ಬಂಟ್ವಾಳ: ಶಾಸಕ ಹರೀಶ್ ಪೂಂಜಾ ಕೊಲೆ ಯತ್ನ ಪ್ರಕರಣ ; ಸಿಐಡಿ ತನಿಖೆ ಆರಂಭ – Vishwanews24

Featured, ದಕ್ಷಿಣ ಕನ್ನಡ

ಬಂಟ್ವಾಳ: ಶಾಸಕ ಹರೀಶ್ ಪೂಂಜಾ ಕೊಲೆ ಯತ್ನ ಪ್ರಕರಣ ; ಸಿಐಡಿ ತನಿಖೆ ಆರಂಭ

ಬಂಟ್ವಾಳ: ಶಾಸಕ ಹರೀಶ್ ಪೂಂಜಾ ಅವರ ಕೊಲೆ ಯತ್ನ ಪ್ರಕರಣದ ಬಗ್ಗೆ ಬಂಟ್ವಾಳದಲ್ಲಿ ಸಿ.ಐ.ಡಿ.ಪೋಲೀಸರು ತನಿಖೆ ಆರಂಭಿಸಿದ್ದಾರೆ.

ಕೆಲ ದಿನಗಳ ಹಿಂದೆ ನಡೆದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಗಾಗಿ ರಾಜ್ಯದ ಸಿ.ಐ.ಡಿ.ಪೋಲೀಸರಿಗೆ ಕಡತಗಳನ್ನು ನೀಡಲಾಗಿತ್ತು. ರಾಜ್ಯದ ಸಿ.ಐ.ಡಿ.ಇನ್ಸ್ ಪೆಕ್ಟರ್ ಶಿವರಾಜ್ ನೇತ್ರತ್ವದ ಓರ್ವ ಎಸ್.ಐ.ಹಾಗೂ ಎರಡು‌‌‌ ಸಿಬ್ಬಂದಿಗಳ ತಂಡ ಅ.19 ರಂದು ಬೆಳಿಗ್ಗೆ ಬಂಟ್ವಾಳಕ್ಕೆ ಬಂದಿಳಿದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಡ್ಯಾರು ನಿವಾಸಿ ರಿಯಾಜ್ ಎಂಬಾತ ಆರೋಪಿಯಾಗಿದ್ದು ಈತನನ್ನು ಬಂಧಿಸಲಾಗಿತ್ತು.

ಬುದ್ಧಿವಂತಿಕೆಯಿಂದ ಆರ್ಥಿಕ ಬೆಳವಣಿಗೆ.. ನೋಡಿ ಇಂದಿನ ದಿನ ಭವಿಷ್ಯ :- Vishwanews24

‌ಅ.18 ರಂದು ಮಂಗಳವಾರ ಈ ಪ್ರಕರಣದ ಸಂಪೂರ್ಣ ಫೈಲ್ ಗಳನ್ನು ಬಂಟ್ವಾಳ ಗ್ರಾಮಾಂತರ ಎಸ್.ಐ.ಹರೀಶ್ ‌ಅವರು ಬೆಂಗಳೂರು ‌ಕಚೇರಿಗೆ ಮುಟ್ಟಿಸಿದ್ದರು. ಇದೀಗ ಸಿ.ಐ.ಡಿ.ಪೋಲೀಸರು ತನಿಖೆ ಆರಂಭಿಸಿ ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿ ಆರೋಪಿಯನ್ನು ಸಿ.ಐ.ಡಿ.ನ್ಯಾಯಾಲಯಕ್ಕೆ ‌ಹಾಜರಾಗುವಂತೆ ನೋಟೀಸ್ ‌ಜಾರಿ ಮಾಡುವ ಸಾಧ್ಯತೆಗಳಿವೆ.

Leave a Reply