ಬಂಟ್ವಾಳ : ಭಾರತವನ್ನು ಉಳಿಸುವ ಸಲುವಾಗಿ ಹಿಂದೂಗಳು ಒಗ್ಗಟ್ಟಾಗಿ, ಮಹಿಳೆಯರು ಶಸ್ತ್ರ ಹಿಡಿಯಿರಿ : ಸಾಧ್ವಿ ದೇವಿ ಸರಸ್ವತಿ – Vishwanews24
ಬಂಟ್ವಾಳ : ಭಾರತವನ್ನು ಉಳಿಸುವ ಸಲುವಾಗಿ ಹಿಂದೂಗಳು ಒಗ್ಗಟ್ಟಾಗಿ, ಮಹಿಳೆಯರು ಶಸ್ತ್ರ ಹಿಡಿಯಿರಿ : ಸಾಧ್ವಿ ದೇವಿ ಸರಸ್ವತಿ
ಮಂಗಳೂರು : ಲವ್ ಜಿಹಾದ್ ವಿರುದ್ದ ಹೋರಾಡಲು ಕರ್ನಾಟಕದ ಮಹಿಳೆಯರು ಶಸ್ತ್ರ ಧಾರಣೆ ಮಾಡಿ ತಲವಾರ್ ಹಿಡಿಯಬೇಕೆಂದು ಸಾಧ್ವಿ ಸರಸ್ವತಿ ದೇವಿ ಕರೆ ನೀಡಿದ್ದಾರೆ ಬಂಟ್ವಾಳದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಬಜರಂಗಳ ದಿಂದ ಶೌರ್ಯಜಾಗರಣ ರಥ ಯಾತ್ರೆ ಮಾತನಾಡಿದ ಅವರು ಕರ್ನಾಟಕದಲ್ಲಿ ಲವ್ ಜಿಹಾದ್ ವಿರುದ್ದ ಹೋರಾಡಲು ಮಹಿಳೆಯರು ಶಸ್ತಧಾರಣೆ ಮಾಡಬೇಕು ಎಂದರು.
ದೇಶ ಟಿಪ್ಪು ಸುಲ್ತಾನ್ ಔರಂಗಜೇಬನ ಭೂಮಿ ಅಲ್ಲ ಇದು ರಾಮನ, ಭೂಮಿ ಕೃಷ್ಣನ ಭೂಮಿ , ಹನುಮಾನ್ ಜನಿಸಿದ ಭೂಮಿ, ಮಹಾರಾಣಾ ಪ್ರತಾಪ್ ಛತ್ರಪತಿ ಶಿವಾಜಿ ಮಾಹಾರಾಜರ ಭೂಮಿ, ಕರ್ನಾಟಕದಲ್ಲಿರ ಬೇಕಾದರೆ ರಹೀಮ್ ರಸ್ತಾನ್ ಗಳಾಗಿ ಇರಬೇಕು, ಒಂದು ವೇಳೆ ಟಿಪ್ಪುಸುಲ್ತಾನ್ ಔರಂಗಜೇಬ್ ಆಗಲು ಹೊರಟರೆ ಅಂತವರ ಅಸ್ತಿತ್ವವೇ ನಾಶ ವಾಗುತ್ತದೆ ಎಂದ ಅವರು ಹೇಳಿದರು,
ಇಂದಿನಿಂದ ನವೆಂಬರ್ ಕೊನೆಯವರೆಗೆ ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಪ್ರವೇಶಕ್ಕೆ ತಾತ್ಕಾಲಿಕ ನಿಷೇಧ – Vishwanews24
ಮಿಲಾದ್ ಆಚರಣೆ ವೇಳೆ ಶಿವಮೊಗ್ಗ ದಲ್ಲಿ ಟಿಪ್ಪು ಸುಲ್ತಾನ, ಔರಂಗಜೇಬನ ಕಟೌಟ್ ಹಾಕಲಾಗಿದ್ದು, ಅಂತಹ ಕೃತ್ಯಗಳನ್ನು ಮಟ್ಟ ಹಾಕಬೇಕಿದೆ. ನಾವು ಅಬ್ದುಲ್ ಕಲಾಂರಂತಹ ಮುಸ್ಲಿಮರನ್ನು ಗೌರವಿಸುತ್ತೇವೆಯೇ ವಿನಃ ಟಿಪ್ಪು, ಬಾಬರ್, ಔರಂಗಜೇಬನಂತಹವರನ್ನಲ್ಲ. ರಾಜರಾಜೇಶ್ವರಿಯು ಚಂಡಮುಂಡ ರನ್ನು ಚೆಂಡಾಡಿದಂತೆ ಮಾತೆಯರು ಶಸ್ತ್ರಧಾರಿಗಳಾಗಿ ಲವ್ ಜೆಹಾದ್ನಂತಹ ಕೃತ್ಯಗಳಿಂದ ಹಿಂದೂ ಧರ್ಮವನ್ನು ರಕ್ಷಣೆ ಮಾಡಬೇಕಿದೆ ಎಂದು ಸಾಧ್ವಿ ದೇವಿ ಸರಸ್ವತಿ ಜೀ ಹೇಳಿದರು.
ಹಿಂದೂ ಧರ್ಮದಲ್ಲಿ ಜಾತಿ ವ್ಯವಸ್ಥೆಗೆ ಅವಕಾಶವಿಲ್ಲ ನಾವೆಲ್ಲರೂ ಹಿಂದೂಗಳು, ಜಾತಿ ವ್ಯವಸ್ಥೆಯಲ್ಲಿ ನಾವು ಬೇರ್ಪಡಬಾರದು. ನಮ್ಮೊಡನೆ ಇದ್ದು ಈಗ ಒಗ್ಗಟ್ಟಾಗಿ ಭೀತಿ ಹುಟ್ಟಿಸುತಿದ್ದಾರೆ ಇದಕ್ಕೆ ಶಿವಮೊಗ್ಗದಲ್ಲಿ ನಡೆದ ಘಟನೆ ಇದಕ್ಕೆ ಸಾಕ್ಷಿ. ಹಿಂದೂಗಳ ಅಸ್ತಿತ್ವ ವನ್ನು ಕೆಣಕಿದರೆ ಇಡೀ ಸಮುದಾಯವ ನಾಶ ಮಾಡುವ ತಾಕತ್ತು ಹಿಂದೂಗಳಿಗಿದೆ ನೆನಪಿರಲಿ ಎಂದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಜಗದೀಶ್ ಶೆಟ್ಟರ್ ಭೇಟಿ – Vishwanews24
