ಬಿಜೆಪಿ ಅಭ್ಯರ್ಥಿ ಲಾಲಾಜಿ ಮೆಂಡನ್‌ ಪರ ಪ್ರಚಾರ ರಥ ಯಾತ್ರೆಗೆ ಚಾಲನೆ

Featured, ಉಡುಪಿ

ಕಾಪು: ಕೇಂದ್ರದ ಮೋದಿ ಸರಕಾರದ ಸಾಧನೆಯನ್ನು ಬಿಂಬಿಸುತ್ತಾ, ಕಾಪು ಕ್ಷೇತ್ರ ಬಿಜೆಪಿ ಅಭ್ಯರ್ಥಿ ಲಾಲಾಜಿ ಆರ್‌. ಮೆಂಡನ್‌ ಪರವಾಗಿ ಕ್ಷೇತ್ರಾದ್ಯಂತ ಸಂಚರಿಸಲಿರುವ ಚುನಾವಣಾ ಪ್ರಚಾರ ರಥ ಯಾತ್ರೆಗೆ ಬುಧವಾರ ಸಂಜೆ ಚಾಲನೆ ನೀಡಲಾಯಿತು.

ಯಾತ್ರೆಗೆ ಚಾಲನೆ ನೀಡಿದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಗುರ್ಮೆ ಸುರೇಶ್‌ ಶೆಟ್ಟಿ ಮಾತನಾಡಿ, ಕಾಪು ಕ್ಷೇತ್ರದ ಜನತೆ ಬದಲಾವಣೆ ಬಯಸುತ್ತಿದ್ದಾರೆ. ಬಿಜೆಪಿಯಿಂದ ಕಾಂಗ್ರೆಸ್‌ ಕೈಗೆ ನೀಡಿದ ಅಧಿಕಾರ ಮತ್ತೆ ಬಿಜೆಪಿಯ ಕೈಗೆ ಮರಲಿದೆ. ಬಿಜೆಪಿಯ ಗೆಲುವಿನೊಂದಿಗೆ ಕಾಂಗ್ರೆಸ್‌ ಅಭ್ಯರ್ಥಿಯನ್ನು ಮರಳಿ ಪುತ್ತೂರಿಗೆ ಕಳುಹಿಸಲು ಕಾರ್ಯಕರ್ತರ ತಂಡ ಸಿದ್ಧವಾಗಿದೆ ಎಂದರು.

ಬಿಜೆಪಿ ಕ್ಷೇತ್ರಾಧ್ಯಕ್ಷ ಪ್ರಕಾಶ್‌ ಶೆಟ್ಟಿ ಮಾತನಾಡಿ, ಕೇಂದ್ರದ ಮೋದಿ ಸರಕಾರದ ಸಾಧನೆ ಮತ್ತು ರಾಜ್ಯ ಕಾಂಗ್ರೆಸ್‌ ಸರಕಾರದ ವೈಫಲ್ಯವನ್ನು ಜನರಿಗೆ ತಿಳಿಸುತ್ತಾ ಕ್ಷೇತ್ರಾದ್ಯಂತ ಸಂಚರಿಸಲಿರುವ ಪ್ರಚಾರ ರಥಯಾತ್ರೆಯು ಜನರಲ್ಲಿ ಸಂಚಲನ ಮೂಡಿಸಲಿದೆ. ಆ ಮೂಲಕ ಬಿಜೆಪಿಗೆ ಹೆಚ್ಚಿನ ಜನಬೆಂಬಲ ದೊರಕಿಸಿಕೊಡಲಿದೆ ಎಂದರು.

ಬಿಜೆಪಿ ಅಭ್ಯರ್ಥಿ / ಮಾಜಿ ಶಾಸಕ ಲಾಲಾಜಿ ಆರ್‌. ಮೆಂಡನ್‌ ಮಾತನಾಡಿ, ಕಾಪು ಕ್ಷೇತ್ರದ ಕಾಂಗ್ರೆಸ್‌ ಶಾಸಕರ ದುರಾಡಳಿತ ಮತ್ತು ಪಕ್ಷ ಮತ್ತು ದ್ವೇಷದ ರಾಜಕೀಯದಿಂದಾಗಿ ಜನತೆ ಬೇಸತ್ತಿದಾರೆ. ಉಡುಪಿಯಲ್ಲಿ ಮಂಗಳವಾರ ನಡೆದ ಪ್ರಧಾನ ಮೋದಿಯವರ ಕಾರ್ಯಕ್ರಮ ಕಾರ್ಯಕರ್ತರಲ್ಲಿ ಮತ್ತಷ್ಟು ಉತ್ಸಾಹವನ್ನು ಮೂಡಿಸಿದೆ. ಕಾಪುವಿನಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಪ್ರತಿಯೋರ್ವರೂ ಪ್ರತಿಜ್ಞೆ ಸೀÌಕರಿಸ ಬೇಕಿದೆ ಎಂದರು.

ಬಿಜೆಪಿ ಜಿಲ್ಲಾ ವಕ್ತಾರ ಕಟಪಾಡಿ ಶಂಕರ ಪೂಜಾರಿ, ಮುಖಂಡರಾದ ಗಂಗಾಧರ ಸುವರ್ಣ, ರಥ ಯಾತ್ರೆ ಉಸ್ತುವಾರಿ ನಾಗರಾಜ ಶೆಟ್ಟಿ, ಪ್ರಸಾದ್‌ ಶೆಟ್ಟಿ ಕುತ್ಯಾರು, ಜೆರಾಲ್ಡ್‌ ಫೆರ್ನಾಂಡಿಸ್‌, ಇಂದಿರಾ ಲಾಲಾಜಿ ಮೆಂಡನ್‌, ಕೇಸರಿ ಯುರಾಜ್‌, ಸುಮಾ ಯು. ಶೆಟ್ಟಿ, ಮಮತಾ ಸಾಲ್ಯಾನ್‌, ಪ್ರಸಾದ್‌ ಶೆಟ್ಟಿ ಎರ್ಮಾಳು, ಸಚಿನ್‌ ಬೊಳೆj, ನಝೀರ್‌ ಶೇಖ್‌, ನವೀನ್‌ ಎಸ್‌.ಕೆ., ನವೀನ್‌ ಅಮೀನ್‌ ಮೊದಲಾದವರು ಉಪಸ್ಥಿತರಿದ್ದರು.