ಬೆಂಗಳೂರು: ಮುಸ್ಲಿನರು ಓಡಿ ಹೋಗಬೇಕು ಅಂತ ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ನೇಹಾ ಹಿರೇಮಠ ಹತ್ಯೆ ಖಂಡಿಸಿ ಬಿಜೆಪಿ ಪ್ರತಿಭಟನೆ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ವ ಜನಾಂಗದ ಶಾಂತಿಯ ತೋಟ ನಮ್ಮದು. ಇವರ ಕೈಯಲ್ಲಿ ಸಂವಿಧಾನ ಬದಲಾವಣೆ ಮಾಡೋಕೆ ಆಗುತ್ತಾ..?. ಸಂವಿಧಾನದಲ್ಲಿ ಎಲ್ಲರಿಗೂ ಹಕ್ಕಿದೆ. ಹಾಗಂತ ಕ್ರಿಮಿನಲ್ ಗಳಿಗೆ ಅಂಥಹ ಪ್ರಕರಣಗಳಿಗೆ ನಾವು ರಕ್ಷಣೆ ಕೊಡಲ್ಲ. ಯಾರಿಗೂ ನಾವು ಅಂತಹ ಘಟನೆಗಳಿಗೆ ಅವಕಾಶ ಕೊಡಲ್ಲ. ಈ ರಾಜ್ಯ ಶಾಂತಿಯಿಂದ ಇದೆ ಎಂದರು.
ಇದೇ ವೇಳೆ ಬಿಜೆಪಿ (BJP) ಜಾಹೀರಾತು ವಿಚಾರಕ್ಕೆ ಪ್ರತಿಕ್ರಿಯಿಸಿ, ಸದ್ಯ ಅಷ್ಟು ಎಚ್ಚರಿಕೆ ಆಗಿದೆಯಲ್ವಾ ಅಷ್ಟು ಸಾಕು. ಖಾಲಿ ಚೊಂಬು ಇಟ್ಟುಕೊಂಡು ಗೌರವಾನ್ವಿತ ದೇವೇಗೌಡರು ಮೋದಿಗೆ ಹೇಳಿದ್ದಾರೆ. ನಿಮ್ಮಿಂದ ಇಂಥ ಅನ್ಯಾಯ ಆಯ್ತು. ನೀವು ನಮಗೆ ಚೊಂಬು ಕೊಟ್ಬಿಟ್ರಿ, ನಮಗೆ ಮಾತಾಡೋಕೆ ಶಕ್ತಿ ಇಲ್ಲದ ಹಾಗೆ ಆಗಿದೆ ಅಂದಿದ್ದಾರೆ. ಸಾರ್ವಜನಿಕವಾಗಿ ಏನು ಬೇಕಾದ್ರೂ ಮಾತಾಡಲಿ. ಆದರೆ ಹಿಂದೆಯಲ್ಲ ಕುಮಾರಸ್ವಾಮಿ ದೇವೇಗೌಡರು ಅವರೇ ಅನ್ಯಾಯ ಅಗಿದೆ ಅಂತ ಭಾಷಣ ಮಾಡಿದ್ರಲ್ವಾ?. ನಾವು ಈಗ ಮೋದಿಗೆ ಪ್ರಶ್ನೆ ಕೇಳಿದ್ದೇವೆ ಅಷ್ಟೆ. ಆದರೆ ಜನ ಎಲ್ಲದನ್ನೂ ನೋಡ್ತಾ ಇದ್ದಾರೆ ಅವರೇ ಡಿಸೈಡ್ ಮಾಡ್ತಾರೆ. ಪ್ರಜ್ಞೆ ನಾಗರೀಕರಿಗೆ ಇದೆ ಎಂದರು.
ಸಿದ್ದರಾಮಯ್ಯ, ನಾನು ಕಾಂಗ್ರೆಸ್ ನಾಯಕರು 15 ಲಕ್ಷ ಚೊಂಬಲ್ಲಿ ಬಂದಿದ್ಯಾ ಅಂತ ಪ್ರಶ್ನೆ ಮಾಡ್ತಾ ಇದ್ದೇವೆ. ನೌಕರಿ ಕೊಟ್ಟಿದ್ದಾರಾ..? ಏನು ಮಾಡಿದ್ದಾರೆ ಅವರೇ ಹೇಳಲಿ. ಈಗ ಕರ್ನಾಟಕಕ್ಕೆ ಖಾಲಿ ಚೊಂಬು ತಾನೇ ಇವರು ಕೊಟ್ಟಿರೋದು. ಕನ್ನಡ ಸ್ವಾಭಿಮಾನ ಎತ್ತಿ ಹಿಡಿದವರು ನಾವು.ನಮ್ಮ ಹಕ್ಕು ಕೇಳಿರುವವರು ನಾವು ಎಂದು ವಾಗ್ದಾಳಿ ನಡೆಸಿದರು.
ಧರ್ಮಸ್ಥಳ ಪ್ರಕರಣ : ವಿಠಲ್ ಗೌಡ ವಿರುದ್ಧ ಅರೆಸ್ಟ್ ವಾರಂಟ್: ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…
ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ ಬೆಂಗಳೂರು: ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ಮಾಪಕ ಬಾ.ಮಾ.…
ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…
ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…
ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…
ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…