ಬಂಟ್ವಾಳ:  ತನ್ನ ಜಮೀನಿನಲ್ಲಿ ಬೆಳೆದ ಅಡಕೆ ಆದಾಯದಿಂದ ಬಸ್‌ ಖರೀದಿಸಿದ ಸರ್ಕಾರಿ ಶಾಲೆ – Vishwanews24

Featured, ದಕ್ಷಿಣ ಕನ್ನಡ

ಬಂಟ್ವಾಳ:  ತನ್ನ ಜಮೀನಿನಲ್ಲಿ ಬೆಳೆದ ಅಡಕೆ ಆದಾಯದಿಂದ ಬಸ್‌ ಖರೀದಿಸಿದ ಸರ್ಕಾರಿ ಶಾಲೆ

ಬಂಟ್ವಾಳ: ತಾಲೂಕಿನ ವಿಟ್ಲ ಸಮೀಪದ ಮಿತ್ತೂರಿನ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತನ್ನ ಜಮೀನಿನಲ್ಲಿ ಬೆಳೆದ ಅಡಕೆ ಮಾರಾಟದಿಂದ ಬಂದ ಆದಾಯದಿಂದ ಶಾಲಾ ಬಸ್ ಖರೀದಿಸಿದೆ.

112 ವರ್ಷಗಳ ಇತಿಹಾಸ ಹೊಂದಿರುವ ಈ ಶಾಲೆಗೆ ನಾಲ್ಕು ಎಕರೆ ಜಮೀನಿದೆ. 2017ರಲ್ಲಿ ಎಸ್ ಡಿಎಂಸಿ, ಶಿಕ್ಷಕರು ಹಾಗೂ ಗ್ರಾಮಸ್ಥರು ಸೇರಿ 628 ಅಡಿಕೆ ಸಸಿಗಳನ್ನು ನೆಟ್ಟಿದ್ದರು. ಈಗ ಇಳುವರಿ ಪಡೆಯುತ್ತಿದ್ದಾರೆ. ಶಾಲೆಯ ಹೊಲವನ್ನು ಹೊರಗುತ್ತಿಗೆ ನೀಡಲಾಗಿದೆ. ಶಾಲೆಗೆ ವಾರ್ಷಿಕ 2.50 ಲಕ್ಷ ಆದಾಯ ಬರುತ್ತದೆ.

ಮಾತಿನಲ್ಲಿ ಹಿಡಿತವಿರಲಿ,ಪರರನ್ನು ಅಗೌರವಿಸಬೇಡಿ..ನೋಡಿ ಇಂದಿನ ದಿನ ಭವಿಷ್ಯ.. ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರಲು ಶಾಲೆಗೆ 26 ಆಸನಗಳ ಬಸ್ ಖರೀದಿಸಲಾಗಿದೆ. ಬಸ್‌ನ ನಿರ್ವಹಣೆಯನ್ನು ಅಡಿಕೆ ತೋಟದ ಆದಾಯದಿಂದಲೇ ಎಸ್‌ಡಿಎಂಸಿ ನಿರ್ವಹಿಸುತ್ತದೆ.

ಶಾಸಕ ಸಂಜೀವ ಮಠಂದೂರು ಇತ್ತೀಚೆಗೆ ಬಸ್ ಸಂಚಾರಕ್ಕೆ ಚಾಲನೆ ನೀಡಿದರು. ಗ್ರಾಮಸ್ಥರು, ಶಾಲಾ ಶಿಕ್ಷಕರು ಹಾಗೂ ಎಸ್‌ಡಿಎಂಸಿಯವರ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶಿರ್ವ: ಮೆಸ್ಕಾಂ ವಾಹನದಿಂದ ಕಾರಿನ ಮೇಲೆ ಬಿದ್ದ ವಿದ್ಯುತ್ ಕಂಬ – Vishwanews24

Leave a Reply