ಬಿಜೆಪಿ ಮುಖಂಡ ಗಂಗಾಧರ ಸುವರ್ಣ ದಂಪತಿಗಳಿಂದ 360 ಕುಟುಂಬಗಳಿಗೆ ಪಡಿತರ ಕಿಟ್ ಮತ್ತು ಅಕ್ಕಿ ವಿತರಣೆ.vishwanews24

Featured, ರಾಜ್ಯ ನ್ಯೂಸ್

ಬಿಜೆಪಿ ಮುಖಂಡ ಗಂಗಾಧರ ಸುವರ್ಣ ದಂಪತಿಗಳಿಂದ 360 ಕುಟುಂಬಗಳಿಗೆ ಪಡಿತರ ಕಿಟ್ ಮತ್ತು ಅಕ್ಕಿ ವಿತರಣೆ.

ಕಾಪು: ಬಿಜೆಪಿ‌ ಮುಖಂಡ ಗಂಗಾಧರ ಸುವರ್ಣ ಮತ್ತು ಅವರ ಧರ್ಮಪತ್ನಿ‌ ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯೆ ಶಿಲ್ಪಾ ಜಿ‌ ಸುವರ್ಣ ಇವರು ಭಾರತ ಲಾಕ್ಡೌನ್ ಸಮಸ್ಯೆಯಿಂದ ಬಳಲುತ್ತಿದ್ದ ಸುಮಾರು 360 ಬಡ ಕುಟುಂಬಗಳಿಗೆ ಇದುವರೆಗೆ ಪಡಿತರ ಕಿಟ್ ಮತ್ತು ಅಕ್ಕಿಯನ್ನು ವಿತರಿಸಿ ಸಹಕರಿಸಿದ್ದಾರೆ.

ಈ ಬಗ್ಗೆ ವಿಶ್ವನ್ಯೂಸ್24 ಬಳಿ‌ ಮಾತಾಡಿದ ಗಂಗಾಧರ ಸುವರ್ಣ ” ದೇವರ ಸೇವೆ ಎಂಬ ದೃಷ್ಟಿಯಿಂದ ಯಾವುದೇ ದಾನಿಗಳ ಸಹಕಾರ ಪಡೆಯದೆ ವೈಯಕ್ತಿಕವಾಗಿ ಕಾಪು ಭಾಗದ ರಿಕ್ಷಾ ಚಾಲಕರಿಗೆ,ಎಲ್ಲೂರು ಜಿಲ್ಲಾ ಪಂಚಾಯತ್ ವ್ಯಾಪ್ತಿ,ಕಾಪು ಪುರಸಭಾ ವ್ಯಾಪ್ತಿ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ನಮ್ಮಿಂದಾಗುವ ಸೇವೆ ಮಾಡಿದ್ದೇವೆ ಮುಂದಿನ ದಿನದಲ್ಲಿಯೂ ಇಂತಹ ಪರಿಸ್ಥಿತಿ ಎದುರಾದರೆ ಸಹಕರಿಸಲು ಸಿದ್ದ ಆದರೆ ಕೊರೋನಾದಂತಹ ತುರ್ತು ಪರಿಸ್ಥಿತಿ ಬಾರದಿದರಲಿ ಎಂಬುದಷ್ಟೆ ಪ್ರಾರ್ಥನೆ ಸಲ್ಲಿಸಬೇಕು ಎಂದರು.