ಬಿಜೆಪಿ ಅಧಿಕಾರಕ್ಕೆ ಬಂತೆಂದು ಮುಸ್ಲಿಂಮರು ಗಾಬರಿಯಾಗಬೇಡಿ : ಓವೈಸಿ -Vishwanews24
ಹೈದರಾಬಾದ್: ಕೇಂದ್ರದಲ್ಲಿ ಮತ್ತೇ ಬಿಜೆಪಿ ಪಕ್ಷ ಸರ್ಕಾರಕ್ಕೆ ಬಂತೆಂದು ಮುಸ್ಲಿಂ ಬಾಂಧವರು ಚಿಂತಿಸಬೇಡಿ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ರಾರ್ಥನೆ ಸಲ್ಲಿಸಲು ಗುಹೆಯೊಳಗೆ , ದೇವಸ್ಥಾನಕ್ಕೆ ಹೋದರೆ ಮುಸ್ಲಿಂಮರು ಮಸೀದಿಗೆ ತೆರಳಿ ನಮಾಜ್ ಮಾಡುವ ಹಕ್ಕಿದೆ.
ಸರ್ಕಾರದಲ್ಲಿದ್ದುಕೊಂಡು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 300ಸ್ಥಾನ ಪಡೆಯುವುದು ದೊಡ್ಡ ವಿಷಯವಲ್ಲ. ಬಿಜೆಪಿಯ ಪಡೆದ 300 ಸ್ಥಾನ ನಮ್ಮ ಹಕ್ಕನ್ನು ಕಿತ್ತೆಸೆಯಳು ಸಾಧ್ಯವಿಲ್ಲ ಎಂದರು
ಪ್ರಧಾನಿ ನರೇಂದ್ರ ಮೋದಿ ದೇವಸ್ಥಾನಕ್ಕೆ ಹೋಗಬಹುದು ಎಂದಾದರೆ ಮುಸ್ಲಿಮರು ಮಸೀದಿಗೆ ಹೆಮ್ಮೆಯಿಂದ ಭೇಟಿ ನೀಡಬಹುದು ಎಂದು ಓವೈಸಿ ಹೇಳಿದ್ದಾರೆ.
ಶ್ರೀಲಂಕಾದಲ್ಲಿ ನಡೆದ ಸರಣಿ ಆತ್ಮಾಹುತಿ ಬಾಂಬ್ ದಾಳಿಯನ್ನು ವಿರೋಧಿಸಿ ಹೇಳಿಕೆ ನೀಡಿದ ಓವೈಸಿ, ಇಂತಹ ನಡೆಯನ್ನು ಇಸ್ಲಾಮ್ ಸ್ವೀಕರಿಸುವುದಿಲ್ಲ. ಉಗ್ರ ಕೃತ್ಯ ನಡೆಸುತ್ತಿರುವವರು ಇಸ್ಲಾಮ್ ಹಿಂಬಾಲಕರಲ್ಲ. ಅವರು ದೆವ್ವದ ಹಿಂಬಾಲಕರು ಎಂದು ಓವೈಸಿ ಹೇಳಿದ್ದಾರೆ.
