ಬಿಜೆಪಿ – ಜೆಡಿಎಸ್ ವಿಲೀನ : ಕೇವಲ ವದಂತಿ , ಇದು ಸತ್ಯಕ್ಕೆ ದೂರವಾದ ವಿಚಾರ : ಸಿಎಂ ಬಿಎಸ್‌ವೈ -Vishwanews24

Featured, ರಾಜ್ಯ ನ್ಯೂಸ್

ಬಿಜೆಪಿ – ಜೆಡಿಎಸ್ ವಿಲೀನ : ಕೇವಲ ವದಂತಿ , ಇದು ಸತ್ಯಕ್ಕೆ ದೂರವಾದ ವಿಚಾರ : ಸಿಎಂ ಬಿಎಸ್‌ವೈ -Vishwanews24

ಬೆಂಗಳೂರು,: “ಭಾರತೀಯ ಜನತಾ ಪಕ್ಷದಲ್ಲಿ ಜೆಡಿಎಸ್‌ ಪಕ್ಷವನ್ನು ವಿಲೀನಗೊಳಿಸುವ ವಿಚಾರ ಕೇವಲ ವದಂತಿಯಾಗಿದೆ. ಇದು ಸತ್ಯಕ್ಕೆ ದೂರವಾದ ಸಂಗತಿ” ಎಂದು ಸಿಎಂ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ಈ ವಿಚಾರವಾಗಿ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಸಿಎಂ, “ವಿಧಾನ ಪರಿಷತ್‌‌‌ ಸಭಾಪತಿಗಳ ವಿಚಾರದಲ್ಲಿ ಜೆಡಿಎಸ್ ನಾಯಕ ಹೆಚ್‌‌.ಡಿ.ಕುಮಾರಸ್ವಾಮಿ ಅವರು ನಮ್ಮ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ. ಆದರೆ, ಬಿಜೆಪಿಯೊಂದಿಗೆ ಜೆಡಿಎಸ್‌ ವಿಲೀನ ಅಥವಾ ಬಿಜೆಪಿಗೆ ಬರುವಂತ ವಿಚಾರದ ಸುಳ್ಳು” ಎಂದಿದ್ದಾರೆ.

“ಹೆಚ್‌.ಡಿ.ಕುಮಾರಸ್ವಾಮಿ ಅವರು ನಮಗೆ ಪರಿಷತ್‌‌ನ ಸಭಾಪತಿ ವಿಚಾರದಲ್ಲಿ ಬೆಂಬಲ ನೀಡಿದ್ದಾರೆ. ಬದಲಾಗಿ ಬೇರೆನೂ ಇಲ್ಲ. ಅಲ್ಲದೇ, ಅವರು ಗೋಹತ್ಯೆ ನಿಷೇಧದ ವಿಚಾರಕ್ಕೆ ನಮ್ಮ ಬೆಂಬಲವಿಲ್ಲ ಎಂದು ತಿಳಿಸಿದ್ದರು. ಈ ನಿಟ್ಟಿನಲ್ಲಿ ನಾವು ಸುಗ್ರೀವಾಜ್ಞೆಯ ಮೂಲಕ ಗೋಹತ್ಯೆ ನಿಷೇಧ ಅನುಷ್ಠಾನಕ್ಕೆ ತರುತ್ತಿದ್ದೇವೆ” ಎಂದು ತಿಳಿಸಿದ್ದಾರೆ.

“ವಿಧಾನಸಭೆ ಚುನಾವಣೆಗೆ ಇನ್ನು ಎರಡೂವರೆ ವರ್ಷ ಇದೆ. ಬಿಜೆಪಿ ಹಾಗೂ ಜೆಡಿಎಸ್‌ ವಿಲೀನ ವಿಚಾರವಾಗಿ ಮಾಧ್ಯ,ಗಳಲ್ಲಿ ಬರುತ್ತಿರುವ ಸುದ್ದಿಗಳು ಸುಳ್ಳು” ಎಂದು ಸಿಎಂ ಸ್ಪಷ್ಟನೆ ನೀಡಿದ್ದಾರೆ.