ಪೌರತ್ವ ಬೆಂಬಲಿಸಿ ಬಿಜೆಪಿ ಮತ್ತು ಆರ್.ಎಸ್.ಎಸ್ ಶಕ್ತಿ ಪ್ರದರ್ಶನ, ಕೇಸರಿಮಯವಾದ ಕಡಲನಗರಿ -Vishwanews24

ಮಂಗಳೂರು: ಪೌರತ್ವ ವಿಚಾರ ಮಂಗಳೂರಿನಲ್ಲಿ ಮತ್ತೆ ಕಿಚ್ಚು ಹಚ್ಚಿದೆ. ಪೌರತ್ವ ಬೆಂಬಲಿಸಿ ಕಡಲನಗರಿಯಲ್ಲಿ ಬಿಜೆಪಿ ಮತ್ತು ಆರ್.ಎಸ್.ಎಸ್ ಶಕ್ತಿ ಪ್ರದರ್ಶನ ಮಾಡಿದೆ. ಇದಕ್ಕಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಖಾಡಕ್ಕೆ ಇಳಿದಿದ್ದರು. ಸಂಘಟನೆಗಳು ಒಟ್ಟಾಗಿ ನಗರದಲ್ಲಿ ಪೌರತ್ವ ಕಾಯ್ದೆಯನ್ನು ಬೆಂಬಲಿಸಿ ಜನ ಜಾಗೃತಿಯ ಕಹಳೆ ಮೊಳಗಿಸಿದ್ದು ಮಾತ್ರವಲ್ಲದೇ, ಕೇಂದ್ರದ ಪರ ಜನ ಒಗ್ಗಟ್ಟಿನ ಮಂತ್ರ ಪಠಿಸಿದ್ದಾರೆ.

ಮೈದಾನದ ತುಂಬಾ ಮೋದಿ ಸೈನಿಕರಂತೆ ಸೇರಿದ ರಣೋತ್ಸಾಹದ ಜನ ಅಬ್ಬರಿಸಿ ಬೊಬ್ಬಿಡುತ್ತಾ ಮೋದಿ ಪರ ಕೂಗು ಮೊಳಗಿಸುತ್ತಾ ಒಗ್ಗಟ್ಟಿನ ಕಹಳೆ ಊದಿದರು. ಜನಜಾಗೃತಿಯ ಕಿಚ್ಚಿಗೆ ಕಡಲನಗರಿ ಒಂದಾದ್ರೆ, ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಬಂದ್ ಆಗಿತ್ತು. ಪೌರತ್ವ ಕಾಯಿದೆ ಬೆಂಬಲಿಸಿ ನಡೆದ ಸಮಾವೇಶಕ್ಕೆ ಕಡಲನಗರಿ ಸ್ತಬ್ಧವಾಗಿ ಹೋಯ್ತು. ಹೌದು. ಪೌರತ್ವ ಕಾಯಿದೆ ಪರವಾದ ಕೂಗು ಮಂಗಳೂರಿನಲ್ಲಿ ಮಾರ್ದನಿಸಿತ್ತು. ಪೌರತ್ವ ವಿರೋಧಿಸಿ ಪ್ರತಿಭಟನೆಗಳನ್ನು ನೋಡಿದ್ದ ಮಂಗಳೂರು, ಪೌರತ್ವ ಪರವಾದ ಶಕ್ತಿ ಪ್ರದರ್ಶನ ಕ್ಕೆ ಸಾಕ್ಷಿಯಾಯಿತು.

ಪೌರತ್ವ ಕಾಯ್ದೆ ವಿಚಾರದಲ್ಲಿ ಹೊತ್ತಿ ಉರಿದು ಗೋಲಿಬಾರಿನಲ್ಲಿ ನಲುಗಿ ಹೋಗಿದ್ದ ಮಂಗಳೂರಿನಲ್ಲಿ ಕೇಂದ್ರ ರಕ್ಷಣಾ ಸಚಿವರ ನೇತೃತ್ವದಲ್ಲಿ ಈ ಜನಜಾಗೃತಿ ಸಮಾವೇಶ ನಡೆದಿತ್ತು. ಮಂಗಳೂರು ನಗರ ಹೊರವಲಯದ ಬಂಗ್ರ ಕುಳೂರು ಗೋಲ್ಡ್ ಫಿಂಚ್ ಸಿಟಿ ಮೈದಾನದ ತುಂಬೆಲ್ಲಾ ಕೇಸರಿ ಕಲಿಗಳು ಒಂದಾಗಿ ಮೋದಿ ಪರ ನಾವಿದ್ದೇವೆ ಅಂತಾ ಸಾಬೀತುಪಡಿಸಿದರು.

ಉರಿಬಿಸಿಲಿನ್ನೂ ಲೆಕ್ಕಿಸದೆ ಸೇರಿದ್ದ ಜನರನ್ನೂ ಸಮಾವೇಶಕ್ಕೆ ಆಗಮಿಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹುಚ್ಚೆಬ್ಬಿಸಿದರು. ಪೌರತ್ವ ಕಾಯಿದೆ ಪರವಾದ ಜನಜಾಗೃತಿ ಮೊಳಗಿಸಿದರು. ಇದೇ ವೇಳೆ ದೇಶದೊಳಗಿರುವ ಅಕ್ರಮ ನುಸುಳುಕೋರರನ್ನು ಓಡಿಸದೇ ಬಿಡಲ್ಲ ಅಂತಾ ರಾಜನಾಥ್ ಸಿಂಗ್ ಗುಡುಗಿದರು.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮೂಲೆ ಮೂಲೆಯಿಂದ ಜನ ಆಗಮಿಸಿದ್ದರು. ಸುಮಾರು 800 ಬಸ್ಸುಗಳಲ್ಲಿ ಜನ ಆಗಮಿಸಿದ್ದರು. ಮೈದಾನದಲ್ಲಿ 5 ಸಾವಿರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಉಡುಪಿ-ಮಂಗಳೂರು ರಸ್ತೆ ಸಂಚಾರದಲ್ಲೂ ಬದಲಾವಣೆ ಮಾಡಲಾಗಿತ್ತು. ಪೌರತ್ವ ವಿರೋಧವನ್ನು ಮಾತ್ರ ಕಂಡಿದ್ದ ಮಂಗಳೂರಿನ ನೆಲ ಇದೇ ಮೊದಲ ಬಾರಿಗೆ ಪೌರತ್ವ ಪರವಾದ ಬೃಹತ್ ಸಮಾವೇಶವನ್ನು ಕಂಡಿತು. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಡಿವಿ ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಕರಾವಳಿಯ ಕೇಸರಿ ಸಂಸದರು, ಶಾಸಕರು ಪೌರತ್ವದ ಪರವಾದ ಕಹಳೆ ಮೊಳಗಿಸಿದರು.

 

Vishwa News 24

Recent Posts

ರೈಲು ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ : ಇಂದಿನಿಂದ IRCTC ಹೊಸ ವೆಬ್‌ಸೈಟ್ ಆರಂಭ – vishwanews24

ರೈಲು ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ ಇಂದಿನಿಂದ IRCTC ಹೊಸ ವೆಬ್‌ಸೈಟ್ ಆರಂಭ: ಇನ್ಮುಂದೆ ಕ್ಷಣಾರ್ಧದಲ್ಲಿ ತತ್ಕಾಲ್ ಟಿಕೆಟ್ ಬುಕಿಂಗ್…

2 hours ago

ಭಟ್ಕಳ: ಬೈಕಿಗೆ  ಲಾರಿ ಢಿಕ್ಕಿ ; ಸವಾರ ಮೃತ್ಯು – vishwanews24

ಭಟ್ಕಳ: ಬೈಕಿಗೆ  ಲಾರಿ ಢಿಕ್ಕಿ ; ಸವಾರ ಮೃತ್ಯು ಭಟ್ಕಳ: ಲಾರಿಯೊಂದು ಬೈಕಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಬೈಕ್…

3 hours ago

ರಾಮಮಂದಿರದ ಹುಂಡಿ ಕಳವು ಪ್ರಕರಣ: ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆಯಾಗಬೇಕು : ಸೊರಕೆ ಆಗ್ರಹ – vishwanews24

ರಾಮಮಂದಿರ ಪ್ರಕರಣವನ್ನು ಪ್ರಧಾನಿಯವರು ಮನ್ ಕಿ ಬಾತ್ ನಲ್ಲಿಯೂ ಉಲ್ಲೇಖಿಸುತ್ತಿಲ್ಲ : ವಿನಯ ಕುಮಾರ್ ಸೊರಕೆ ಮಂಗಳೂರು: ರಾಮಮಂದಿರದ ಹುಂಡಿ…

3 hours ago

ಉಡುಪಿ :  ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ಆಗ್ರಹಿಸಿ ಜುಲೈ 27 ರಂದು ಜಿಲ್ಲಾಧಿಕಾರಿಗೆ ಮನವಿ – vishwanews24

ಉಡುಪಿ :  ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ಆಗ್ರಹಿಸಿ ಜುಲೈ 27 ರಂದು ಜಿಲ್ಲಾಧಿಕಾರಿಗೆ ಮನವಿ ಉಡುಪಿ : ಗೋಮಾತೆ…

3 hours ago

ಬೆಂಗಳೂರು: ಪ್ರಯಾಣಿಕರ ಸೋಗಿನಲ್ಲಿ ಬಂದು ಬಸ್ ನಿರ್ವಾಹಕರ ಬ್ಯಾಗನ್ನೇ ಎಗಿರಿಸಿದ ಮಹಿಳೆ – vishwanews24

ಬೆಂಗಳೂರು: ಪ್ರಯಾಣಿಕರ ಸೋಗಿನಲ್ಲಿ ಬಂದು ಬಸ್ ನಿರ್ವಾಹಕರ ಬ್ಯಾಗನ್ನೇ ಎಗಿರಿಸಿದ ಮಹಿಳೆ ಬೆಂಗಳೂರು: ಬಸ್ ಪ್ರಯಾಣಿಕರ ಸೋಗಿನಲ್ಲಿ ಬಂದು ಅತ್ಯಂತ…

3 hours ago

ನವಿ ಮುಂಬೈ ವಿಮಾನ ನಿಲ್ದಾಣದ ಹೊಸ ಅಧ್ಯಾಯ :  ಮೊದಲ ಅಂತಾರಾಷ್ಟ್ರೀಯ ಸೇವೆಗೆ ಚಾಲನೆ – vishwanews24

ನವಿ ಮುಂಬೈ ವಿಮಾನ ನಿಲ್ದಾಣದ ಹೊಸ ಅಧ್ಯಾಯ :  ಮೊದಲ ಅಂತಾರಾಷ್ಟ್ರೀಯ ಸೇವೆಗೆ ಚಾಲನೆ ಮುಂಬೈ: ನವಿ ಮುಂಬೈ ಅಂತರರಾಷ್ಟ್ರೀಯ…

4 hours ago