ್ನು ಅನುಸರಿಸಬೇಕು. ಇಲ್ಲವಾದರೆ ಸಾಕಷ್ಟು ಋಣಾತ್ಮಕ ಪರಿಣಾಮವನ್ನು ಎದುರಿಸಬೇಕಾಗುವುದು.

ಒಂದೇ ದೇವರ ಮೂರು ವಿಗ್ರಹ

ದುರ್ಗಾ ದೇವಿಯ ಮೂರು ಮೂರ್ತಿಯನ್ನೇ ಇಟ್ಟು ಪೂಜಿಸಬಾರದು. ಒಂದೇ ದೇವರ ಮೂರ್ತಿಯನ್ನು ಮಿತಿ ಮೀರಿ ಇಟ್ಟರೆ ಅದು ದುರಾದೃಷ್ಟವನ್ನು ತರುವುದು. ಮನೆಯಲ್ಲಿ ನೆಮ್ಮದಿ ಹಾಗೂ ಸಂತೋಷವು ಹಾಳಾಗುತ್ತದೆ. ಅಲ್ಲದೆ ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿಯು ಕುಂದುವುದು.

ಗಣೇಶನ ಮೂರು ವಿಗ್ರಹ

ಮನೆಯಲ್ಲಿ ಮೂರು ಗಣೇಶನ ಮೂರ್ತಿಯನ್ನು ಇಡುವುದು ಅಥವಾ ಭಾವ ಚಿತ್ರವನ್ನು ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ದುಷ್ಕೃತ್ಯಗಳು ಸಂಭವಿಸುತ್ತವೆ. ನಿಯಮಿತವಾಗಿ ಗಣೇಶನನ್ನು ಪೂಜಿಸದೆ ಇದ್ದರೆ ವಿಗ್ರಹಗಳನ್ನು ಇಟ್ಟುಕೊಳ್ಳಬಾರದು ಎಂದು ಹೇಳಲಾಗುವುದು. ಹಾಗಾಗಿ ಒಂದೇ ದೇವರ ವಿಗ್ರಹವನ್ನು ಒಂದಕ್ಕಿಂತ ಹೆಚ್ಚು ಇಟ್ಟು ಪೂಜಿಸಿದರೆ ಧಾರ್ಮಿಕ ಸೆಳೆತ ಹಾಗೂ ಧನಾತ್ಮಕ ಶಕ್ತಿಯ ಹರಿವಿನ ಮೇಲೆ ಗಂಭೀರವಾದ ಪರಿಣಾಮ ಉಂಟಾಗುವುದು.

ವಿಗ್ರಹಗಳು ಮತ್ತು ಭಾವಚಿತ್ರಗಳ ನಿಯಮಗಳು

ಒಂದೇ ಚಿತ್ರದಲ್ಲಿ ಕೃಷ್ಣನು ರಾಧಾ, ರುಕ್ಮಿಣಿಯರೊಂದಿಗೆ ಇರುವುದು ಅಥವಾ ವಿಗ್ರಹಗಳನ್ನು ಇಡುವುದು, ದೇವ ಸೇನೆಯರೊಂದಿಗೆ ಕಾರ್ತಿಕೇಯ ದೇವ ಇರುವುದು ಹಾಗೂ ಗಣೇಶನು ಸಿದ್ಧಿ ಮತ್ತು ಬುದ್ಧಿಯ ಜೊತೆಗೆ ಇರುವಂತಹ ಮೂರ್ತಿಗಳು ಅಥವಾ ಚಿತ್ರಗಳನ್ನು ಪೂಜಿಸಬಾರದು. ಅದು ಸಾಮರಸ್ಯದಿಂದ ಕೂಡಿರುವ ಜೀವನದಲ್ಲಿ ಅಪಶ್ರುತಿಯನ್ನು ಉಂಟುಮಾಡುತ್ತದೆ. ಮನೆಯಲ್ಲಿ ಸದಾ ಕಾಲ ಕಷ್ಟ ಹಾಗೂ ದುಃಖವೇ ನೆಲೆಸುವುದು ಎಂದು ಹೇಳಲಾಗುವುದು

 

Vishwa News 24

Recent Posts

ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನಕಾರಿ ಹೇಳಿಕೆ: ವಿಠಲ ಗೌಡ ವಿರುದ್ಧ ಅರೆಸ್ಟ್​​​​​​ ವಾರಂಟ್ – vishwanews24

ಧರ್ಮಸ್ಥಳ ಪ್ರಕರಣ : ವಿಠಲ್‌ ಗೌಡ ವಿರುದ್ಧ ಅರೆಸ್ಟ್‌ ವಾರಂಟ್:‌ ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…

11 hours ago

ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ – vishwanews24

ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ ಬೆಂಗಳೂರು: ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ಮಾಪಕ ಬಾ.ಮಾ.…

12 hours ago

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ – vishwanews24

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…

13 hours ago

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು – vishwanews24

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…

13 hours ago

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ – vishwanews24

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…

14 hours ago

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ – vishwanews24

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…

14 hours ago