ಪೇಜಾವರ ಶ್ರೀಗಳಿಗೆ ಪದ್ಮವಿಭೂಷಣ ಶ್ರೇಷ್ಠ ಸಂತನಿಗೆ ಸಂದ ಗೌರವ ಉಡುಪಿಗೆ ಹೆಮ್ಮೆ – ಕುಯಿಲಾಡಿ ಸುರೇಶ್ ನಾಯಕ್ -Vishwanews24

Featured, ಉಡುಪಿ

ಪೇಜಾವರ ಶ್ರೀಗಳಿಗೆ ಪದ್ಮವಿಭೂಷಣ ಶ್ರೇಷ್ಠ ಸಂತನಿಗೆ ಸಂದ ಗೌರವ ಉಡುಪಿಗೆ ಹೆಮ್ಮೆ – ಕುಯಿಲಾಡಿ ಸುರೇಶ್ ನಾಯಕ್ -Vishwanews24

ಉಡುಪಿ : ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಅನುಪಮ ಸಾಧನೆ, ತಪಸ್ಸು, ಸೇವೆ, ಶುಶ್ರೂಷೆಗಳಿಗೆ ಮರಣೋತ್ತರವಾಗಿ ನೀಡಿದ ಭಾರತ ಸರಕಾರದ ಪದ್ಮವಿಭೂಷಣ ಗೌರವ ಶ್ರೇಷ್ಠ ಸಂತನಿಗೆ ಸಂದ ಗೌರವ. ಇದು ಇಡೀ ಉಡುಪಿಯ ಎಲ್ಲಾ ಶ್ರೀ ಕೃಷ್ಣನ ಭಕ್ತರಿಗೆ ಮತ್ತು ಉಡುಪಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.